Latest

ಪೋಕ್ಸೊ ಆರೋಪಿಯಿಂದ ಪೊಲೀಸರಿಗೆ ಹಲ್ಲೆ – ಸ್ಥಳ ಮಹಜರು ವೇಳೆ ನಡೆದ ತೀವ್ರ ಗಲಾಟೆ

ಉಡುಪಿ, ಜುಲೈ 13: ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ, ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ 29 ವರ್ಷದ ಮುಹಮ್ಮದ್ ದಾನಿಶ್ ಎನ್ನುವ ವ್ಯಕ್ತಿ, ರವಿವಾರ ಮಣಿಪಾಲದ ಟ್ಯಾಂಗೋಡು ಹಳ್ಳಿಯಲ್ಲಿ ಮಹಜರು ವೇಳೆ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಹೊಡೆದಾಡುವ ಹಂತಕ್ಕೇರಿದಿದ್ದಾನೆ.

ಮಹಜರು ವೇಳೆ ಆತನನ್ನು ಹಿಡಿದುಕೊಂಡಿದ್ದ ಪೊಲೀಸ್ ಸಿಬ್ಬಂದಿ ರಿತೇಶ್‌ ಮೇಲೆ ದಾನಿಶ್ ದಾಳಿ ನಡೆಸಿ, ಎದೆಗೆ ತಳ್ಳಿದ ಬಳಿಕ ನೆಲಕ್ಕೆ ದೂಡಿದ್ದಾನೆ. ಹತ್ತಿರವೇ ಇದ್ದ ಕಲ್ಲನ್ನು ಎತ್ತಿ ಹೊಡೆಯಲು ಯತ್ನಿಸಿದಾಗ, ಸ್ಥಳದಲ್ಲಿದ್ದ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತಡೆದಿದ್ದಾರೆ. ಆದರೆ ದಾನಿಶ್‌ ಅವರುಗಳ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ. ಆಗ ಪೊಲೀಸರ ಲಾಠಿಚಾರ್ಜ್‌ಗೆ ಒಳಪಟ್ಟು ಎರಡೂ ಕಾಲುಗಳಿಗೆ ಗಾಯಗೊಂಡ ದಾನಿಶ್‌ನನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯಲ್ಲಿ ಗಾಯಗೊಂಡ ರಿತೇಶ್ ಹಾಗೂ ದಾನಿಶ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಅರಿವು ಪಡೆದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭ ಹೆಚ್ಚುವರಿ ಎಸ್‌ಪಿ ಸುಧಾಕರ್ ಎಸ್. ನಾಯ್ಕ್, ಡಿವೈಎಸ್‌ಪಿ ಪ್ರಭು ಡಿ.ಟಿ. ಹಾಗೂ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.

ಆರು ಮಂದಿ ಆರೋಪಿಗಳ ಬಂಧನ

ಜುಲೈ 8ರಂದು ಎಂಟು ವರ್ಷದ ಬಾಲಕಿಯ ಮೇಲೆ ಮಣಿಪಾಲದ ಟ್ಯಾಪ್ಮಿ ರಸ್ತೆಯ ಹಳ್ಳಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದ್ದು, ಜುಲೈ 11ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಉಡುಪಿ ಪೊಲೀಸರ ತಂಡ ದಾನಿಶ್ ಸೇರಿದಂತೆ ಶಾಮಿ, ಮೌಸೀನ್ ಹಾಗೂ ಅಬಿದಾ ಎಂಬ ನಾಲ್ವರನ್ನು ಜುಲೈ 12ರಂದು ಬಂಧಿಸಿದೆ. ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ.

nazeer ahamad

Recent Posts

“ರಾಕ್ಷಸೀ ಕೃತ್ಯ: ಪ್ರೇಮದ ಹೆಸರಿನಲ್ಲಿ ಮಹಿಳೆಯ ಹತ್ಯೆ, ಬಳಿಕ ಖಾಸಗಿ ಭಾಗ ಹರಿದು ಕರುಳು ಹೊರತೆಗೆದ ಕ್ರೂರಿ!”

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನರ್ಬಯಾ ಪ್ರಕರಣವನ್ನು ನೆನಪಿಸುವಂತೆಯೇ ಒಂದು ಹೃದಯವಿದ್ರಾವಕ ಅಪರಾಧ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಪ್ರೇಮಿಕೆಯನ್ನು…

8 hours ago

40 ವರ್ಷದ ವ್ಯಕ್ತಿಯ ಜೊತೆ 13 ವರ್ಷದ ಬಾಲಕಿಯ ಮದುವೆ.!

ಹೈದರಾಬಾದ್, ಜುಲೈ 31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸಂಸ್ಕೃತಿಯ ಕುರಿತಂತೆ ಆತಂಕ ಹೆಚ್ಚಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ…

9 hours ago

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಶುಂಠಿ,ಮಾವು,ಅಡಿಕೆಗೆ ಅವಕಾಶ

ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ…

9 hours ago

ಪೈಪ್ ನಲ್ಲಿ ಸಿಕ್ಕಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಗಸ್ತು ವನಪಾಲಕ ಮುತ್ತುರಾಜ

ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು…

9 hours ago

ಸಿನಿಮಾ ಕ್ಷೇತ್ರದಲ್ಲಿ ಬಿರುಕು ಬಿಡಬೇಡಿ: ರಮ್ಯಾ–ದರ್ಶನ್ ಅಭಿಮಾನಿ ವಿವಾದಕ್ಕೆ ರಾಕ್‌ಲೈನ್ ವೆಂಕಟೇಶ್ ಗಂಭೀರ ಎಚ್ಚರಿಕೆ”

ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ…

10 hours ago

ಅಭಿಮಾನಿಗಳ ಮಾತಿಗೆ ಸಂಯಮ ತರಲು ದರ್ಶನ್ ಜೊತೆ ಮಾತನಾಡುತ್ತೇನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ”

ಮಂಡ್ಯ, ಜುಲೈ 31: "ನಟ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿತನದ ಮೂಲಕ ಕೆಟ್ಟ ಕಾಮೆಂಟ್‌ಗಳು ಮಾಡುತ್ತಿರುವುದು ಅನಾವಶ್ಯಕ.…

11 hours ago