Categories: CrimeLatest

ಸುಜಾತಾಳಿಗೆ ಅಕ್ರಮ ಸಂಬಂಧವೇ ಮುಳ್ಳಾಯಿತು: ಆಸ್ತಿಗಾಗಿ ಕೊಂದೆ ಬಿಟ್ಟ ಕ್ರೂರಿ..!

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳನ್ನು ಆಸ್ತಿ ಲಪಟಾಯಿಸುವ ಉದ್ದೇಶದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಘಟನೆಯ ಹಿನ್ನಲೆಯನ್ನು ಬಯಲಿಗೆಳೆದಿದ್ದಾರೆ.

ಕಳೆದ ಮಾರ್ಚ್ 12ರಂದು ಅಥಣಿ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೃತಳನ್ನು ಸುಜಾತಾ ಪವಾರ್ (35) ಎಂದು ಗುರುತಿಸಿದ್ದು, ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕುಮಾರ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ್ದಾರೆ.

ನಂಬಿಕೆ ಪಡೆದು ದ್ರೋಹ

ಸುಜಾತಾ ಪವಾರ್ 16 ವರ್ಷಗಳ ಹಿಂದೆ ಹಾರೂಗೇರಿ ಮೂಲದ ಯುವಕನೊಂದಿಗೆ ವಿವಾಹವಾಗಿದ್ದು, ದಂಪತಿಗೆ ಮಗನಿದ್ದಾನೆ. ಆದರೆ ಪತಿಯ ಕಿರುಕುಳದಿಂದ ಬೇಸತ್ತು, 13 ವರ್ಷಗಳ ನಂತರ ವಿಚ್ಛೇದನ ಪಡೆದು ತವರು ಮನೆ ಸೇರಿದ್ದಳು. ಬಳಿಕ ಪತಿಯರಿಂದ ದೊರೆತ ಮನೆ ಮಾರಾಟ ಮಾಡಿ, ಆ ಹಣದಿಂದ ಅಥಣಿ ಹೊರವಲಯದಲ್ಲಿ ಜಾಗ ಖರೀದಿಸಿ, ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಳು.

ಈ ಸಂದರ್ಭದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕುಮಾರ್ ಹವಾಲ್ದಾರ್ ಪರಿಚಯವಾಗಿದ್ದನು. ಮನೆ ಕಟ್ಟಿಕೊಡುವ ನೆಪದಲ್ಲಿ ಸುಜಾತಾಳ ವಿಶ್ವಾಸ ಗಳಿಸಿದ ಆತ, ಮದುವೆಯ ಮಾತು ನೀಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದನು. ಆದರೆ ಕಳೆದ ಎರಡು ವರ್ಷಗಳಿಂದ ಇವರ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು ಎಂದು ತಿಳಿದುಬಂದಿದೆ.

ಆಸ್ತಿ ಮೇಲೆ ಕಣ್ಣು

ಮದುವೆಯಾಗಲು ಮನೆ ತನ್ನ ಹೆಸರಿಗೆ ಮಾಡಿಕೊಡಬೇಕು ಎಂದು ಕುಮಾರ್ ಸುಜಾತಾಳ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದ್ದನು. ಆದರೆ ತನ್ನ ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಜಾತಾ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಮಾರ್ಚ್ 5ರಂದು ಮಧ್ಯಾಹ್ನ ಮದ್ಯಪಾನ ಮಾಡಿ ಬಂದ ಕುಮಾರ್, ಸುಜಾತಾಳೊಂದಿಗೆ ಜಗಳವಾಡಿ, “ಮಾತನಾಡಬೇಕು” ಎಂದು ಹೇಳಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಹತ್ಯೆ ಮಾಡಿ, ಮನೆಗೆ ವಾಪಸ್ಸು ಬಂದು ಆಕೆಯ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸುಳ್ಳಿನಿಂದ ತಪ್ಪಿಸಿಕೊಳ್ಳಲು ಯತ್ನ

ಘಟನೆಯ ಬಳಿಕ ಸುಜಾತಾಳ 15 ವರ್ಷದ ಮಗ ಪ್ರಶ್ನಿಸಿದಾಗ, “ಅಮ್ಮ ಜಗಳ ಮಾಡಿಕೊಂಡು ಗೆಳತಿಯ ಮನೆಗೆ ಹೋಗಿದ್ದಾಳೆ” ಎಂದು ಸುಳ್ಳು ಹೇಳಿದ್ದಾನೆ. ಅಲ್ಲದೇ ತನ್ನನ್ನು ಬೈಯುತ್ತಾಳೆ ಎಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ ಎಂದು ಹೇಳಿ, ತಾನೂ ಜಾತ್ರೆಗೆ ಹೋಗುತ್ತಿದ್ದೇನೆಂದು ನಾಟಕವಾಡಿ ಅಲ್ಲಿಂದ ತೆರಳಿದ್ದಾನೆ.

ಇನ್ನೊಂದೆಡೆ, ಸುಜಾತಾಳ ತಾಯಿ ಮಗಳು ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದಾಳೆ ಎಂದು ಭಾವಿಸಿ ಶಂಕೆಪಡಲಿಲ್ಲ. ಆದರೆ ಪೊಲೀಸರು ಮನೆಗೆ ಬಂದು ಸುಜಾತಾಳ ಸಾವಿನ ಸುದ್ದಿ ನೀಡಿದ ಬಳಿಕ, ಪ್ರಕರಣದ ನಿಜ ಸ್ವರೂಪ ಬಹಿರಂಗವಾಯಿತು.

ಈ ಘಟನೆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಮೇಲೆ ಕಣ್ಣಿಟ್ಟ ವ್ಯಕ್ತಿಯ ಕ್ರೂರ ಮನಸ್ಥಿತಿಯನ್ನು ಬಿಚ್ಚಿಡುವುದರೊಂದಿಗೆ, ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚಿಂತನೆಗೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ಅಕ್ರಮ ಸಂಬಂಧ ಆರೋಪ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗುಂಪು ಹಲ್ಲೆ – ಐವರು ಬಂಧನ

ಬೆಂಗಳೂರು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಹಿನ್ನೆಲೆ ಯುವತಿಯೊಬ್ಬಳ ಮೇಲೆ ಗುಂಪು…

1 hour ago

ಸ್ನ್ಯಾಪ್‌ಚಾಟ್ ಪರಿಚಯದಿಂದ ಬ್ಲ್ಯಾಕ್‌ಮೇಲ್ ದಂಧೆ: 40 ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ – ಇಬ್ಬರು ಬಂಧನ

ಸೋಶಿಯಲ್ ಮೀಡಿಯಾದ ಮೂಲಕ ಪರಿಚಯ ಬೆಳೆಸಿ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಬೆಂಗಳೂರಿನಲ್ಲಿ…

1 hour ago

ವೇಶ್ಯಾವಾಟಿಕೆ ಅನುಮಾನ: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಯುವತಿಗೆ ಹಲ್ಲೆ– ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಪ್ರಕರಣ

ಬೆಂಗಳೂರು ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನಕ್ಕೆ ಉದ್ರಿಕ್ತಗೊಂಡ ಸ್ಥಳೀಯರ ಗುಂಪೊಂದು ಪಶ್ಚಿಮ ಬಂಗಾಳ ಮೂಲದ 20 ವರ್ಷದ…

1 hour ago

ಗೋವಾದಲ್ಲಿ ವೇಗದ ಕಾರಿನ ದುರಂತ: ಕರ್ನಾಟಕದ ಯುವತಿ ಸಾವು – ಉದ್ಯಮಿಯ ಪುತ್ರ ವಶಕ್ಕೆ

ಗೋವಾದ ಬಂಬೋಲಿಮ್–ದೋನಾ ಪೌಲಾ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ ಮೂಲದ 23 ವರ್ಷದ ಯುವತಿ…

1 hour ago

ಸೋಶಿಯಲ್ ಮೀಡಿಯಾ ಪರಿಚಯ: ಬಾಲಕನನ್ನು ಹೋಟೆಲ್ ಗೆ ಕರೆಸಿ ಮಹಿಳೆಯಿಂದ ಅತ್ಯಾಚಾರ..!

ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾದ ಪರಿಚಯವು ಭೀಕರ ಘಟನೆಗೆ ತಿರುಗಿದ ಪ್ರಕರಣ ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ,…

1 hour ago

ಕಸ್ಟಡಿ ಸಾವು 9 ಪೊಲೀಸರಿಗೆ ಗಲ್ಲು ಶಿಕ್ಷೆ ಪ್ರಕರಣ – ಸತ್ಯಕ್ಕೆ ಸಾಕ್ಷಿಯಾದ ಕಾನ್ಸ್ಟೇಬಲ್ ರೇವತಿಗೆ ದೇಶದ ಸಲಾಂ

2020ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ಸಾತನ್ಕುಲಂನಲ್ಲಿ ನಡೆದ ಅಮಾನವೀಯ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯವು ಐತಿಹಾಸಿಕ…

1 hour ago