ಆನ್ ಲೈನ್ ವಂಚಕರುಗಳಿಗೆ ಸಾಮಾಜಿಕ ಜಾಲತಾಣಗಳು ಪ್ರತ್ಯಕ್ಷವಾಗಿಯೂ ಅಥವಾ ಪರೋಕ್ಷವಾಗಿಯೊ ಬೆಂಬಲಿಸುತ್ತಿದೆ ಎಂದರೆ ತಪ್ಪಾಗಲಾರದು. ಭ್ರಷ್ಟರ ಬೇಟೆ ಪತ್ರಿಕೆಯ ಕಳೆದ ಸಂಚಿಕೆಗಳಲ್ಲಿ ಆನ್ಲೈನ್ನಲ್ಲಿ ಆಗುತ್ತಿರುವ ವಂಚನೆಗಳ ಬಗ್ಗೆ ತಿಳಿಸಿದ್ದೆವು. ಆನ್ಲೈನ್ ವಂಚಕರು ಆನ್ಲೈನ್ನಲ್ಲಿ ವಂಚನೆ ಮಾಡಬೇಕೆಂದರೆ ಮೊದಲಿಗೆ ಅವರುಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ನೀಡುತ್ತಾರೆ. ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಗ್ರಾಮ್ನಲ್ಲಿ ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳು ರಾರಾಜಿಸುತ್ತಿವೆ. ಈ ರೀತಿ ಬರುವಂತಹ ಜಾಹೀರಾತುಗಳಲ್ಲಿ ಹಲವು ಜಾಹೀರಾತುಗಳು ವಂಚಕರಂದೆ ಆಗಿರುತ್ತದೆ. ಉದಾಹರಣೆಗೆ ಎಲೈಟ್(Elite) ಮೇಮಿ(Maime) ಹಾಗೂ ಇನ್ನೂ ಹಲವು ನಕಲಿ ಕಂಪನಿಗಳ ಹೆಸರುಗಳನ್ನು ಬಳಸಿ ಯೂಟ್ಯೂಬ್ನಲ್ಲಿ ದುಬಾರಿ ಬೆಲೆಯ ಮೊಬೈಲ್ ಕಡಿಮೆಬೆಲೆಗೆ ಮಾರಾಟಕ್ಕಿದೆ ಎಂದು ಪ್ರಕಟಿಸಿ ಮೊಬೈಲ್ ತಮ್ಮ ಮನೆಗೆ ಕಳುಹಿಸಿಕೊಡುತ್ತೇವೆ ಮೊದಲೇ ಹಣ ಪಾವತಿಸಿ ಎಂದು ಹಾಕಿಕೊಂಡಿರುತ್ತಾರೆ. ೨೦-೩೦ ಸಾವಿರದ ಮೊಬೈಲ್ಗಳು ಕೇವಲ ೨ ಅಥವಾ ೩ ಸಾವಿರಕ್ಕೆ ಸಿಗುತ್ತಿದೆ ಎಂದು ಅಮಾಯಕರು ಆಸೆಪಟ್ಟು ಹಣವನ್ನು ಪಾವತಿಸಿ ವಂಚಕರ ಬಲೆಗೆ ಬೀಳುತ್ತಾರೆ. ಮೊಬೈಲ್ ವಿಚಾರದಲ್ಲಿ ಮಾತ್ರವೇ ಅಲ್ಲದೆ ಹಲವು ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟು ವಂಚಿಸುತ್ತಾರೆ. ಯೂಟ್ಯೂಬ್ನಲ್ಲಿ ಮಾತ್ರವೇ ಅಲ್ಲದೆ ಫೇಸ್ಬುಕ್ ಮ
ಆನ್ಲೈನಲ್ಲಿ ವಂಚಕರು ಹೆಚ್ಚಾದಂತೆಲ್ಲ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಇಂತಹ ಪ್ರಕರಣಗಳನ್ನು ಬೇಧಿಸಲು ಸೈಬರ್ ಕ್ರೈಮ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನೂರು ಜನ ಮೋಸ ಹೋದವರಲ್ಲಿ ೫ ರಿಂದ ೧೦ ಜನರಿಗೆ ಮಾತ್ರ ಸೈಬರ್ ಕ್ರೈಮ್ ಪೊಲೀಸರು ನ್ಯಾಯ ಕೊಡಿಸಲು ಅಥವಾ ವಂಚಕರನ್ನು ಹಿಡಿದು ನೊಂದವರ ಹಣವನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಮಾಡುತ್ತಿರುವ ಎಡವಟ್ಟಿನಿಂದ ಸೈಬರ್ ಕ್ರೈಮ್ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಏನಾದರೂ ಸೈಬರ್ ಕ್ರೈಮ್ ಪೋಲಿಸರಿದ್ದಾರೆ ಎಂಬುವ ಧೈರ್ಯದಿಂದ ಸಾಮಾನ್ಯ ಜನರು ಎಡವಟ್ಟು ಮಾಡಿಕೊಳ್ಳುವ ಮೊದಲು ತಮ್ಮ ಎಚ್ಚರಿಕೆಯಲ್ಲಿ ತಾವಿರಿ. ಒಮ್ಮೆ ಹಣ ಕಳೆದುಕೊಂಡ ಮೇಲೆ ಅದನ್ನು ಹಿಂಪಡೆಯುವುದು ಕಷ್ಟಸಾಧ್ಯ. ಆದಕಾರಣ ಪ್ರತಿ ಬಾರಿ ಹೇಳುವಾಗೆ ಈ ಬಾರಿಯೂ ಮತ್ತೊಮ್ಮೆ ಹೇಳುತ್ತಿದ್ದೇವೆ ಅವಶ್ಯಕತೆ ಇಲ್ಲದಂತಹ ಜಾಹೀರಾತುಗಳನ್ನು ಸುಮ್ಮನೆ ಒಮ್ಮೆ ನೋಡೋಣ ಎಂದು ಭಾವಿಸಿ ಕ್ಲಿಕ್ಕಿಸಿ ಮೋಸ ಹೋಗದಿರಿ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಶ್ಕಾಂತರಾಜ್.ಕೆ ರವರು ಇದೇ ತಿಂಗಳ ಜೂನ್ 26 ರಂದು ಸಂಜೆ ಸಮಯ ಠಾಣೆಯಲ್ಲಿದ್ದಾಗ…
ಹೊನ್ನಾವರ: ಮಹಿಳೆಯರ ಗೌರವ ಮತ್ತು ಗೌಪ್ಯತೆ ಕಡೆಗಣಿಸುವ ಆತ್ಮಹೀನ ಕೃತ್ಯವೊಂದು ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಸ್ನಾನ ಮಾಡುವ ಮಹಿಳೆಯನ್ನೇ ಇಣುಕಿ…
ಧಾರವಾಡ: ನಗರದ ಹಳೆ ಕೋರ್ಟ್ ವೃತ್ತದ ಬಳಿ ಆಘಾತಕಾರಿ ಘಟನೆ ಒಂದರಲ್ಲಿ, ಕಂಠಪೂರ್ತಿ ಮದ್ಯಪಾನ ಮಾಡಿಕೊಂಡು ಆಟೋ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು…
ಹುಬ್ಬಳ್ಳಿ, ಜೂನ್ 27 – ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದ ಸಂಯುಕ್ತ ತಪಾಸಣೆಯಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.…
ಬೆಂಗಳೂರು: ಕರ್ನಾಟಕ ಬಿಜೆಪಿ ಶಿಬಿರದಲ್ಲಿ ಆಂತರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದು, ನಾಯಕತ್ವದ ವಿರುದ್ ಸಮಾಧಾನ ದಿನದಿಂದ ದಿನಕ್ಕೆ…
ಮಂಗಳೂರು: ವಿವಾದಾತ್ಮಕ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರಮುಖ…