Latest

ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಿದ ತಾಯಿ – ಮಗಳು; ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣ ದಾಖಲು!

ಅಬ್​ ತೇರೆ ಬಿನ್​ ಹಮ್​ ಝೀ ಲೇಂಗೆ ಎಂಬ ಹಾಡಿಗೆ ರೈಲ್ವೆ ಟ್ರ್ಯಾಕ್​​ನಲ್ಲಿ ತಾಯಿ ಹೆಜ್ಜೆ ಹಾಕಿದರೆ ಮಗಳು ಅದನ್ನು ರೆಕಾರ್ಡ್ ಮಾಡಿದ್ದಾಳೆ. ರೈಲು ಹಳಿಗಳ ಮೇಲೆ ತಾಯಿ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರೆ ಮಗಳು ಇದನ್ನು ಮೊಬೈಲ್​ ಕ್ಯಾಮರಾದಲ್ಲಿ ಶೂಟ್​ ಮಾಡುತ್ತಿದ್ದಳು ಎನ್ನಲಾಗಿದೆ.
ವೈರಲ್​ ಆಗಿರುವ ಈ ವಿಡಿಯೋದಲ್ಲಿ, ತಾಯಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರೋದನ್ನು ಕಾಣಬಹುದಾಗಿದೆ. ಬಳಿಕ ರೈಲು ಹಳಿಗಳ ತಾಯಿ ನೃತ್ಯ ಪ್ರದರ್ಶಿಸಿದ್ದಾರೆ. ಆಗ್ರಾದ ಫೋರ್ಟ್​ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ರೈಲು ಹಳಿಗಳ ಮೇಲೆ ನೃತ್ಯ ಮಾಡಿದ ಮಹಿಳೆಯನ್ನು ಮೀನಾ ಸಿಂಗ್​ ಎಂದು ಗುರುತಿಸಲಾಗಿದೆ. ಮೀನಾ ಸಿಂಗ್​ ಸ್ವಂತ ಯುಟ್ಯೂಬ್​ ಚಾನೆಲ್​ ಹೊಂದಿದ್ದು ಇದರಲ್ಲಿ 47 ಸಾವಿರಕ್ಕೂ ಅಧಿಕ ಸಬ್​ಸ್ಕ್ರೈಬರ್​ ಹೊಂದಿದ್ದಾಳೆ. ಈಕೆಯ ಯುಟ್ಯೂಬ್​ ಚಾನೆಲ್​ನಲ್ಲಿ ರೈಲ್ವೆ ಹಳಿಗಳ ಮೇಲೆ ಮಾಡಿದ ಇನ್ನೂ ಅನೇಕ ವಿಡಿಯೋಗಳನ್ನು ಕಾಣಬಹುದಾಗಿದೆ. ರೈಲ್ವೆ ಹಳಿಗಳ ಮೇಲೆ ಈ ಮಹಿಳೆ ಭೋಜ್​ಪುರಿ ಹಾಡಿಗೆ ಕುಣಿದಿದ್ದು ಆ ಸಂದರ್ಭದಲ್ಲಿ ರೈಲು ಹಳಿಗಳ ಮೇಲೆ ಬಂದಿದೆ. ರೈಲು ಬಂದರೂ ಕ್ಯಾರೆ ಎನ್ನದೇ ಮೀನಾ ಸಿಂಗ್​ ತನ್ನ ಪಾಡಿಗೆ ತಾನು ರೀಲ್ಸ್​ ಮಾಡೋದ್ರಲ್ಲಿ ಬ್ಯುಸಿ ಆಗಿದ್ದರು.
ಮೀನಾ ಸಿಂಗ್​ರ ಈ ವೈರಲ್​ ವಿಡಿಯೋ ಎಲ್ಲೆಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗುತ್ತಿದ್ದಂತೆಯೇ ಈಕೆಯ ವಿರುದ್ಧ ರೈಲ್ವೆ ಕಾಯ್ದೆ 145 ಹಾಗೂ 147 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಾಯಿ ಹಾಗೂ ಮಹಿಳೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ಮೇಲೆ ಈ ರೀತಿಯ ಕೃತ್ಯ ಎಸಗುವುದಿಲ್ಲ ಎಂದು ತಾಯಿ ಮಗಳು ತಪ್ಪೊಪ್ಪಿಗೆ ನೀಡಿದ ಬಳಿಕ ಇಬ್ಬರಿಗೂ ಜಾಮೀನು ನೀಡಲಾಗಿದೆ.

ಭ್ರಷ್ಟರ ಬೇಟೆ

Recent Posts

ನಡುತೋಪು ಗಿಡಗಳ ಲೆಕ್ಕ ಬಹಿರಂಗಪಡಿಸಿ: ಮಾಹಿತಿ ನೀಡದಿದ್ದರೆ ಸಿಸಿಎಫ್ ಕಚೇರಿಗೆ ಮುತ್ತಿಗೆ ಎಚ್ಚರಿಕೆ

ಮುಂಡಗೋಡ: ಅರಣ್ಯ ಇಲಾಖೆಯ ನಡುತೋಪು ಕಾಮಗಾರಿಗಳ ಕುರಿತು ಕಳೆದ ಮೂರು ವರ್ಷಗಳಲ್ಲಿ ನೆಡಲಾದ ಗಿಡಗಳ ಸಂಖ್ಯೆ ಹಾಗೂ ಪ್ರಸ್ತುತ ಬದುಕುಳಿದಿರುವ…

1 second ago

ಕತ್ತಿ ತೋರಿಸಿ ಮನೆಗೆ ನುಗ್ಗಿದ ದುಷ್ಕರ್ಮಿ; ₹3 ಲಕ್ಷ ಮೌಲ್ಯದ ತಾಳಿ ಸರ ಕಸಿದು ಪರಾರಿ

ಸಿದ್ದಾಪುರ: ತಾಲೂಕಿನ ಹಾಳದಕಟ್ಟಾ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿ ಕತ್ತಿ ತೋರಿಸಿ ಬೆದರಿಕೆ ಹಾಕಿ, ಸುಮಾರು ₹3…

2 minutes ago

ಮುಂಡಗೋಡದ ಇಬ್ಬರು ಭ್ರಷ್ಟರಿಗೆ ಲೋಕಾಯುಕ್ತ ಶಾಕ್!

ಮುಂಡಗೋಡ:ತಾಲೂಕಿನ ಹೆಸ್ಕಾಂ ಉಪವಿಭಾಗದ ಎಇಇ ಧರ್ಮರಾಜ ಬೆಡಸಗಾಂವ್ ಹಾಗೂ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಅವರು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕಾಯುಕ್ತ…

4 hours ago

ಇಬ್ಬರು ಪತ್ನಿಯರಿದ್ದರೂ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವ್ಯಸಗಿ ಮದುವೆಯಾದ: 45 ವರ್ಷದ ವ್ಯಕ್ತಿ ಪೋಕ್ಸೋ ಅಡಿಯಲ್ಲಿ ಬಂಧನ

ತಮಿಳುನಾಡಿನ Kanchipuram ಜಿಲ್ಲೆಯ ಉತ್ತಿರಮೇರೂರು ಸಮೀಪ ಮಾನವೀಯತೆಯನ್ನೇ ನಾಚಿಸುವ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಶಾಲಾ ಬಾಲಕಿಯನ್ನು ಪ್ರಲೋಭನೆ…

4 hours ago

2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸನಾ ಪದಕ ಘೋಷಣೆ: ರಾಜ್ಯದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025-26ನೇ ಸಾಲಿನ ಪ್ರತಿಷ್ಠಿತ…

23 hours ago

ಗೆಳತಿಯ ಲವ್ ಮ್ಯಾರೇಜ್ ಎಡವಟ್ಟು: ಮಾಡದ ತಪ್ಪಿಗೆ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸ್ನೇಹಿತೆಯೊಬ್ಬಳ ಪ್ರೇಮ ವಿವಾದದ ನಡುವೆ ಅಮಾಯಕ ಯುವಕನೊಬ್ಬ…

1 day ago