ಶ್ರೀನಿವಾಸಪುರ: ಕೋಲಾರ (ಜಿ) ಶ್ರೀನಿವಾಸಪುರ ಪೊಲೀಸರಿಂದ ಎರಡು ಪ್ರತ್ಯೇಕ ಜೂಜಾಟದ ಅಡ್ಡೆಗಳ ಮೇಲೆ ದಾಳಿ, ಹಣಕ್ಕಾಗಿ ಜೂಜಾಟ ನಡೆಸುತ್ತಿದ್ದ 14 ಜನರ ಬಂಧನ.

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರು ನಿಖಿಲ್ ಬಿ. ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ರವಿಶಂಕರ್ ಮತ್ತು ಜಗದೀಶ್ ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಉಪವಿಭಾಗದ ಪೋಲಿಸ್ ಉಪಾಧೀಕ್ಷಕರಾದ ನಂದಕುಮಾರ್ ಮುಂದಾಳತ್ವದಲ್ಲಿ ಮೆಹಬೂಬ್ ಬಾಷಾ ಗೊರವನಕೊಳ್ಳ ಪಿ.ಐ ಶ್ರೀನಿವಾಸಪುರ ಪೊಲೀಸ್ ಠಾಣೆ ರವರಿಗೆ ಭಾತ್ಮಿದಾರರಿಂದ ಎರಡು ಪ್ರತ್ಯೇಕ ಸ್ಥಳದಲ್ಲಿ ಬೆಟ್ಟಿಂಗ್,ಇಸ್ಪೀಟು ಜೂಜಾಟ ಧಂದೆ ನಡೆಯುತ್ತಿರುವ ಶ್ರೀನಿವಾಸಪುರ ತಾಲ್ಲೂಕು ಬಾಗಲಹಳ್ಳಿ ಕೆರೆಯ ಅಂಗಳದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸ್ಥಳಕ್ಕೆ ಹೋಗಿ ನೋಡಲಾಗಿ 04 ಜನರ ಗುಂಪು ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜೂಜಾಟ ಆಡುತ್ತಿದ್ದು ಇವರನ್ನು ಬಂಧಿಸಿ 04 ಜನರಿಂದ ಪಣಕ್ಕಿಟ್ಟಿದ್ದ 5000 /- ರೂಗಳನ್ನು ವಶಪಡಿಸಿಕೊಂಡು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮತ್ತೊಂದು ಕಡೆ ಕಡೆ ಶ್ರೀನಿವಾಸಪುರ ತಾಲ್ಲೂಕು ದಳಸನೂರು ಅರಣ್ಯದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, 10 ಜನರ ಗುಂಪು ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜೂಜಾಟ ಆಡುತ್ತಿದ್ದು ಇವರನ್ನು ಬಂಧಿಸಿ ಅವರಿಂದ ಪಣಕ್ಕಿಟ್ಟಿದ್ದ 9000 /- ರೂಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಚರಣೆಯಲ್ಲಿ ಶ್ರೀನಿವಾಸಪುರ ಠಾಣಾ ಪಿ.ಎಸ್.ಐ ಜಯರಾಮ್. ಮತ್ತು ಸಿಬ್ಬಂದಿ ಪ್ರಕಾಶ್, ಮಂಜುನಾಥ, ರೆಡ್ಡೆಪ್ಪ, ರಮೇಶಬಾಬು, ಶಿವಾನಂದ್. ಸಂಪತಕುಮಾರ್. ಸಂತೋಷಕುಮಾರ್, ಪತ್ರಿಬಸಪ್ಪ ರವರರೊಂದಿಗೆ ಎರಡು ಕಡೆ ದಾಳಿ ನಡೆಸಿ ವೊಟ್ಟು 14 ಜನರ ಮೇಲೆ ಕಾನೂನು ಕ್ರಮ ಕೈಕೊಂಡಿದ್ದಾರೆ.
ಈ ಎರಡು ಪ್ರತ್ಯೇಕ ಜೂಜು ಅಡ್ಡೆಗಳ ಮೇಲೆ ದಾಳಿ ಕಾರ್ಯಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಐ.ಪಿ.ಎಸ್ ಶ್ಲಾಘಿಸಿದ್ದಾರೆ. ವರದಿ: ರೋಶನ್ ಜಮೀರ್

Related News

error: Content is protected !!