Latest

ಬಂಟನೂರ ಗ್ರಾಮದಲ್ಲಿ ನೀರಿಗಾಗಿ ಪರದಾಡುತ್ತಿರುವ ಜನರು

ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕು ಬಂಟನೂರ ಗ್ರಾಮದಲ್ಲಿ ನೀರಿಗಾಗಿ ಪರದಾಡುತ್ತಿರುವ ಜನರು ಮತ್ತು ಮೂಖ ಪ್ರಾಣಿಗಳು ಗೋಳಾಟ ಕೇಳೋರು ಯಾರು ಇಲ್ಲ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ನಾರಾಯಣಪುರ ಬಸವಸಾಗರ ಡ್ಯಾಂ ನಿಂದ ಕೃಷ್ಣಾ ಮೇಲ್ದಂಡೆ ಎಡದಂಡೆ ಕಾಲುವೆಯಿಂದ ಅಗ್ನಿ ಗ್ರಾಮದ ಹತ್ತಿರ ಕೆರಿಗೆ ನೀರು ಲಿಫ್ಟ್ ಮಾಡಿ ಅಲ್ಲಿಂದ ಬಹು ಹಳ್ಳಿಗಳಿಗೆ ಶುದ್ಧ ಕುಡಿಯೋ ನೀರು ಎಂದು 16 ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಾರೆ. ಈ ನೀರು ಜನರಿಗೆ ಕುಡಿಯೋಕೆ ಯಾವದೇ ರೀತಿ ನೀರು ಶುದ್ಧೀಕರಣ ಆಗಿವರುದಿಲ್ಲ. ಅದರಲ್ಲಿ ಈ ಹಳ್ಳಿಗಳ ಜನರಿಗೆ ನೀರು ಬಿಡುದು ವಾರದಲ್ಲಿ ಒಂದೇ ಒಂದು ದಿನ ಮಾತ್ರ ಅದರಲ್ಲೂ ಆ ಕೆರಿಯಲ್ಲಿ ಒಂದು ಪಂಪ್ ಮೊಟರ್ ಇದ್ದು ಅದು ಏನಾದರೂ ಕೆಟ್ಟರೆ ಅದನ್ನು ರಿಪೇರಿ ಮಾಡಲು ಬಾಗಲಕೋಟೆ ಯಿಂದ ಮೋಟರ್ ರಿಪೇರಿ ಮಾಡುವರು ಬರಬೇಕು ಅವರು ಬಂದು ಮೋಟರ್ ರಿಪೇರಿ ಮಾಡಿ ನೀರು ಬಿಡಬೇಕಾದರೆ ಕನಿಷ್ಠ 15 ರಿಂದ 20 ದಿನಗಳು ಕಾಲ ಬೇಕು ಅದು ಆದಮೇಲೆ ಇಲ್ಲನ ಗುತ್ತಿಗೆದಾರರು ಆ ಕೆರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ಕೊಟ್ಟಿಲ್ಲ ಎಂದು ಬಂಟನೂರ ಗ್ರಾಮಕ್ಕೆ ನೀರು ಬಿಡದೆ 9 ದಿನಗಳು ಆಯಿತು, ಈ ಗ್ರಾಮದಲ್ಲಿ ನೀರು ಯಾವಾಗ ಬಿಟ್ಟರು ಅಥವಾ ಬಿಡದೆ ಇದ್ದರೂ ಕೇಳುವರು ಯಾರು ಇಲ್ಲ .ಇನ್ನಾದರೂ ಜನರ ಕಷ್ಟಕ್ಕೆ ಮೇಲಾಧಿಕಾರಿಗಳೂ ಮುಂದೆ ಬಂದು ಬಂಟನೂರ ಗ್ರಾಮದ ಜನರಿಗೆ ನೀರು ಬಿಡುವ ಕೆಲಸ ಮಾಡಬೇಕಿದೆ.
ವರದಿ: ವೆಂಕಾರೆಡ್ಡಿ

ಭ್ರಷ್ಟರ ಬೇಟೆ

Recent Posts

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

4 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

5 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

1 day ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

1 day ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

1 day ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 days ago