
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಭೇಟಿ ವೇಳೆ ನಡೆದ ಭೀಕರ ಘಟನೆೆಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತನೊಬ್ಬ ದಾರುಣ ಅಂತ್ಯ ಕಂಡಿದ್ದಾರೆ. ವಿಜಯವಾಡದ ತಾಡೆಪಲ್ಲಿ ಬಳಿ ಸಾವಿರಾರು ಅಭಿಮಾನಿಗಳು ಜಗನ್ ರನ್ನು ನೋಡಲು ಕೂಡಿದ್ದ ವೇಳೆ ನಡೆದ ಈ ದುರಂತದಲ್ಲಿ, ಚೀಲಿ ಸಿಂಗಯ್ಯ (65) ಎಂಬ ವೈಎಸ್ಆರ್ಸಿಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ ಮತ್ತೊಬ್ಬ ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ ನೀಡಲು ಜಗನ್ ರೆಂಟಪಲ್ಲಿಗೆ ತೆರಳಿದ್ದರು. ಈ ವೇಳೆ ಜಗನ್ ಆಗಮನದ ಸುದ್ದಿಯೊಂದಿಗೆ ಭಕ್ತರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ತಡರಾತ್ರಿಯೇ ತಾಡೆಪಲ್ಲಿಯಿಂದ ರೆಂಟಪಲ್ಲಿಗೆ ಜಮಾಯಿಸಿದ್ದರು.
ಸರಕಾರದಿಂದ ಕೇವಲ ನೂರು ಮಂದಿ ಮಾತ್ರ ಹಾಜರಾಗುವಂತೆ ಹಾಗೂ ಮೂರು ಕಾರುಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು. ಆದರೆ ಭಾರೀ ಜನಸಂದಣಿಯಲ್ಲಿ ಸಿಂಗಯ್ಯ ಅವರು ಜಗನ್ ಕಾರಿಗೆ ಹೂವಿನ ಹಾರ ಹಾಕಲು ಮುಂದಾದಾಗ, ಅವರು ಅಕ್ಷರಶಃ ಬೆಂಗಾವಲು ವಾಹನದ ತಳದಲ್ಲಿ ಸಿಲುಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಯಾರಿಗೂ ಇದು ಗಮನಿಸದ ಕಾರಣ, ಮೆರವಣಿಗೆ ವಾಹನಗಳು ಅವರ ಮೇಲೆ ಹರಿದು ಹೋಗಿದ್ದು, ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಯಿಂದ ವೈಎಸ್ಆರ್ಸಿಪಿ ಶಿಬಿರದಲ್ಲಿ ಆಘಾತದ ಮೂಡಿದ್ದು, ಪೊಲೀಸರು ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ. ಸಹಜವಾಗಿಯೇ ಭದ್ರತಾ ಲೋಪ, ಜನಸಂದಣಿಯ ನಿರ್ವಹಣೆಯಲ್ಲಿ ವಿಫಲತೆ ಎಂಬ ಪ್ರಶ್ನೆಗಳು ಸಹ ಎದ್ದುಕೊಂಡಿವೆ.