Latest

ಬೆಂಗಳೂರಿನಿಂದ ಲಕ್ನೋ ಹೊರಟಿದ್ದ ಮಹಿಳೆ​ ಮೇಲೆ ಟಿಸಿ ದರ್ಪ​!

ಜನಸಾಮಾನ್ಯರ ಮೇಲೆ ದರ್ಪ ತೋರಿಸೋಕೆ ಹೋದ್ರೆ ಏನಾಗುತ್ತೇ ಅನ್ನೋಕೆ ಈ ಘಟನೆಯೇ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್​ ಜೊತೆ ಮಾತಿನ ಚಕಮಕಿ ನಡೆಸ್ತಿರೋ ಮಹಿಳೆ. ಮಾತಿಗೆ ಮಾತು ಬೆಳೆದು ಟಿಸಿ ಮುಂದೆ ಕಣ್ಣೀರು. ಮಹಿಳೆಯ ಕಣ್ಣೀರ ಕಥೆ ಕಂಡು ಟಿಕೆಟ್​ ಕಲೆಕ್ಟರ್​ ಅನ್ನ ತರಾಟೆಗೆ ತೆಗೆದುಕೊಂಡ ಸಹ ಪ್ರಯಾಣಿಕರು. ಇಂತದೊಂದು ದೃಶ್ಯ ಕಂಡು ಬಂದಿರೋದು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ.
ಕೆ.ಆರ್​ ಪುರಂನ ರೈಲ್ವೇ ನಿಲ್ದಾಣದಿಂದ ಲಖನೌಗೆ ಪ್ರಯಾಣ ಬೆಳೆಸಲು ಮಹಿಳೆಯೊಬ್ಬರು ತಮ್ಮ ಲಗೇಜ್ ಸಮೇತರಾಗಿ ಆಗಮಿಸಿದ್ರು. ಈ ವೇಳೆ ಮಹಿಳೆಯನ್ನ ಕಂಡ ಟಿಕೆಟ್​ ಕಲೆಕ್ಟರ್​ ಒರ್ವ ಟಿಕೆಟ್​ ತೋರಿಸುವಂತೆ ಸೂಚಿಸಿದ್ನಂತೆ. ಈ ವೇಳೆ ಟಿಕೆಟ್​ ತೋರಿಸಿದ ಮಹಿಳೆಗೆ ಟಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ. ಟ್ರೈನ್​ ಏರುವ ಮುನ್ನವೇ ಟಿಸಿ ನನ್ನ ಬಳಿ ಟಿಕೆಟ್​ ಕೇಳಿದ್ದು ಎಷ್ಟು ಸರಿ ಅಂತ ಸಹ ಮಹಿಳೆ ಅಸಮಾಧಾನ ಹೊರಹಾಕಿದ್ದಾಳೆ. ಅಲ್ಲದೇ ಮಹಿಳೆಯನ್ನ ಚುಡಾಯಿಸುವ ದೃಷ್ಠಿಯಿಂದ ಟಿಕೆಟ್​ ಕಲೆಕ್ಟರ್​ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಮಹಿಳೆ ಆರೋಪಿಸಿದ್ದಾರೆ. ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಕಣ್ಣೀರಿಡ್ತಿರೋದನ್ನ ಕಂಡ ಸಹ ಪ್ರಯಾಣಿಕರು ಟಿಸಿಯನ್ನ ತರಾಟೆಗೆ ತೆಗೆದುಕೊಂಡು ಎಳೆದಾಡಿದ್ದಾರೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್​ ಆಗ್ತಿದ್ದು, ಟಿಸಿ ವರ್ತನೆ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಸಿ ಮದ್ಯಪಾನ ಮಾಡಿ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಹೇಳಲಾಗ್ತಿದೆ.
ಟಿಕೆಟ್​ ಕಲೆಕ್ಟರ್​ ಮಹಿಳೆಯೊಂದಿಗೆ ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್​ ಆಗ್ತಿದ್ದ ವೇಳೆ ಸಹ ಪ್ರಯಾಣಿಕರು ಆತನನ್ನ ಎಳೆದು ತಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ಈ ದೃಶ್ಯ ಎಲ್ಲೆಡೆ ವೈರಲ್​ ಆಗಿ ಭಾರೀ ವಿರೋಧ ವ್ಯಕ್ತವಾಗಲು ಶುರುವಾಯ್ತೋ ತಕ್ಷಣ ಎಚ್ಚೆತ್ತ ರೈಲ್ವೇ ಅಧಿಕಾರಿಗಳು ಟಿಕೆಟ್​ ಕಲೆಕ್ಟರ್​ ಅನ್ನ ಕೆಲಸದಿಂದ ಅಮಾನತು ಮಾಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಹಿಳೆ ಮೇಲೆ ಅಧಿಕಾರದ ದರ್ಪ ತೋರಿದ ಟಿಕೆಟ್​ ಕಲೆಕ್ಟರ್​ ಕೆಲಸ ಕಳೆದುಕೊಂಡು ಮನೆ ಸೇರಿದ್ದಾನೆ.

ಭ್ರಷ್ಟರ ಬೇಟೆ

Recent Posts

ಬಿಡದಿ ಟೌನ್‌ಶಿಪ್‌ ವಿರೋಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನಿದೆ, ಕುಮಾರಸ್ವಾಮಿ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

26 minutes ago

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಆರ್‌ಡಿಪಿಆರ್ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ…

27 minutes ago

ಸಚಿವ ಸತೀಶ್ ಜಾರಕಿಹೊಳಿ ಅಳಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ಇಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…

28 minutes ago

ಮದುವೆಗೆ ಕೆಲವೇ ದಿನ ಬಾಕಿ… ಭಾವಿ ಪತ್ನಿಯಿಂದಲೇ 400 ಅಡಿ ಕಣಿವೆಗೆ ತಳ್ಳಿ ಹತ್ಯೆ!

ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…

30 minutes ago

ಲಿವ್-ಇನ್ ಸಂಬಂಧಕ್ಕೆ ವಿರೋಧಿಸಿದ್ದ ತಂದೆ-ತಾಯಿ, ತಂಗಿಯನ್ನೇ ಕೊಂದ ಯುವತಿ! ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಹತ್ಯೆ

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ದಾರುಣ ಘಟನೆ ಪೂರ್ವ ಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್…

32 minutes ago

ಸಿನಿಮಾ ಸ್ಟೈಲ್ ಲಾರಿ ದರೋಡೆ: 24 ಗಂಟೆಯಲ್ಲಿ ಆರೋಪಿಗಳ ಬಂಧನ

ಆನೇಕಲ್‌ನಲ್ಲಿ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಮೂವರು…

33 minutes ago