Latest

ಮಳೆಯಲ್ಲಿ ನಿಂತು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿರುವ ವಿದ್ಯಾರ್ಥಿಗಳು! ಕಾರಣವೇನು ಗೊತ್ತೆ?

ಬೆಂಗಳೂರು: ಸುಮ್ಮನಹಳ್ಳಿ ಹತ್ತಿರ ಇರುವಂತಹ ಸಜ್ಜೆಪಾಳ್ಯ, ಅಂಜನಗರ, ದಿನ್ನೂರು, ಹೆಬ್ಬಾಳದ ಬಳಿ ಗುಡ್ಡದಹಳ್ಳಿ ಮತ್ತು ಮಾಳಗಳ. ಸೇರಿದಂತೆ ಬೆಂಗಳೂರು ಉತ್ತರದ ಸುಮಾರು 6 ಬಿ.ಸಿ.ಎಂ ಹಾಸ್ಟೆಲ್ ಗಳನ್ನು ಯಲಹಂಕದ ಬಳಿ ಇರುವ ಮುತ್ತುಗದ ಹಳ್ಳಿ, ಶಿವಕೋಟೆ ಗ್ರಾಮ ಪಂಚಾಯಿತಿ, ಹೆಸರಘಟ್ಟ ಹೋಬಳಿ ಹತ್ತಿರ ವರ್ಗಾವಣೆ ಮಾಡುತ್ತಿದ್ದು ಹೊಸ ಹಾಸ್ಟೆಲ್ ಕಾಲೇಜುಗಳಿಗೆ ತುಂಬಾ ದೂರವಿದ್ದು ಸುಮಾರು 40 ರಿಂದ 50 ಕಿಲೋಮೀಟರ್ ಆಗುತ್ತದೆ. ಪ್ರಯಾಣದ ಸಮಯವೇ ದಿನಕ್ಕೆ ೨ ರಿಂದ 3 ತಾಸು ತೆಗೆದುಕೊಳ್ಳುತ್ತದೆ. ಮತ್ತು ಆ ಸ್ಥಳಕ್ಕೆ ಸರಿಯಾದ ರೀತಿಯ ಬಸ್ ವ್ಯವಸ್ಥೆಯು ಸಹ ಇಲ್ಲ.

ಹೊಸದಾಗಿ ಮಾಡಿರುವ ಹಾಸ್ಟೆಲ್ ನಿಂದ ಬಸ್ ಸ್ಟಾಪ್ ಗೆ ಬರಬೇಕೆಂದರೆ ವಿದ್ಯಾರ್ಥಿಗಳು ಸುಮಾರು ೨ ರಿಂದ 3 ಕಿಲೋಮೀಟರ್ ನಷ್ಟು ನಡೆಯಬೇಕು. ಆ ಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಇನ್ನೂ ಕೆಲ ಮೂಲಭೂತ ಸೌಕರ್ಯಗಳು ಸಹ ಇರುವುದಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಇದನ್ನು ಅಧಿಕಾರಿಗಳಲ್ಲಿ ತಿಳಿಸಿದರೆ ಅವರು ಇದನ್ನು ಲೆಕ್ಕಿಸದೆ ನಾವು ವರ್ಗಾಯಿಸ್ತಿದ್ದೇವೆ ನೀವು ನಿಮ್ಮ ಲಗೇಜ್ ಗಳನ್ನು ತೆಗೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ವರ್ಗಾಯಿಸಲು ಸಿದ್ಧಗೊಂಡಿದ್ದಾರೆ. ವಿದ್ಯಾರ್ಥಿಗಳು ಶನಿವಾರದಿಂದ ಯಾವುದೇ ಕಾಲೇಜುಗಳಿಗೆ ಹೋಗದೆ ಹಾಸ್ಟೆಲಲ್ಲೇ ಉಳಿದು ವರ್ಗಾವಣೆ ಬೇಡ ಎಂದು ಅಧಿಕಾರಿಗಳ ಬಳಿ ಅಂಗಲಾಚಿ ಬೇಡಿಕೊಂಡಿದ್ದಾರೆ. ಅಧಿಕಾರಿಗಳು ಯಾವುದಕ್ಕೂ ಬಗ್ಗದ ಕಾರಣ ವಿದ್ಯಾರ್ಥಿಗಳು ಸೋಮವಾರದಂದು ಫ್ರೀಡಂ ಪಾರ್ಕ್ ಹತ್ತಿರ ಪ್ರೊಟೆಸ್ಟ್ ಮಾಡಿದ್ದಾರೆ ಆದರೆ ಅದು ಸಹ ಸಫಲವಾಗಿಲ್ಲ.

ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಇಷ್ಟೆಲ್ಲಾ ದೌರ್ಜನ್ಯವೆಸಗುತ್ತಿದ್ದರು ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಗಮನಹರಿಸಿರುವುದಿಲ್ಲ. ಅಧಿಕಾರಿಗಳ ಬಳಿ ಬೇಡಿಕೊಂಡು ಬೆಂಡಾದ ವಿದ್ಯಾರ್ಥಿಗಳು ನೊಂದು ಮಳೆಯಲ್ಲಿ ನಿಂತು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

1 hour ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

1 hour ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

1 hour ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

1 hour ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

2 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

21 hours ago