Latest

ಹಗಲಿನಲ್ಲಿ ನೊಣ, ರಾತ್ರೀ ಸೊಳ್ಳೆ ಕಾಟದಿಂದ ಬೇಸತ್ತ ನವಲಗುಂದ ನಿವಾಸಿಗಳು.

ಧಾರವಾಡ ಜಿಲ್ಲೆಯ ನವಲಗುಂದ ವ್ಯಾಪ್ತಿಯ ಬಸವೇಶ್ವರನಗರದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯ ಉಪಯೋಗಕ್ಕೆ ತರಿಸಿಕೊಂಡಿದ್ದ ಮಣ್ಣು ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದು ಸ್ಥಳೀಯರ ನಿದ್ದೆ ಕೆಡಿಸುವಂತಾಗಿದೆ ಇದನ್ನು ಸ್ಥಳೀಯ ಗುತ್ತಿಗೆದಾರರು ಹಾಗೂ ನವಲಗುಂದ ಪುರಸಭೆ ಅಧಿಕಾರಿಗಳು ಕಂಡರೂ ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ . ಕಳೆದ 8-10 ದಿನಗಳಿಂದ ಬಸವೇಶ್ವರ ನಗರದಲ್ಲಿ ಭರದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇತ್ತೀಚೆಗೆ ಯಾಕೋ ವಿಳಂಬವಾಗಿಬಿಟ್ಟಿದೆ ಮತ್ತು ಈ ಕಾಮಗಾರಿಗೆ ತರಿಸಿಕೊಂದಿದ್ದ ಗರಸು ಮಣ್ಣು ರಸ್ತೆ ಪಕ್ಕದಲ್ಲಿ ಚರಂಡಿಯಲ್ಲಿ ಬಿದ್ದಿದ್ದು ಸ್ಥಳೀಯ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ ಚರಂಡಿಯಲ್ಲಿ ಬಿದ್ದಿರುವ ಮಣ್ಣನ್ನು ತೆಗೆಯಿರಿ ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಸಮಸ್ಯೆ ಆಗುತ್ತದೆ ಎಂದೂ ಕೇಳಿಕೊಂಡರು ಅಧಿಕಾರಿಗಳ ಇತ್ತ ಗಮನ ಹರಿಸುತ್ತಿಲ್ಲ. ಇನ್ನೂ ಮಣ್ಣು ಬಿದ್ದಿರುವ ಈ ಚರಂಡಿಯಲ್ಲಿ ಚರಂಡಿಯ ಮೂಲಕ ಹರಿದುಕೊಂಡು ಬಂದ ಕೊಳಕು ನೀರು ಒಂದೇ ಕಡೆ ಸಂಗ್ರಹವಾಗಿ ಬೆಳಿಗ್ಗೆ ಸಮಯದಲ್ಲಿ ನೊಣಗಳ ಕಾಟ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈ ಕಾಟದಿಂದ ಸ್ಥಳೀಯ ನಿವಾಸಿಗಳು ಬೇಸತ್ತು ಹಿಡಿ ಶಾಪ ಹಾಕುವಂತಾಗಿದೆ ಅಷ್ಟೇ ಅಲ್ಲದೇ ತಕ್ಷಣ ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಮಣ್ಣು ತಗೆದು ಸ್ಥಳೀಯರಿಗೆ ಸರಿಯಾದ ರಸ್ತೆ ನಿರ್ಮಿಸಿಕೊಡಬೇಕು ಇಲ್ಲವಾದರೆ ಈ ಕಾಮಗಾರಿಯನ್ನೇ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ : ಶಿವು

ಭ್ರಷ್ಟರ ಬೇಟೆ

Recent Posts

ಕೆರೆಗೆ ಬಿದ್ದು ಜೀವ ಕಳೆದುಕೊಂಡ ಮೂರು ವರ್ಷದ ಅವಳಿ ಮಕ್ಕಳು: ಯರಿ ನಾರಾಯಣಪುರದಲ್ಲಿ ದುರ್ಘಟನೆ, ಗ್ರಾಮದಲ್ಲಿ ಆಕ್ರಂದನ

ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ಮಗುಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಮನೆಯ…

21 minutes ago

ಪ್ರಚಾರ ವಿವಾದಕ್ಕೆ ರಚಿತಾ ರಾಮ್ ಗಟ್ಟಿ ಪ್ರತಿಕ್ರಿಯೆ: ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ!

ಬೆಂಗಳೂರು: 'ಸಂಜು ವೆಡ್ಸ್ ಗೀತಾ-2' ಸಿನಿಮಾ ತಂಡ ಮತ್ತು ನಟಿ ರಚಿತಾ ರಾಮ್ ನಡುವಿನ ವೈಮನಸ್ಸು ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಿಂದ…

34 minutes ago

ಭಟ್ಕಳದಲ್ಲಿ ಜೂಜಾಟದ ಕ್ಲಬ್ ಮೇಲೆ ದಾಳಿ : 25 ಮಂದಿ ವಿರುದ್ಧ ಪೊಲೀಸ್ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಕಲ್ಬಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಖಾಸಗಿ ಕ್ಲಬ್‌ನಲ್ಲಿ ಜೂಜಾಟ ನಡೆಯುತ್ತಿತ್ತು ಎಂಬ…

1 hour ago

30 ವರ್ಷದ ಹಿಂದಿನ ಲಂಚ ಪ್ರಕರಣ: ನಿವೃತ್ತಿಗೆ 10 ವರ್ಷವಾದ ಮೇಲೆ ಗ್ರಾಮ ಲೆಕ್ಕಾಧಿಕಾರಿಗೆ ಜೈಲುದಂಡ

ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ…

5 hours ago

“ಶೇ.100ಫಲಿತಾಂಶದ ನಾಟಕದ ಹಿಂದೆ ಸುಳ್ಳು ಆಟ: ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳ ದುರ್ಬಳಕೆ”

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…

11 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

1 day ago