ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಫೆಫಾನಾ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಮ್ದರಿಯಾ ಗ್ರಾಮದಲ್ಲಿ, ಯುವತಿಯೊಬ್ಬಳು ಮದುವೆಗೆ ಒಪ್ಪಿಗೆ ನೀಡದ ಕಾರಣ ಯುವಕನೊಬ್ಬ ನೇರವಾಗಿ ಅವಳ ಮನೆ ಬಾಗಿಲಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮಾಹಿತಿಯಂತೆ, ಆ ಯುವಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಬದಲು ನೇರವಾಗಿ ಯುವತಿಯ ಮನೆಗೆ ಹೋಗಿದ್ದ. ತನ್ನ ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದುಕೊಂಡು, ಯುವತಿಗೆ ಮದುವೆಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುವ ಯತ್ನ ಮಾಡಿಕೊಂಡನು. ಆದರೆ ಯುವತಿ ನಿರಾಕರಿಸಿದಾಗ, ಆತ ತಕ್ಷಣವೇ ಮನೆಯಿಂದ ಹೊರಬಂದು ತನ್ನ ಮೆಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡನು.

ಘಟನೆಯು ಗ್ರಾಮಸ್ಥರಲ್ಲಿ ಭಯದ ತರಂಗ ಮೂಡಿಸಿತು. ಸ್ಥಳೀಯರು ಅವನನ್ನು ರಕ್ಷಿಸಲು ಪ್ರಯತ್ನಿಸಿದರೂ, ಬೆಂಕಿಯ ತೀವ್ರತೆ ಜಾಸ್ತಿಯಾಗಿದ್ದರಿಂದ ಯಾರೂ ಸಹ ನೆರವಿಗೆ ನಿಲ್ಲಲು ಧೈರ್ಯಮಾಡಿರಲಿಲ್ಲ. ತೀವ್ರವಾಗಿ ಸುಟ್ಟಿದ್ದ ಯುವಕನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವನ ಗಾಯಗಳ ಗಂಭೀರತೆಯನ್ನು ಮನಗಂಡ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ವಾರಣಾಸಿಯ ಬನಾರಸ್ ಹಿಂದೂ ಯೂನಿವರ್ಸಿಟಿ (BHU) ಆಸ್ಪತ್ರೆಗೆ ರವಾನಿಸಿದರು.

ಈ ಭಯಾನಕ ಘಟನೆ ಸುತ್ತಮುತ್ತದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ಈಗಲೇ ತನಿಖೆ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಲ್ಲಿಯಾ ಜಿಲ್ಲಾ ಪೊಲೀಸ್ ಅಧಿಕಾರಿಗಳು, “ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಯುವಕನಿಗೆ ಚಿಕಿತ್ಸೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಂತರ ನೀಡಲಾಗುವುದು,” ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Related News

error: Content is protected !!