Latest

ಭಾರಿ ಮಳೆಗೆ ಕುಸಿದ ನಾಡಕಚೇರಿ ಕಟ್ಟಡ – ಮುನ್ನೆಚ್ಚರಿಕೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ

ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾರಿ ಮಳೆಗೆ ನಾಡಕಚೇರಿ ಕಟ್ಟಡ ಕುಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಕಟ್ಟಡ ಕುಸಿತದ ವೇಳೆ ಒಳಗಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಲ್ಪಕಾಲದೊಳಗೆ ಹೊರಬಂದದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಈ ಕಟ್ಟಡವನ್ನು ಕೇವಲ ಒಂದು ವರ್ಷದ ಹಿಂದಷ್ಟೇ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿತ್ತು. ಆದರೂ ಸುರಿಯುತ್ತಿರುವ ಮಳೆಗೆ ಕಟ್ಟಡ ತಡೆಯಲಾಗದೇ ಸಂಪೂರ್ಣವಾಗಿ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಪ್ರಶ್ನೆ ಎತ್ತಿದೆ.

ಘಟನೆಯ ಸಮಯದಲ್ಲಿ ಕಚೇರಿಯೊಳಗೆ ಕೆಲ ಅಧಿಕಾರಿಗಳು ಮತ್ತು ಜನರು ಇದ್ದರು. ಕಟ್ಟಡವೇ ಅಜ್ಞಾತವಾಗಿ ಬಿದ್ದಿದ್ದರಿಂದ ಗಭೀರ ಅಪಾಯ ಸಂಭವಿಸಬಹುದಾಗಿತ್ತು. ನಾಡಕಚೇರಿಯಲ್ಲಿದ್ದ ಅನೇಕ ಪ್ರಮುಖ ದಾಖಲೆಗಳು ಮಣ್ಣುಪಾಲಾಗಿವೆ.

ಈ ಕಟ್ಟಡವು ಮೂಲತಃ ಸುಮಾರು 50 ವರ್ಷ ಹಳೆಯ ಶಾಲಾ ಕಟ್ಟಡವಾಗಿದ್ದು, ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವುದನ್ನು ನಾಡಕಚೇರಿ ಕಾರ್ಯಲಯವಾಗಿ ಬಳಸಲಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಮುಗಿಲು ಮುರಿದು ಬೀಳುತ್ತಿರುವ ಮಳೆಯ ಕಾರಣವಾಗಿ ಕಟ್ಟಡದ ಗೋಡೆಗಳು ತೇವದಿಂದ ಬಡಬಡಿಹೋಗಿ ಕೊನೆಗೆ ಧರೆಗುರುಳಿವೆ.

ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಕಾರ್ಯಲಯದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.ಜನತೆ ಸುರಕ್ಷಿತ ಮತ್ತು ಶಾಶ್ವತ ನಾಡಕಚೇರಿ ಕಟ್ಟಡಕ್ಕಾಗಿ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

 

nazeer ahamad

Recent Posts

ಭ್ರಷ್ಟಾಚಾರ ಆರೋಪ ಪಿತೂರಿ: ಬಿ.ಆರ್. ಪಾಟೀಲ್ ವಿರುದ್ಧ ಗುತ್ತೇದಾರ ಗಂಭೀರ ವಾಗ್ದಾಳಿ

ಕಲಬುರ್ಗಿ ಜಿಲ್ಲೆ ಆಳಂದ್‌ ಶಾಸಕ ಬಿ.ಆರ್. ಪಾಟೀಲ್‌ ವಿರುದ್ಧ ಗಂಭೀರ ಆರೋಪ ಹೊರಿಸಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾಧ್ಯಮಗಳ…

18 hours ago

ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ: ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ 5 ಮಂದಿ ಬಂಧನ

ಭಟ್ಕಳ : ಮುರುಡೇಶ್ವರದ ಬಳಿ ಇರುವ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದ ಐವರ…

19 hours ago

ಕಾರ್ಯಕ್ರಮದ ಮಧ್ಯೆ ಮಾಜಿ ಶಾಸಕರ ಜೇಬು ಕತ್ತರಿಸಿ 70 ಸಾವಿರ ರೂ. ಕದ್ದ ಕಳ್ಳನಿಗೆ ಧರ್ಮದೇಟು!

ರಾಯಚೂರು: ಸಚಿವ ಎನ್.ಎಸ್. ಬೋಸರಾಜು ಅವರ ಹುಟ್ಟುಹಬ್ಬದ ನಿಮಿತ್ತ ನಡೆದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಚ್ಚರಿಯ ಕಳ್ಳತನ ಘಟನೆ…

22 hours ago

ಫರಿದಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ: ಯುವತಿ ಶವ 10 ಅಡಿ ಆಳದ ಚರಂಡಿಯಲ್ಲಿ ಪತ್ತೆ, ಅತ್ತೆ-ಮಾವ ಸಹಿತ ನಾಲ್ವರು ಬಂಧನ

ಫರಿದಾಬಾದ್ (ಜೂನ್ 20): ಹರಿಯಾಣದ ಫರಿದಾಬಾದ್‌ನ ರೋಶನ್ ನಗರದ ವಸತಿಬೀದಿಯೊಂದರಲ್ಲಿ 10 ಅಡಿ ಆಳದ ಕಂದಕದಲ್ಲಿ ಸಡಿಲ ಸ್ಥಿತಿಯಲ್ಲಿದ್ದ ಮಹಿಳೆಯ…

23 hours ago

ತಹಶೀಲ್ದಾರರ ಡಿಜಿಟಲ್ ಸಹಿ ನಕಲು: ಜಮೀನು ಅಕ್ರಮ ವರ್ಗಾವಣೆಯ ಹಗರಣ ಬಹಿರಂಗ”

ಬೀದರ್ ಜಿಲ್ಲೆಯಲ್ಲಿ ಸರ್ಕಾರದ ಅಧಿಕಾರಿಗಳನ್ನು ಶಾಕ್‌ಗೆ ಒಳಪಡಿಸುವಂತಹ ಭೂಮಿ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಡಿಜಿಟಲ್ ಸಹಿ ಬಳಸಿ ಒಬ್ಬರ…

1 day ago

ರಾಜಕೀಯ ವೈಷಮ್ಯಕ್ಕೆ ಪ್ರಾಣ ಬಲಿ: ಹಸುವಿಗೆ ಮಚ್ಚಿನಿಂದ ಹಲ್ಲೆ, ಚಿಕಿತ್ಸೆ ಫಲಿಸದೆ ದುರ್ಮರಣ”

ಬೆಂಗಳೂರು: ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿಗೆ ಮಚ್ಚಿಯಿಂದ ಹಲ್ಲೆ ನಡೆಸಿದ ದಾರುಣ ಘಟನೆ ಯಶವಂತಪುರ ವಿಧಾನಸಭಾ ಕ್ಷೇತ್ರದ…

1 day ago