ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಭಾನುವಾರ ಪಶು ಸಾಗಾಟದ ವೇಳೆ ಪೊಲೀಸರು ಪಿಕಪ್ ವಾಹನವೊಂದನ್ನು ವಶಪಡಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಲಕ್ಕವಳ್ಳಿಗೆ ಅಕ್ರಮವಾಗಿ ಆರು ಹಸುಗಳನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಲಕ್ಕವಳ್ಳಿ ಮೂಲದ ಮಣಿ ಎಂಬಾತನು ವಾಹನ ಚಲಾಯಿಸುತ್ತಿದ್ದರೆ, ಕರಣಕುಮಾರ್ ಎಂಬುವನು ಸಹಾಯಕರಾಗಿದ್ದ. ಬಿ.ಎಚ್ ಕೈಮರದ ಬಳಿಯ ಶಾಂತಿಭವನ ಚರ್ಚ್ ಸಮೀಪ ಗಸ್ತುದಲ್ಲಿದ್ದ ಪೊಲೀಸರು ಬಾಳೆಹೊನ್ನೂರು ದಿಕ್ಕಿನಿಂದ ಬರುವ ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ, ಅದರಲ್ಲಿ ಐದು ಹೋರಿ ಮತ್ತು ಒಂದು ದನವನ್ನು ಪತ್ತೆ ಹಚ್ಚಿದರು.

ಪಶು ಸಾಗಾಟಕ್ಕೆ ಅಗತ್ಯವಿರುವ ಯಾವುದೇ ದಾಖಲೆಗಳು ಈ ಇಬ್ಬರೂ ಬಳಿ ಇರಲಿಲ್ಲ. ವಿಚಾರಣೆ ವೇಳೆ ಹಸುಗಳನ್ನು ವಧೆಗೊಳಿಸಲು ಖರೀದಿಸಿರುವುದಾಗಿ ಆರೋಪಿಗಳು ಪೊಲೀಸರಿಗೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಕಾರ್ಯಾಚರಣೆಯನ್ನು ಸಬ್ ಇನ್‌ಸ್ಪೆಕ್ಟರ್ ನಿರಂಜನಗೌಡ ನೇತೃತ್ವದಲ್ಲಿ ನಡೆಸಲಾಗಿದ್ದು, ಸಿಬ್ಬಂದಿಯಾದ ಮಧು, ಪರಮೇಶ್ವರ್ ಮತ್ತು ಕೌಶಿಕ್ ಕೂಡ ಪಾಲ್ಗೊಂಡಿದ್ದರು.

ಈ ಸಂಬಂಧ ಪಶು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗುತ್ತಿದೆ. ವರದಿ ನಜೀರ್ ಅಹ್ಮದ್

Related News

error: Content is protected !!