Latest

ಭಾರಿ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ: ಹುಡುಕಾಟದಲ್ಲಿ ಪೋಲಿಸ್ ಮತ್ತು ಅಗ್ನಿಶಾಮಕ ದಳ

ಹುಬ್ಬಳ್ಳಿ: ಧಾರಾಕಾರ ಮಳೆಯಿಂದಾಗಿ ವ್ಯಕ್ತಿಯೋರ್ವನು ಚರಂಡಿಯಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ನಡೆದಿದೆ.

ಬೀರಬಂದ ಓಣಿಯ ನಿವಾಸಿ, 55 ವರ್ಷದ ಹುಸೇನ್ ಕಳಸ ಎಂಬವರು ಈ ದುರ್ಘಟನೆಯು ನಡೆದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ರಾತ್ರಿ 10 ಗಂಟೆಯ ಸುಮಾರಿಗೆ ಹೊಲದಿಂದ ಮನೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದಾಗ, ಏಕಾಏಕಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೊಚ್ಚಿ ಹೋಗಿರುವ ವ್ಯಕ್ತಿಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ವರದಿ: ಶಿವು ಪಿ.ಆರ್.

nazeer ahamad

Recent Posts

ಬೆಳ್ತಂಗಡಿಯಲ್ಲಿ ಭಾರೀ ಮಳೆಗೆ ಮರ ಕುಸಿತ – ಸ್ಕೂಟರ್ ಓಡಿಸುತ್ತಿದ್ದ ದಂಪತಿಗೆ ಗಾಯ

ಬೆಳ್ತಂಗಡಿ ತಾಲೂಕಿನ ಕುಕ್ಕಾವು ಕೊಪ್ಪದ ಗಂಡಿ ಸಮೀಪ ಭಾರೀ ಮಳೆಯ ನಡುವೆಯೇ ಸ್ಕೂಟರ್ ಮೇಲೆ ಮರ ಕುಸಿದು ಬಿದ್ದ ಪರಿಣಾಮ…

5 hours ago

ಆಟವಾಡುತ್ತಿದ್ದ 2 ವರ್ಷದ ಮಗು ಕಾಲುವೆಗೆ ಬಿದ್ದು ದುರ್ಘಟನಾತ್ಮಕ ಸಾವು

ಭಟ್ಕಳ: ತಾಯಿ-ತಂದೆಯ ಕಣ್ಣಿಗೆ ನಂಬಲಾಗದ ದುಃಖ ತರಿದ ಘಟನೆ ಭಟ್ಕಳದ ಆಝಾದ ನಗರದಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಎರಡು…

6 hours ago

ಗೌರಿಬಿದನೂರು ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಇಬ್ಬರು ಸಾವು

ಗೌರಿಬಿದನೂರು : ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ…

7 hours ago

ಪ್ರೀತಿ ಮದುವೆಯ ಬೆನ್ನಲ್ಲೇ ದೌರ್ಜನ್ಯ: ಹುಬ್ಬಳ್ಳಿಯಲ್ಲಿ ಯುವತಿಯನ್ನು ಗೋಣಿ ಚೀಲದಲ್ಲಿ ಎಳೆದೊಯ್ಯಲಾದ ಪೋಷಕರು

ಹುಬ್ಬಳ್ಳಿ: ಪ್ರೇಮಿಸಿ ವಿವಾಹವಾದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ವರದಿಯಾಗಿದೆ.…

9 hours ago

ಚಾರ್‌ಧಾಮ್ ಯಾತ್ರೆ ವೇಳೆ ಹೆಲಿಕಾಪ್ಟರ್ ಅಪಘಾತ: ಐದು ಯಾತ್ರಿಕರು ಸಾವು.

ಉತ್ತರಾಖಂಡದ ಕೆದಾರನಾಥ ಮಾರ್ಗದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಐವರು ಯಾತ್ರಿಕರು ಮೃತಪಟ್ಟಿದ್ದಾರೆ. ಈ ದುರಂತವು…

11 hours ago

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಯುವ ಮುಖಂಡ ವಿರುದ್ಧ ದೂರು.

ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ವಿರುದ್ಧ ಗಂಭೀರ ಆರೋಪಗಳು ಹೊರ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದ ಆಧಾರದ…

11 hours ago