ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹೊಂದಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಇದೀಗ ವಿಚಾರಣಾ ಕೈದಿಯಿಂದ ಸಜಾಬಂಧಿಯಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಸಂಖ್ಯೆ 15528ರೊಂದಿಗೆ ತಮ್ಮ ಜೀವಿತದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
ನೀತಿ ನಿಯಮಗಳ ಪ್ರಕಾರ, ಸಜಾಬಂಧಿ ಕೈದಿಗಳಂತೆ ಪ್ರಜ್ವಲ್ ರೇವಣ್ಣ ಇದೀಗ ಜೈಲಿನ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇಂದಿನಿಂದ ಅವರು ವಿಶೇಷವಾಗಿ ನೀಡಲಾದ ಬಿಳಿ ಕೈದಿ ಸಮವಸ್ತ್ರ ಧರಿಸಬೇಕಿದೆ. ಜೊತೆಗೆ, ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಜೈಲಿನೊಳಗಿನ ಕೌಶಲ್ಯಾಧಾರಿತ ಕೆಲಸಗಳಲ್ಲಿ ಭಾಗವಹಿಸುವುದು ಅವಶ್ಯಕ.
ಜೈಲು ಇಲಾಖೆ ನಿಯಮದಂತೆ, ಪ್ರಜ್ವಲ್ ತಮ್ಮ ಇಚ್ಛೆಯಂತೆ ಕರಕುಶಲ ವಸ್ತು ತಯಾರಿಕೆ, ಮರ ಕೆಲಸ ಅಥವಾ ಇತರೆ ಕೆಲಸಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಿದೆ. ಆಯ್ಕೆ ಮಾಡಿದ ಕೆಲಸಕ್ಕೆ ಅನುಗುಣವಾಗಿ ಅವರಿಗೆ ಸಂಬಳ ನೀಡಲಾಗುವುದು. ಪ್ರಾರಂಭದಲ್ಲಿ ‘ಅನ್ಸ್ಕಿಲ್ಡ್’ ವರ್ಗದ ಕೈದಿಗಳಂತೆ ತಿಂಗಳಿಗೆ ₹524 ಸಂಬಳ ನೀಡಲಾಗುತ್ತದೆ. ನಂತರ ಕೌಶಲ್ಯ ಮತ್ತು ಅನುಭವವನ್ನು ಆಧರಿಸಿ ‘ಸೆಮಿ-ಸ್ಕಿಲ್ಡ್’ ಹಾಗೂ ‘ಸ್ಕಿಲ್ಡ್’ ವರ್ಗಗಳಿಗೆ ಬಡ್ತಿ ನೀಡಿ ಸಂಬಳವನ್ನೂ ಹೆಚ್ಚಿಸಲಾಗುತ್ತದೆ.
ನಿನ್ನೆವರೆಗೆ ವಿಚಾರಣಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಪ್ರಜ್ವಲ್, ಇದೀಗ ಸಜಾಬಂಧಿ ಕೈದಿಯಾಗಿ ವಿಶೇಷ ಸೆಲ್ಗೆ ಸ್ಥಳಾಂತರಗೊಂಡಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ತೀರ್ಮಾನಿತ ಶಿಕ್ಷೆಯನ್ನು ಪೂರೈಸುವವರೆಗೆ ಅವರು ಈ ನಿಯಮಬದ್ಧ ಜೀವನಕ್ಕೆ ಒಳಪಡುವುದು ಅನಿವಾರ್ಯ.
ಇದರಿಂದಾಗಿ, ರಾಜಕೀಯವಾಗಿ ಶಕ್ತಿಶಾಲಿ ಕುಟುಂಬದಿಂದ ಬಂದಿರುವ ಪ್ರಜ್ವಲ್ ರೇವಣ್ಣರ ಜೀವನದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಈಗಿನಿಂದ ಅವರನ್ನು ರಾಜಕೀಯ ನಾಯಕನಾಗಿ ಅಲ್ಲ, ಕೈದಿಯಾಗಿ ಗುರುತಿಸಲಾಗುತ್ತಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088070392
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…