Latest

ವರದಿಗೆ ಎಚ್ಚೆತ್ತು ಗುಂಡಿ ಮುಚ್ಚಿದ ಅಧಿಕಾರಿಗಳು.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೋಕು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಮ್ಮ ಪತ್ರಿಕಾ ವರದಿಗೆ ಎಚ್ಚೆತ್ತು ಬೂಕನಕೆರೆ ಹೋಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದಾರೆ.
ಬೂಕನಕೆರೆ ಗ್ರಾಮವೂ ಹೋಬಳಿಯ ಕೇಂದ್ರ ವಾಗಿರುವುದರಿಂದ ಇಲ್ಲಿನ ಸ್ಥಳೀಯ ವಾಗಿ ಸಂಪರ್ಕ ಕಲ್ಪಿಸುವ ಕೃಷ್ಣರಾಜಪೇಟೆ ಇಂದ ಮೊದೂರು ಮಾರ್ಗವಾಗಿ ಬೂಕನಕೆರೆಯಿಂದ ಕೆ ಆರ್ ಎಸ್ ಹಾಗು ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂರಾರು ಗುಂಡಿಗಳ್ಳನ್ನು ಮುಚ್ಚಿ ಸರಿಪಡಿಸುವ ಕಾರ್ಯವನ್ನು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗು ಈ ಮಾರ್ಗದಲ್ಲಿ ಸಂಚಾರಿಸುವ ಎಲ್ಲ ವಾಹನ ಸವಾರರಿಗೆ ಸಂತೋಷ ವಾಗಿರುತ್ತದೆ. ಈ ರಸ್ತೆಯಲ್ಲಿ ನೋರ್ರಾರು ಗುಂಡಿಗಳಿದ್ದರು ಇಲ್ಲಿವರೆಗೆ ಯಾವ ಅಧಿಕಾರಿಗಳು ಗಮನ ಹರಿಸದೆ ಕಾಲ ಹರಣ ಮಾಡುತ್ತಿದ್ದರು ಇದರಿಂದ ಈ ಮಾರ್ಗದಲ್ಲಿ ಸಂಚಾರಿಸುವ ಎಲ್ಲರೂ ಅಧಿಕಾರಿಗಳಿಗೆ ಹಾಗು ತಾಲೋಕು ಜನಪ್ರದಿನಿದಿಗಳಿಗೆ ಶಾಪ ಹಾಕುತ್ತ ಕಾಲ ದೂಡುತ್ತಿದ್ದರು. ಬೂಕನಕೆರೆ ಗ್ರಾಮವೂ ಮಾನ್ಯ ಮಾಜಿ ಸಿ ಎಮ್ ಯಡಿಯೂರಪ್ಪ ನವರತವರು ಗ್ರಾಮವಾದರೂ,ಹಾಗು ಇಲ್ಲಿನ ಸುತ್ತ ಮುತ್ತಲಿನ ಸ್ಥಳೀಯ ಗ್ರಾಮದ ಜನರ ಹೋಬಳಿ ಕೇಂದ್ರವಾಗಿದೆ ನಿತ್ಯ ನೂರಾರು ಜನರು ಇಲ್ಲಿ ಓಡಾಡುವುದು ಸಾಮಾನ್ಯವಾಗಿದೆ , ಹಾಗು ಇಲ್ಲಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹಾಳಾಗಿರುತ್ತವೆ,ಆದ್ದರಿಂದ ಇದನ್ನು ಗಮನಿಸಿ ವರದಿ ಮಾಡಿದ ಎರಡು ತಿಂಗಳ ನಂತರ ತಾಲೋಕಿನ ಶಾಸಕಾರದ ಮಂಜಣ್ಣ ನವರ ಗಮನಕ್ಕೆ ಬಂದು ಇದರ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ರಸ್ತೆ ಗುಂಡಿ ಮುಚ್ಚಲು ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದ ನಂತರ ಅಧಿಕಾರಿಗಳು ಈ ರಸ್ತೆಯಲ್ಲಿನ ಗುಂಡಿಗಳ್ಳನ್ನು ಮುಚ್ಚಿ ಸರಿಪಡಿಸಿದ್ದಾರೆ.. ನಮ್ಮ ವರದಿಗೆ ಸ್ವಂದಿಸಿದ ಮಾನ್ಯ ಶಾಸಕರು ಹಾಗು ಅಧಿಕಾರಿಗಳ್ಳನ್ನು ಈ ಮಾರ್ಗದಲ್ಲಿ ಸಂಚಾರಿಸುವ ಜನರು ದಿನವು ನೆನೆಯುತ್ತಾರೆ ಹಾಗು ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಢಾoಬರಿಕರಣ ಮಾಡುವುದಾಗಿ ಶಾಸಕರಾದ ಮಂಜಣ್ಣ ರವರು ಭರವಸೆ ನೀಡಿರುತ್ತಾರೆ. ಹಾಗು ಬೂಕನಕೆರೆ ಗ್ರಾಮವನ್ನು ಮಾದರಿಯಾಗಿ ಹಂತ ಹಂತವಾಗಿ ಅಭಿರುದ್ದಿ ಗೊಳಿಸಲಾಗುವುದು ಎಂದು ತಿಳಿಸಿರುಸುತ್ತಾರೆ.

ವರದಿ: ಎಲ್.ಎನ್ ಮೂರ್ತಿ

ಭ್ರಷ್ಟರ ಬೇಟೆ

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

2 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

2 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

2 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

2 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

2 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

22 hours ago