ಸಿಂದಗಿ: ತಾಲೂಕಿನ ಹೊನ್ನಳ್ಳಿ ಗ್ರಾಮದ 9 ವರ್ಷದ ಬಾಲಕನ ಶವ ಯರಗಲ್ ಹತ್ತಿರದ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ: ಬಾಲಕ ಕಾಲುವೆಗೆ ಬಿದ್ದ ಘಟನೆ ಭಾನುವಾರ ನಡೆಡಿದ್ದು. ತಾಯಿ ಬಟ್ಟೆ ತೊಳೆಯಲು ಹೋದಾಗ ಬಾಲಕ ಸಿದ್ದಪ್ಪ ದೇವೇಂದ್ರ ಹುಣಶ್ಯಾಳ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಮನೆಗೆ ಹೋಗು ಎಂದು ತಾಯಿ ಹೇಳಿದರೂ ಕೇಳದೆ ಈಜುತ್ತೇನೆಂದು ಕಾಲುವಿಗೆ ಜಿಗಿದಿದ್ದಾನೆ ಎಂದು ಹೇಳಲಾಗುತ್ತಿದ್ದು,
ಹೊನ್ನಳ್ಳಿ ಗ್ರಾಮದ ದೇವೇಂದ್ರ ಹುಣಶ್ಯಾಳ ಹಾಗೂ ಲಲಿತಾ ಎಂಬುವರ ಏಕೈಕ ಮಗನಾಗಿದ್ದಾನೆ. ಈ ದಂಪತಿಗೆ ಐವರು ಪುತ್ರಿಯರಿದ್ದಾರೆ. ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಈ ಅನಾಹುತ ನಡೆದಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ
.ಅಗ್ನಿಶಾಮಕ ಸಿಬ್ಬಂದಿ ನಿರಂತರ ಶೋಧ ಕಾರ್ಯ ನಡೆಸಿ ಕಳೆದ ಎರಡ್ಮೂರು ದಿನಗಳಿಂದ ಮಳೆಯಾಗಿದ್ದು ನೀರಿನ ಹರಿವು ಹೆಚ್ಚಾಗಿ ಇರುವುದರಿಂದ ಬಾಲಕನ ಪತ್ತೆ ಕಾರ್ಯ ತುಂಬಾ ಕಷ್ಟವಾಗಿದೆ ಎಂದು ತಿಳಿಸಿದ್ದರು.
ಕೊನೆಗೆ ಯರಗಲ್ಲ ಹತ್ತಿರದ ಕಾಲುವೆಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು. ಬಾಲಕನ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ವರದಿ: ದಾವಲಸಾಬ ಬನ್ನೆಟ್ಟಿ

error: Content is protected !!