Latest

ಈರುಳ್ಳಿ ಬೆಲೆ ಕುಸಿತ: ಕುಪಕಡ್ಡಿ ಕ್ರಾಸ್ ಬಳಿ ಈರುಳ್ಳಿ ಸುರಿದು ರೈತಾ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿಯಲ್ಲಿ ಈರುಳ್ಳಿ ಬೆಳೆಗಾರರು ರಸ್ತೆ ಮೇಲೆ ಈರುಳ್ಳಿ ಸುರಿದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೂಡ ಕ್ವಿಂಟಾಲಿಗೆ ಕೇವಲ ₹200ಕ್ಕೆ ಹರಾಜಾಗುತ್ತಿರುವುದನ್ನು ವಿರೋಧಿಸಿ ಅವರು ಈ ರೀತಿಯ ಕ್ರಮ ಕೈಗೊಂಡಿದ್ದಾರೆ.

ತೋಟಗಾರಿಕೆ ಎಫ್‌ಪಿಒ ಆವರಣದಲ್ಲಿಯೂ ರೈತರು ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದ್ದು, ದುಡಿದು ಬೆಳೆದ ಬೆಳೆಗೆ ನ್ಯಾಯ ಸಿಗದಿರುವುದರ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೇಲೂ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ ದೃಶ್ಯಗಳು ಗಮನಸೆಳೆದಿವೆ.

“ಬಾಗಲಕೋಟೆಯಲ್ಲಿ ಈರುಳ್ಳಿ ಕ್ವಿಂಟಾಲಿಗೆ ₹1000ಕ್ಕೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ₹200ಗೂ ಹೆಚ್ಚು ಸಿಗುತ್ತಿಲ್ಲ. ನಾವು ಇಷ್ಟೊಂದು ಶ್ರಮವಹಿಸಿ ಬೆಳೆದ ಬೆಳೆಗೆ ಈ ರೀತಿ ನಿರ್ಲಕ್ಷ್ಯವಾಯಿತೆ?” ಎಂದು ಅಸಹನೆಗೊಂಡ ರೈತರು ಬೇಸರ ವ್ಯಕ್ತಪಡಿಸಿದರು.

ಈ ಬೆಳೆಗೆ ಖಾಯಂ ದರ ನಿರ್ಧರಿಸಿ, ರೈತರ ಆರ್ಥಿಕ ನಷ್ಟ ತಪ್ಪಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂಬುದು ರೈತರ ಮುಖ್ಯ ಬೇಡಿಕೆ. ಬೆಲೆ ಕುಸಿತದ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ರೈತ ಸಮುದಾಯ ಒತ್ತಾಯಿಸುತ್ತಿದೆ.

nazeer ahamad

Recent Posts

ಆಯರಹಳ್ಳಿ ಹೊಳೆಯಲ್ಲಿ ತಲೆಹರಿತ ಶವಭಾಗ ಪತ್ತೆ – ಮೈಸೂರು ಜಿಲ್ಲೆಯಲ್ಲಿ ರಹಸ್ಯಮಯ ಮರಣದ ವಿಚಾರಣೆ

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ…

14 hours ago

ಹುಲಸೂರ ಬಳಿ ಹೋರಿಗಳ ಸಾಗಣೆ ತಡೆ: ದಾಖಲೆ ಇಲ್ಲದಿದ್ದರೆ ಕಾನೂನು ಕ್ರಮ ಎಚ್ಚರಿಕೆ..!

ಬಸವಕಲ್ಯಾಣಕ್ಕೆ ಹೋರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ಘಟನೆಯೊಂದು ಶನಿವಾರ ಹುಲಸೂರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಗಡಿಗೌಡಗಾಂವ ಗ್ರಾಮದ ರೈತನಿಗೆ…

14 hours ago

ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳ ಆಟಕ್ಕೆ ಬ್ರೇಕ್: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸರು

ಹುಬ್ಬಳ್ಳಿ-ಧಾರವಾಡದಲ್ಲಿ ಭಯ ಹುಟ್ಟಿಸುತ್ತಿದ್ದ ರೌಡಿಶಾಹಿಗೆ ಕಡಿವಾಣ ಹಾಕಲು ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳು ಇದೀಗ ಗಂಭೀರ ರೂಪ ಪಡೆದಿವೆ.ಹುಬ್ಬಳ್ಳಿ-ಧಾರವಾಡದಲ್ಲಿ ಅಪರಾಧದ ಪ್ರಮಾಣ…

15 hours ago

ಶಿಗ್ಗಾಂವಿಯಲ್ಲಿ ವಾಕರಸಾಸಂ ಬಸ್ ಅಪಘಾತ: 23 ಪ್ರಯಾಣಿಕರಿಗೆ ಗಂಭೀರ ಗಾಯ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಯಾನಕ ಬಸ್ ಅಪಘಾತದಲ್ಲಿ 23 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಾಯುವ್ಯ…

16 hours ago

ಟ್ರೇಡಿಂಗ್ ಲಾಭದ ಆಮಿಷ: ಯುವತಿ ₹4.92 ಲಕ್ಷ ವಂಚನೆಗೆ ಬಲಿ

ಉಡುಪಿ, ಜೂನ್ 6: ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎಂಬ ಆಮಿಷ ನೀಡಿ ಯುವತಿಯನ್ನು ಲಕ್ಷಾಂತರ ರೂ. ವಂಚಿಸಿರುವ ಘಟನೆ…

18 hours ago

ಚಂದಾಪುರ ಸೂಟ್‌ಕೇಸ್‌ ಹತ್ಯೆ ಪ್ರಕರಣದಲ್ಲಿ 7 ಆರೋಪಿಗಳ ಬಂಧನ: ಬಿಹಾರದಲ್ಲಿ ಪೊಲೀಸರ ತುರ್ತು ಕಾರ್ಯಾಚರಣೆ

ಬೆಂಗಳೂರು, ಜೂನ್ 7: ಬೆಂಗಳೂರು ಹೊರವಲಯದ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮೇ 21 ರಂದು ಪತ್ತೆಯಾಗಿದ್ದ ಬಾಲಕಿಯ ಹತ್ಯೆ…

20 hours ago