ಭಾರತದ ನಿಜವಾದ ಶಕ್ತಿ ಮತ್ತು ಆತ್ಮವನ್ನು ಥಡೆಯುವ ಭಯೋತ್ಪಾದಕರ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಭವಿಸಿದ ಭೀಕರ ದಾಳಿಯ ವಿರುದ್ಧ ಕಿಡಿಕಾರಿದರು.

“ಇದು ಪ್ರವಾಸಿಗರ ವಿರುದ್ಧ ನಡೆದ ದಾಳಿ ಅಲ್ಲ, ಇದು ಭಾರತ ದೇಶದ ಆತ್ಮದ ಮೇಲೆ ಮಾಡಲಾದ ಕ್ರೂರ ಹಲ್ಲೆ,” ಎಂದು ಪ್ರಧಾನಿಯವರು ಎಚ್ಚರಿಕೆಯ ಸಂದೇಶವೊಂದನ್ನು ಭಯೋತ್ಪಾದಕರಿಗೆ ಕಳಿಸಿದರು. “ಅಮಾಯಕ ಜನರನ್ನು ನಿರ್ದಯವಾಗಿ ಕೊಂದು ಭಯಹುಟ್ಟಿಸಿರುವ ಉಗ್ರರು ತಪ್ಪಿಸಿಕೊಳ್ಳಲಾರರು. ಅವರನ್ನು ಹುಡುಕಿ ಹುಡುಕಿ ಹೊಡೆಯುವುದು ನಮ್ಮ ಸಂಕಲ್ಪ. ದೇಶದ ಶತ್ರುಗಳಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ,” ಎಂದು ಅವರು ಉಗ್ರರ ವಿರುದ್ಧ ಕಠಿಣ ನಿಲುವು ಪ್ರಕಟಿಸಿದರು.

ದೇಶದ ಎಲ್ಲಾ ನಾಗರಿಕರಿಗೆ ಗೌರವ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಮೋದಿ ಪುನರುಚ್ಛರಿಸಿದರು. “ಕನ್ನಡಿಗರು ಸೇರಿದಂತೆ ಭಾರತದ ವಿವಿಧೆಡೆಯಿಂದ ಬಂದಿರುವ ಅಮಾಯಕರನ್ನು ಈ ಭಯೋತ್ಪಾದಕರು ಗುರಿಯಾಗಿಸಿದ್ದಾರೆ. ಇದು ಸಹಿಸಿಕೊಳ್ಳಲಾಗದು,” ಎಂದ ಅವರು, ಭದ್ರತಾ ಪಡೆಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ ಎಂಬ ಭರವಸೆಯನ್ನು ಜನತೆಗೆ ನೀಡಿದರು.

Related News

error: Content is protected !!