Latest

ಉಡುಪಿಯಲ್ಲಿ ಮಟ್ಕಾ ಜಾಲ ಭೇದಿಸಿದ ಪೊಲೀಸರು: ಬೃಹತ್ ಕಾರ್ಯಾಚರಣೆಯಲ್ಲಿ 12 ಮಂದಿ ಅರೆಸ್ಟ್.

ಉಡುಪಿ, ಜೂನ್ 2: ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದು, ಸೋಮವಾರದಂದು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಭಾಗವಾಗಿ, ಮಟ್ಕಾ ದಂಧೆ ಮೇಲೆ ಬಿರುಸಿನ ದಾಳಿ ನಡೆದಿದೆ.

ಇದೇ ದಂಧೆಯ ಸಂಬಂಧ ಶಿರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದಿನ ದಿನದಂದು ಬಂಧಿತನಾಗಿದ್ದ ಲಿಯೋ ಕರ್ನೆಲಿಯೋ ಎಂಬ ಮಟ್ಕಾ ಬುಕ್ಕಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಉಡುಪಿಯ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಮುಂದುವರೆದ ಕಾರ್ಯಾಚರಣೆಯಲ್ಲಿ 12 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತರು ಈ ಕೆಳಗಿನವರು:

ಮಲ್ಪೆ ಠಾಣೆ ವ್ಯಾಪ್ತಿಯಿಂದ: ಹಿರಿಯಡ್ಕ ಪಂಚನಬೆಟ್ಟುವಿನ ಪ್ರಕಾಶ್ ಮೂಲ್ಯ (43) ಮತ್ತು ಮಲ್ಪೆಯ ರತ್ನಾಕರ ಅಮೀನ್ (48)

ಮಣಿಪಾಲದಿಂದ: ಇಂದಿರಾನಗರದ ನಾಗೇಶ್ (56)

ಕೋಟ ಠಾಣೆಯಿಂದ: ಕಾರ್ಕಡದ ವಿಜಯ ನಾಯರಿ (50)

ಉಡುಪಿ ನಗರ ಠಾಣೆಯಿಂದ: ಪೇತ್ರಿಯ ದಿವಾಕರ ಪೂಜಾರಿ (42), ಶಿರಿಬೀಡು ಮಠದ ಬೆಟ್ಟುವಿನ ರಾಮ್‌ರಾಜ್ (44), ಮೂಡಸಗ್ರಿಯ ಜಗದೀಶ್ (39), ಕೊಪ್ಪಳ ಮೂಲದ ಅಂಬಾಗಿಲಿನ ಚಿದಾನಂದ (35), ಮಧ್ವನಗರದ ತಿಪ್ಪೆಸ್ವಾಮಿ (52), ಬಾಬು ನಾಯಕ್ ನಗರದ ರಾಘವೇಂದ್ರ (41), ಉಡುಪಿ ಪುತ್ತೂರಿನ ಉದಯ ಎಸ್. ಭಂಡಾರಿ (45)

ಪಡುಬಿದ್ರಿ ಠಾಣೆಯಿಂದ: ಉಚ್ಚಿಲದ ಮನೋಜ್ ಕುಮಾರ್ (39)

ಈ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದೆ. ಜಿಲ್ಲೆಯಾದ್ಯಂತ ಮಟ್ಕಾ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

nazeer ahamad

Recent Posts

ಆದೇಶ ಉಲ್ಲಂಘನೆ ಹಾಗೂ ಹಣಕಾಸು ದುರ್ನಿಯಾದ ಮೇಲೆ ಪಿಡಿಒ ಅಮಾನತು

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಯಲ್ಲಿ ಸೇವೆ ನಿರ್ವಹಿಸುತ್ತಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶ್ವೇತಾ ಕುಲಕರ್ಣಿ…

9 hours ago

ಹುಬ್ಬಳ್ಳಿಯಲ್ಲಿ ಪೈಪ್‌ಲೈನ್ ಕಾಮಗಾರಿಯಲ್ಲಿ ದುರಂತ: ಮಣ್ಣು ಕುಸಿತದಿಂದ ಕಾರ್ಮಿಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿದ್ದ ಪೈಪ್‌ಲೈನ್ ಕಾಮಗಾರಿಯ ವೇಳೆ ಭೀಕರ ದುರಂತ ಸಂಭವಿಸಿದ್ದು, ಮಣ್ಣು ಕುಸಿತದಿಂದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು,…

15 hours ago

ಬ್ರಹ್ಮಾವರದಲ್ಲಿ ₹20,000 ಲಂಚದ ಪ್ರಕರಣ: ಮೆಸ್ಕಾಂ ಎಂಜಿನಿಯರ್ ಅಶೋಕ್ ಪೂಜಾರಿ ಲೋಕಾಯುಕ್ತ ಬಲೆಗೆ

ಅಧಿಕಾರಿಗಳು ಅಚ್ಚರಿ ದಾಳಿ ನಡೆಸಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್  ಅಶೋಕ್ ಪೂಜಾರಿಯನ್ನು ₹20,000 ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದಾರೆ. ಸಾರ್ವಜನಿಕನೊಬ್ಬರು…

16 hours ago

ಬೆಂಗಳೂರು: ಲಂಚ ಪಡೆಯುವ ವೇಳೆ ಕೆಐಎಡಿಬಿ ಅಧಿಕಾರಿ ಲೋಕಾಯುಕ್ತ ಬಲೆಗೆ.

ಬೆಂಗಳೂರು ನಗರದಲ್ಲಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬೆಳವಣಿಗೆ ಕಂಡಿದೆ. ಕೆಐಎಡಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ವೆ ಮೇಲ್ವಿಚಾರಕ (ಸೂಪರ್ ವೈಸರ್) ನರೇಂದ್ರ ಕುಮಾರ್,…

17 hours ago

ಮಣಿಪಾಲ: ದಾಳಿ ನಡೆದ ಡಿ.ಕ್ಲಾಸಿಕೋ ಲಾಡ್ಜ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ಬಯಲು, ಓರ್ವನ ಬಂಧನ

ಉಡುಪಿ ಜಿಲ್ಲೆಯ ಮಣಿಪಾಲದ ದಶರಥನಗರದಲ್ಲಿರುವ ಡಿ.ಕ್ಲಾಸಿಕೋ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಮೇರೆಗೆ…

18 hours ago

ಚಾಕಲೇಟ್ ಕಳವು ಆರೋಪದಲ್ಲಿ ಐದು ಬಾಲಕರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಂಗಡಿ ಮಾಲಿಕ

ಬಿಹಾರ್ ರಾಜ್ಯದ ಸೀತಾರ್ಮಹಿಯ ಮಲ್ಲಾಹಿ ಗ್ರಾಮದಲ್ಲಿ ನಡೆದ ಮಾನವೀಯತೆ ಮರೆತ ಘಟನೆ ಇಡೀ ದೇಶದ ಗಮನಸೆಳೆದಿದೆ. ಒಂದಷ್ಟು ಚಾಕಲೇಟ್ ಕದ್ದಿದ್ದಾರೆ…

20 hours ago