ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ಆಕಳು ಸಾವನ್ನಪ್ಪಿರುವ ಘಟನೆ ಜರುಗಿದೆ.
ಸದಾನಂದ ಶಿವರಾಯಪ್ಪ ಜ್ಯೋತೀಬಾನವರ ಎಂಬುವವರಿಗೆ ಸೇರಿದ ಆಕಳು ತಮ್ಮ ಹೊಲದಲ್ಲಿ (ಸರ್ವೆ ನಂಬರ್ 158) ಕೊಟ್ಟಿಗೆಯ ಮನೆ ಎದುರಿಗೆ ಇರುವ ಮಾವಿನ ಮರಕ್ಕೆ ಕಟ್ಟಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದೆ.ಘಟನೆ ನಡೆದ ಸ್ಥಳಕ್ಕೆ ಚಿಗಳ್ಳಿಯ ಪಶು ವೈದ್ಯಾಧಿಕಾರಿ ಎಮ್.ಸಿ.ತಟ್ಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ರಾಣದೇವ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಮಂಜುನಾಥ ಹರಿಜನ

Related News

error: Content is protected !!