ಬೆಂಗಳೂರು ನಗರದ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಧನಂಜಯ್ ಸೇರಿದಂತೆ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರ ಪ್ರಕಾರ, ಧನಂಜಯ್ ನೇತೃತ್ವದಲ್ಲಿ ಬಂದ ಗುಂಪೊಂದು ಶಾಲೆಯ ಆವರಣದಲ್ಲಿ ಧ್ವಂಸ ಕಾರ್ಯ ನಡೆಸಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ.

ಧಾಸರಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನಂಜಯ್ ಅವರಿಗೆ ಸೇರಿರುವ ಖಾಸಗಿ ಶಾಲೆ ಶಾರದಾ ವಿದ್ಯಾನಿಕೇತನದ ಪಕ್ಕದಲ್ಲಿದೆ. ಆದರೆ, ಈ ಭಾಗದಲ್ಲಿ ಎನ್‌ಪಿಎಸ್ ಶಾಲೆ ಆರಂಭಿಸಲು ಕಾನೂನು ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಶಾಲೆಯ ಆಸ್ತಿಯ  ಕುರಿತು ವಿವಾದ ನಡೆಯುತ್ತಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ಜಾರಿಯಲ್ಲಿದೆ.

ಆದರೂ ಮೇ 2ರಂದು ಧನಂಜಯ್ ಮತ್ತು ಅವರ ಗುಂಪು ಕೋರ್ಟ್ ಆದೇಶವನ್ನು ಲೆಕ್ಕಿಸದೇ ಶಾಲೆಯ ಆವರಣ ಪ್ರವೇಶಿಸಿ ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ. ಈ ವೇಳೆ ಶಾಲೆಯ ಕಿಟಕಿ, ಬಾಗಿಲು, ಸಿಸಿ ಕ್ಯಾಮೆರಾಗಳನ್ನು ನಾಶಮಾಡಲಾಗಿದ್ದು, ಮಕ್ಕಳ ದಾಖಲೆಗಳು ಮತ್ತು ನಗದು ಕಳ್ಳತನವಾಗಿದೆ ಎಂಬ ದೂರು ದಾಖಲಾಗಿದೆ.

ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಈ ಜಾಗವನ್ನು ಸರ್ಕಾರ ಲೀಸ್‌ನಲ್ಲಿ ನೀಡಿತ್ತು. ಧನಂಜಯ್ ಈ ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದರು. ಲೀಸ್ ಅವಧಿ 2023ರಲ್ಲೇ ಮುಕ್ತಾಯಗೊಂಡಿದ್ದರೂ, ಶಾಲೆಯ ಆಸ್ತಿಯ ಮೇಲಿನ ಹಕ್ಕು ಪಡೆದರೆಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ಆವರಣದಲ್ಲಿ ಭದ್ರತಾ ವ್ಯವಸ್ಥೆ ತೀವ್ರಗೊಳಿಸಲಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಲ್ಲಿ ಈ ಘಟನೆ ಭಯವನ್ನುಂಟುಮಾಡಿದೆ.

Related News

error: Content is protected !!