Latest

ಪೂರ್ಣಗೊಳ್ಳದ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ: ಆತಂಕದಲ್ಲಿ ವಿದ್ಯಾರ್ಥಿಗಳು

ಪಟ್ಟಣದ “ವಿಜಡಂ ವಿಂಗ್ಸ್ ಇಂಗ್ಲಿಷ್ ಮೀಡಿಯಂ ಶಾಲೆ”ಯ ವಿದ್ಯಾರ್ಥಿಗಳನ್ನು ಇಟಿಗಿ ರಸ್ತೆಯಲ್ಲಿ ಭಾಗಶಃ ಹಂತದಲ್ಲಿರುವ ಕಟ್ಟಡದಲ್ಲಿ ಆಡಳಿತ ಮಂಡಳಿ ತರಗತಿ ಪ್ರಾರಂಭಿಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಕಟ್ಟಡದ ಮೂರನೇ ಮಹಡಿ ಕೆಲಸ ನಡೆಯುತ್ತಿದ್ದು ಅದರ ಕೆಳಗೆ ವಿದ್ಯಾರ್ಥಿಗಳ ಆಟ,ಪಾಠ ನಡೆಯುತ್ತಿದೆ.ಮಕ್ಕಳ ಜೀವದ ಮೇಲೆ ಚಲ್ಲಾಟ ಆಡುವ ರೀತಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ.ಈ ವ್ಯವಸ್ಥೆಯನ್ನು ಅವಲೋಕಿಸಿರುವ ಪೋಷಕರಲ್ಲಿ ಭಯ ಆತಂಕ ಆವರಿಸಿದೆ.

ಕಟ್ಟಡ ಕೆಲಸ ಬಾಕಿ ಇರುವಾಗಲೇ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿರುವುದು ಆಡಳಿತ ಸಂಸ್ಥೆಯ ಬೇಜವಾಬ್ದಾರಿ ಎತ್ತಿ ತೋರುತ್ತಿದೆ ಎನ್ನುವ ಆರೋಪ ಪೋಷಕರದ್ದು.

ಸರಿಯಾದ ಮೈದಾನವಿಲ್ಲದೆ ಕಲ್ಲು ಕಸದಲ್ಲಿ,ಕಟ್ಟಡ
ಚಟುವಟಿಕೆಗಳನ್ನು ಕೈಗೊಂಡಿರುವ ಅವ್ಯವಸ್ಥೆಯಲ್ಲಿ ಕಲಿಕೆಯನ್ನು ಪ್ರಾರಂಭಿಸಿ ಮಕ್ಕಳ ಭವಿಷ್ಯಕ್ಕೆ ಅಪಾಯ ತಂದೊಡ್ಡುವ ನಿಟ್ಟಿನೊಳೆಗೆ ಆಡಳಿತ ಮಂಡಳಿ ಮುಂದಾಗಿದೆ,ಮಕ್ಕಳ ಭವಿಷ್ಯಕ್ಕಿಂತ ತಮ್ಮ ಶಾಲೆಯ ಕಟ್ಟಡ ಕಟ್ಟುವಂತದ್ದು ಈ ಶಿಕ್ಷಣ ಸಂಸ್ಥೆಗೆ ಪ್ರತಿಷ್ಠೆಯಾಗಿದೆ ಎಂಬ ಆಕ್ರೋಶ ಪೋಷಕರದ್ದು.

ಇಂತಹ ಅವ್ಯವಸ್ಥೆಯಲ್ಲಿ ತರಗತಿಗಳು ಪ್ರಾರಂಭಗೊಂಡಿದ್ದರು ಇಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿಕುಳಿತಿರುವುದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯತೆಗೆ ಇಡಿದ ಕೈಗನ್ನಡಿ ಇದಾಗಿದೆ ಎಂಬ ಅಭಿಪ್ರಯ ಪ್ರಜ್ಞಾವಂತ ನಾಗರಿಕರದ್ದು.

ಅವಘಡ ಸಂಭವಿಸುವ ಮುನ್ನ ಶೀಘ್ರ ಸಂಬಂದ ಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು. ವರದಿ :ಮಣಿಕಂಠ ಬಿ

nazeer ahamad

Recent Posts

ಆಂಧ್ರ ಸಚಿವರ ಸಹೋದರದಿಂದ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್‌ಗೆ ಹಲ್ಲೆ: ವೈರಲ್ ವಿಡಿಯೋ ನಂತರ ಭಾರಿ ಚರ್ಚೆ

ನಂದ್ಯಾಲ್ (ಆಂಧ್ರಪ್ರದೇಶ), ಆಗಸ್ಟ್ 1: ಆಂಧ್ರಪ್ರದೇಶದ ರಸ್ತೆ ಮತ್ತು ಕಟ್ಟಡ ಇಲಾಖೆ ಸಚಿವ ಬಿ.ಸಿ. ಜನಾರ್ದನ ರೆಡ್ಡಿಯವರ ಸಹೋದರ ಮದನ್…

9 minutes ago

ಬೆಂಗಳೂರು: ಟ್ಯೂಷನ್ ಹೋಗಿ ಬರುವಾಗ 12 ವರ್ಷದ ಬಾಲಕನ ಅಪಹರಣೆ, ಕೊಲೆ ಮಾಡಿ ಬೆಂಕಿಹಾಕಿದ ದುಷ್ಕರ್ಮಿಗಳು

ಬೆಂಗಳೂರು, ಜುಲೈ 31: ಸಿಲಿಕಾನ್ ಸಿಟಿ ಬೆಂಗಳೂರು ಈಚೆಗೆ ಮತ್ತೊಂದು ಬೆಚ್ಚಿಬೀಳಿಸುವ ಹೃದಯವಿದ್ರಾವಕ ಘಟನೆಯನ್ನು ಕಂಡಿದೆ. ಕೇವಲ 5 ಲಕ್ಷ…

3 hours ago

“ರಾಕ್ಷಸೀ ಕೃತ್ಯ: ಪ್ರೇಮದ ಹೆಸರಿನಲ್ಲಿ ಮಹಿಳೆಯ ಹತ್ಯೆ, ಬಳಿಕ ಖಾಸಗಿ ಭಾಗ ಹರಿದು ಕರುಳು ಹೊರತೆಗೆದ ಕ್ರೂರಿ!”

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನರ್ಬಯಾ ಪ್ರಕರಣವನ್ನು ನೆನಪಿಸುವಂತೆಯೇ ಒಂದು ಹೃದಯವಿದ್ರಾವಕ ಅಪರಾಧ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಪ್ರೇಮಿಕೆಯನ್ನು…

13 hours ago

40 ವರ್ಷದ ವ್ಯಕ್ತಿಯ ಜೊತೆ 13 ವರ್ಷದ ಬಾಲಕಿಯ ಮದುವೆ.!

ಹೈದರಾಬಾದ್, ಜುಲೈ 31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸಂಸ್ಕೃತಿಯ ಕುರಿತಂತೆ ಆತಂಕ ಹೆಚ್ಚಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ…

14 hours ago

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಶುಂಠಿ,ಮಾವು,ಅಡಿಕೆಗೆ ಅವಕಾಶ

ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ…

14 hours ago

ಪೈಪ್ ನಲ್ಲಿ ಸಿಕ್ಕಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಗಸ್ತು ವನಪಾಲಕ ಮುತ್ತುರಾಜ

ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು…

14 hours ago