Latest

ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಹಠಾತ್ ದಾಳಿ : ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ದಿನಗಳಲ್ಲಿ ಸ್ವತ್ತಿನ ಅಪರಾಧಗಳ ವರದಿಯಾಗುವ ಹಾಗೂ ಅಕ್ರಮ ಬಡ್ಡಿ ವ್ಯವಹಾರ, ಗ್ಯಾಬ್ಲಿಂಗ್ ಇತ್ಯಾದಿ ಅಕ್ರಮ ಚಟುವಟಿಕೆಗಳ ಕುರಿತು ದೂರು ಹಾಗೂ ಮಾಹಿತಿ ಬಂದ ಹಿನ್ನಲೆಯಲ್ಲಿ ದಿನಾಂಕ: 03-02-2025 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 04-02-2025 ರ ಬೆಳಗ್ಗೆ 06 ಗಂಟೆಯವರೆಗೆ ವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನನಿತ್ಯದ ಗಸ್ತಿನ ಜೊತೆಗೆ ಹೆಚ್ಚುವರಿಯಾಗಿ ವಿಶೇಷ ರಾತ್ರಿ ಗಸ್ತನ್ನು ನಿಯೋಜಿಸಿ. ಪ್ರಮುಖ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಬ್ಯಾಂಕ್ ಎಟಿಎಂ, ಲಾಡ್ಜ್, ರೆಸಾರ್ಟ, ಬೀಗ ಹಾಕಿದ ಮನೆಗಳು, ಒಂಟಿ ಮನೆಗಳನ್ನು ಚೆಕ್ ಮಾಡಿ. ಹೆಚ್ಚುವರಿ ಚೆಕ್ ಪೊಸ್ಟಗಳನ್ನು ತೆಗೆದು ಸಂಶಯಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಚೆಕ್ ಮಾಡಿ. ನಿಗಾ ಇಟ್ಟು
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಬ್ಲಿಂಗ್ ಹಾಗೂ ಇತರೇ ಅಕ್ರಮ ವ್ಯವಹಾರ ನಡೆಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಮುಂಡಗೋಡ ಪಿ.ಐ ರವರು ಡಿ.ಎಸ್.ಪಿ ಶಿರಸಿ ರವರಿಂದ ದಾಳಿ ನಡೆಸಲು ಅನುಮತಿ ಪಡೆದು ಮಾನ್ಯ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ಮಾನ್ಯ ಪೊಲೀಸ್ ಉಪಾಧಿಕ್ಷಕರು, ಶಿರಸಿ ರವರ ನೇತೃತ್ವದಲ್ಲಿ 21 ತಂಡವನ್ನು ರಚನೆ ಮಾಡಿ ಏಕಕಾಲದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಾದ 1] ಪೈರೋಜಖಾನ ಅಹ್ಮದಖಾನ ಖಾನಜಾದೆ ಸಾ||ಇಂದಿರಾನಗರ, ಮುಂಡಗೋಡ, 2]ಮಹ್ಮದ ಶಫೀ ಮುನೀರಹ್ಮದ ಮುಗಳಿಕಟ್ಟಿ ಸಾ||ಇಂದಿರಾನಗರ, ಮುಂಡಗೋಡ, 3]ಸಾಹೀದ್ ಅಬ್ದುಲಖಾದರ ಮಿಟ್ಟಿವಾಲೆ ದೇಶಪಾಂಡೆನಗರ, ಮುಂಡಗೋಡ, 4]ಮಂಜುನಾಥ ನಾಗೇಂದ್ರ ಕಾಜಗಾರ ಸಾ॥ಸಾಲಗಾಂವ ತಾ!ಮುಂಡಗೋಡ, 5]ಕರಿಂಖಾನ್ ಹಿಮ್ಮತಖಾನ್ ಖಾನಜಾದೆ ಸಾ||ನೂರಾನಿಗಲ್ಲಿ, ಮುಂಡಗೋಡ, 6] ಸಂಜು ಕೃಷ್ಣ ಹರಿಜನ ಸಾ॥ಆನಂದನಗರ, ಮುಂಡಗೋಢ. 7]ಕಿರಣ ನಾರಾಯಣ ಚವ್ಹಾಣ ಸಾ॥ಹಳ್ಳೂರ ಓಣಿ. ಮುಂಡಗೋಡ, 8] ವಿಶಾಲ ಅಣ್ಣಪ್ಪ ಶೆಟ್ ಸಾ।।ಹುಬ್ಬಳ್ಳಿರೋಡ್. ಮುಂಡಗೋಡ, 9]ವಸಂತ ಕರಿಯಪ್ಪ ಕೊರವರ ಸಾ||ಗಾಂಧಿನಗರ, ಮುಂಡಗೋಡ, 10]ಮಹ್ಮದಜಾಫರ್ ರಾಜೇಸಾಬ ಚವಡಿ ಸಾ|ಇಂದಿರಾನಗರ, 11)ಅಮೀರಖಾನ್ ಶೇರಖಾನ್ ಪಠಾಣ ಸಾ।।ಆನಂದನಗರ ಪ್ಲಾಟ್ ಮುಂಡಗೋಡ, 12)ಸುನೀಲ ಸುಧಾಕರ ಶೆಟ್ಟಿ ಸಾ।।ಕೆ.ಹೆಚ್.ಬಿ ಕಾಲೋನಿ, ಮುಂಡಗೋಡ ರವರ ವಾಸದ ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲಿಸಲಾಗಿ ಸದರಿ ಮೇಲ್ಕಂಡ ವ್ಯಕ್ತಿಗಳು ಅಕ್ರಮವಾಗಿ ಬಡ್ಡಿ ವ್ಯವಹಾರದ ವಸೂಲಿಗೆ ಸಾರ್ವಜನಿಕರಿಗೆ ತೊಂದರೆ ಕೊಡುವ ಸಂಭವ ಕಂಡುಬಂದಿದ್ದರಿಂದ ಈ ಮೇಲಿನ 12 ಜನರ ವಿರುದ್ದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.
ಹಾಗೂ
ದಿನಾಂಕ:-04/02/2025 ರಂದು ಪಿ.ಎಸ್.ಐ ಹನುಮಂತ ಕುಡಗುಂಟಿ ಹಾಗೂ ಠಾಣೆಯ ಸಿಬ್ಬಂದಿಯವರು ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಮ್ ಹತ್ತಿರ ಆರೋಪಿತರಾದ 1] ಮಹಮ್ಮದ ಸಾದೀಕ್ ಮೋದಿನಸಾಬ ಗಾಜೀಪೂರ ಸಾ||ಇಂದಿರಾನಗರ ಪ್ಲಾಟ್ ಮುಂಡಗೋಡ 2] ವಾಸಿಂಖಾನ್ ಗೂಡುಖಾನ್ ಬೆಂಡಿಗೇರಿ ಸಾ|ಆನಂದನಗರ ಮುಂಡಗೋಡ 3] ಮಕ್ಬೂಲ್ ಅಹಮದ ರಜಾಕಷಾ ಯಳ್ಳೂರು ಸಾ।।ಯಲ್ಲಾಪೂರ ರಸ್ತೆ ಮುಂಡಗೋಡ 4] ಮದುಸಿಂಗ್ ತ ಗಂಗಾರಾಮಸಿಂಗ್ ರಜಪೂತ ಸಾ||ಬಸಾಪೂರ, ಮುಂಡಗೋಡ 5] ವಿರೇಶ ಶಂಬು ಹುಲಗೂರು ಸಾ||ನಂದೀಶ್ವರ ನಗರ ಮುಂಡಗೋಡ 6] ಮಂಜುನಾಥ ಕಾಂತೇಶ ಹೊಟ್ಲರ್ ಸಾ॥ಕಂಬಾರಗಟ್ಟಿ ಪ್ಲಾಟ್ ಮುಂಡಗೋಡ ಮತ್ತು ಇನ್ನೂ ಇಬ್ಬರೂ ತಮ್ಮ ತಾಬಾ ಇದ್ದ ಎರಡು ಕಟ್ಟಿಗೆಯ ಬಡಿಗೆಗಳು, ಎರಡು ಕಬ್ಬಿಣದ ರಾಡಗಳು ಹಾಗೂ ಖಾರದ ಪುಡಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅಥವಾ ರಸ್ತೆಯಲ್ಲಿ ಓಡಾಡುವ ಜನರಿಗೆ ದರೋಡೆ ಮಾಡುವ ಉದ್ದೇಶದಿಂದ ತಯಾರಿಲ್ಲದ್ದಾಗ 5 ಜನರು ಸಿಕ್ಕಿದ್ದು ಇನ್ನು 3 ಜನ ಓಡಿ ಹೋಗಿದ್ದು, ಸದರಿ ಆರೋಪಿತರ ವಿರುದ್ದ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ನಂತರ, ಮಂಜುನಾಥ ಕಾಂತೇಶ ಹೋಟಕರ್ @ ಶೇರಖಾನೆ ಪ್ರಾಯ-26 ವರ್ಷ ಉದ್ಯೋಗ-ಕೂಲಿಕೆಲಸ ಸಾ||ಕಂಬಾರಗಟ್ಟಿ ಪ್ಲಾಟ್, ಮುಂಡಗೋಡ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ದಾಖಲೆಗಳು ಸಿಕ್ಕಿದ್ದು ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಹಕಾರಿ ಸಂಘ ಶಿರಸಿ ಇವರಿಗೆ ಮಾಹಿತಿ ನೀಡಿದಂತೆ ಸದರಿ ಅಧಿಕಾರಿಯವರು ಈ ಬಗ್ಗೆ ಕಾನೂನು ಕ್ರಮ ಜರೂಗಿಸಲು ಮುಂಡಗೊಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇವರ ದೂರಿನ ಮೇರೆಗೆ ಜಮೀರ ನಜೀರ ಅಹಮ್ಮದ್ ದರ್ಗಾವಾಲೆ ಮತ್ತು ಕಾಂತೇಶ ಹೋಟಕರ ಇವರ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ

ಮುಂದುವರೆದು, ಮಕ್ಬೂಲ್ ಅಹಮದ ತಂದೆ ರಜಾಕಷಾ ಯಳ್ಳೂರು, ಯಲ್ಲಾಪೂರ ರಸ್ತೆ ಮುಂಡಗೋಡ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ದಾಖಲೆಗಳು ಸಿಕ್ಕಿದ್ದು ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಹಕಾರಿ ಸಂಘ ಶಿರಸಿ ಇವರಿಗೆ ಮಾಹಿತಿ ನೀಡಿದಂತೆ ಸದರಿ ಅಧಿಕಾರಿಯವರು ಈ ಬಗ್ಗೆ ಕಾನೂನು ಕ್ರಮ ಜರೂಗಿಸಲು ಮುಂಡಗೊಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇವರ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ದಿನಾಂಕ: 20/01/2025 ರಂದು ಸಂಜೆ 07-00 ಗಂಟೆಯ ಸುಮಾರಿಗೆ ಶ್ರೀ ಕರಿಂಖಾನ್
ಹಿಮ್ಮತಖಾನ ಖಾನ್‌ಜಾದೆ ಸಾ।।ನೂರಾನಿಗಲ್ಲಿ, ಮುಂಡಗೋಡ ಇವರು ಮನೆಯಲ್ಲಿ ಇರುವಾಗ ಜಮೀರ ಅಹ್ಮದ ದರ್ಗಾವಾಲೆ ಈತನು ತನ್ನೊಂದಿಗೆ ಮದರಷಾ ಮಕಾಂದರ, ಮಕ್ಖುಲ್‌ ಅಹ್ಮದ ಯಳ್ಳೂರ, ಮಹ್ಮದಸಾಧೀಕ ಚಾವುರ, ನಾಬಿರಾಜ ಅಗಡಿ, ಮಂಜು ನವಲೆ, ದೀಪಕ ರೊಟ್ಟಿಗವಾಡ, ರಾಹುಲ ಹಲಿಯಪ್ಪನವರ, ಶಾಹೀಲ್ ಜೀಲಾನಿ. ಮಧುಸಿಂಗ್ ರಜಪೂತ. ಮೊಹ್ಮದಸಾಧೀಕ ಗಾಜಿಪೂರ, ವಾಸಿಮಖಾನ ಬೆಂಡಿಗೇರಿ ಹಾಗೂ ಶಬೀರ ಮಸ್ತಮದಾನಿ ಇವರನ್ನು ಕರೆದುಕೊಂಡು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶಮಾಡಿ ನನಗೆ ಅಡ್ಡಗಟ್ಟಿ ಕೊಟ್ಟಿರುವ ಅಸಲು 30,000/-ರೂಪಾಯಿಗೆ ಬಡ್ಡಿ ಸೇರಿ ಒಟ್ಟು 60.000/-ರೂಪಾಯಿ ಆಗಿದೆ ಎಷ್ಟ ಬಾರಿ ಹೇಳಬೇಕು ನನಗೆ ಕೊಡಬೇಕಾದ ಒಟ್ಟು ಹಣ ಕೊಡು ಇಲ್ಲದಿದ್ದರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸಾಮಾನುಗಳು ತೆಗೆದುಕೊಂಡು ಹೊಗುತ್ತೇನೆ. ಅಂತಾ ಹೇಳಿ ಹೆದರಿಸಿ ಅವಾಚ್ಯವಾಗಿ ಬೈಯ್ದು ಕೋಡಬೆಕಾದ ಹಣವನ್ನು ಕೊಡದೆ ಹೊದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದಾಗ ನನಗೆ ದುಡ್ಡಿನ ಸಮಸ್ಯೆ ಇದೆ ಇನ್ನೂ ಸ್ವಲ್ಪ ದಿನಗಳ ಕಾಲಾವಕಾಶ ಕೊಡಿ ಅಂತಾ ಕೇಳಿದರೂ ಸಹ ಕಾಲವಕಾಶ ಕೊಡದೆ ಅವನ ಹತ್ತಿರ ಇದ್ದ 5000/- ರೂ ಗಳನ್ನು ತೆಗೆದುಕೊಂಡು ಹೋಗಿದ್ದಾಗಿ ದಿನಾಂಕ:-04/02/2025 ರಂದು ಠಾಣೆಗೆ ಬಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ವಿಶೇಷ ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ಅಕ್ರಮವಾಗಿ ಗ್ಯಾಂಬ್ಲಿಂಗ್ .ಕಾನೂನು ಬಾಹಿರ ಚಟುವಟಿಕೆಗಳು, ಬಡ್ಡಿ ವ್ಯವಹಾರವನ್ನು ಹತ್ತಿಕ್ಕಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಕೂಡ ಈ ನಿಟ್ಟಿನಲ್ಲಿ ನಿಗಾವಹಿಸಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಬಡ್ಡಿ ವ್ಯವಹಾರವನ್ನು ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ದಿನಾಂಕ: 03-02-2025 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 04-02-2025 ರ ಬೆಳಗ್ಗೆ 6 ಗಂಟೆಯವರೆಗೆ ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ ಹಾಗೂ ಮೀಟರ್ ಬಡ್ಡಿ ವ್ಯವಹಾರ ಮಾಡುವ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ. ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

6 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

7 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

1 day ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

1 day ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

1 day ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 days ago