ಭ್ರಷ್ಟರ ಬೇಟೆ ಪತ್ರಿಕೆ ಸುದ್ದಿ ಇಂಪ್ಯಾಕ್ಟ್: ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಂಡಗಳು ಬಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮೃತ್ಯು ಕೂಪಗಳಾಗಿ ಪರಿವರ್ತನೆಯಾದ ಹೊಂಡಗಳ್ಳನ್ನು ಮುಚ್ಚಿದ ಅಧಿಕಾರಿಗಳು

ಭಟ್ಕಳದ ಮೂಡಭಟ್ಕಳದ ಬೈ ಪಾಸ್ ಹತ್ತಿರ ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗಳು ಬಿದ್ದುಕೊಂಡಿದ್ದರು ಸಹ ಸಬಂದಪಟ್ಟ ಯಾವುದೆ ಅಧಿಕಾರಿಗಳು ಅದನ್ನು ಸರಿ ಪಡಿಸುವ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಮುಟ್ಟಳ್ಳಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ನಾಯ್ಕ ಆಕ್ರೋಶ ಹೊರಹಾಕಿದ್ದರು.ಇದನ್ನು ಭ್ರಷ್ಟರ ಬೇಟೆ ಪತ್ರಿಕೆ ಸುದ್ದಿ ಜುಲೈ ತಿಂಗಳ ಸಂಚಿಕೆಯಲ್ಲಿ ಮುಖಪುಟ ಸುದ್ದಿ ಬಿತ್ತರಿಸಿತ್ತು. ಭ್ರಷ್ಟರ ಬೇಟೆ ಪತ್ರಿಕೆ ಸುದ್ಧಿ ಮಾಡಿದ ಒಂದು ವಾರದಲ್ಲಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಮತ್ತು ಐ. ಆರ್. ಬಿ ಅಧಿಕಾರಿಗಳು ಭಟ್ಕಳ ದ ಬೈ ಪಾಸ ಹತ್ತಿರ ಹೈವೇಯಲ್ಲಿ ಬಿದ್ದ ಹೊಂಡಗಳನ್ನು ಮುಚ್ಚಿ, ರಸ್ತೆ ರಿಪೇರಿ ಮಾಡಿದ್ದಾರೆ.ಇದು ಭ್ರಷ್ಟರ ಬೇಟೆ ಪತ್ರಿಕೆ ವರದಿ ಫಲಶ್ರುತಿಯಾಗಿದೆ. ವರದಿ: ಕುಮಾರ್ ನಾಯ್ಕ್

Related News

error: Content is protected !!