Latest

ಹೆರಿಗೆಯ ಬಳಿಕ ತಾಯಿ ಪರಾರಿ.!: ಕೋಲಾರ ಆಸ್ಪತ್ರೆಯಲ್ಲಿ ಅನಾಥವಾಗಿದ ಹೆಣ್ಣು ಮಗು

ಕೋಲಾರ: ರಾಜ್ಯದಲ್ಲಿ ದಿನೇದಿನಕ್ಕೂ ವಿಚಿತ್ರ ಹಾಗೂ ದುಃಖದ ಘಟನೆಗಳು ಬೆಳಕಿಗೆ ಬರುತ್ತಿದ್ದು, ಇದೀಗ ಕೋಲಾರದಿಂದ ಮತ್ತೊಂದು ಹೃದಯವಿದ್ರಾವಕ ಪ್ರಸಂಗ ವರದಿಯಾಗಿದೆ. ಹೆರಿಗೆಯ ಬಳಿಕ ತಾಯಿ ತನ್ನ ನವಜಾತ ಶಿಶುವನ್ನು ಬಿಟ್ಟು ಆಸ್ಪತ್ರೆಯಿಂದ ಪರಾರಿಯಾದ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಂಗಳವಾರ ಸಂಜೆ ಸುಮಾರು 7.30ರ ಸುಮಾರಿಗೆ ಮೌನಿಕಾ ಎಂಬ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ನಾರ್ಮಲ್ ಡಿಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತುರ್ತು ಪರಿಸ್ಥಿತಿ ಇದ್ದುದರಿಂದ, ವೈದ್ಯೆ ಡಾ. ಶಾಂತ ಮಾನವೀಯತೆ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಡಿಲಿವರಿಯ ಬಳಿಕ ತಾಯಿ ಮಗುವಿನ ಬಗ್ಗೆ ಯಾವುದೇ ಜವಾಬ್ದಾರಿ ಒಪ್ಪಿಕೊಳ್ಳದೆ, ನಕಲಿ ವಿಳಾಸ ಹಾಗೂ ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ.

ಮೌನಿಕಾ ಚಿಕ್ಕಬಳ್ಳಾಪುರದ ಪೇರೆಸಂದ್ರದ ಶ್ರೀನಿವಾಸ್ ಎಂಬುವರ ಪತ್ನಿ ಎಂದು ಪ್ರಸ್ತಾಪಿಸಿದರೋಡೂ, ನೀಡಿದ ಮೊಬೈಲ್ ಸಂಖ್ಯೆಗೆ ಸಂಪರ್ಕ ಸಾಧಿಸಲು ಯತ್ನಿಸಿದಾಗ ‘ರಾಂಗ್ ನಂಬರ್’ ಎಂದು ಪ್ರತಿಕ್ರಿಯೆ ಬಂದಿದೆ. ಮೇಲಾಗಿ ನೀಡಿದ ವಿಳಾಸವೂ ತಪ್ಪಾಗಿದ್ದು, ಸಿಬ್ಬಂದಿ ತತ್ತರಿಸಿದ್ದಾರೆ. ಮೌನಿಕಾಳೊಂದಿಗೆ ಬಂದಿದ್ದ ವೃದ್ಧೆಯೂ ಕೂಡ ಪತ್ತೆಯಾಗದೆ ಮಾಯವಾಗಿದ್ದಾಳೆ ಎನ್ನಲಾಗಿದೆ.

ಅಗತ್ಯ ದಾಖಲೆಗಳಿಲ್ಲದೆ ಆಸ್ಪತ್ರೆಗೆ ಆಗಮಿಸಿದ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಭದ್ರತಾ ವ್ಯವಸ್ಥೆಯ ವೈಫಲ್ಯ ಎತ್ತಿ ಹಿಡಿಯಲಾಗಿದೆ. ತಾಯಿ ಮಗು ಬಿಟ್ಟು ಓಡಿದ ವಿಷಯ ತಿಳಿದ ನಂತರ ಪೊಲೀಸರು ಕೂಡ ನಡುಗಿದ್ದಾರೆ. ಸದ್ಯ ಆಸ್ಪತ್ರೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಯಿಯನ್ನು ಪತ್ತೆಹಚ್ಚಲು ಕೋಲಾರ ನಗರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ದುರಂತ ಎಂದರೆ ಈಕೆಗೆ 19 ವರ್ಷ ವಯಸ್ಸು. ಈ ಚಿಕ್ಕ ವಯಸ್ಸಲ್ಲೇ ಎಂತಹ ಕ್ರೂರ ಮನಸ್ಸಿನ ಮಹಿಳೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಇಂದು ಬೆಳಿಗ್ಗೆ ಟೀ ಕುಡಿದು ಬರೋದಾಗಿ ಹೇಳಿ ಆಕೆ ಎಸ್ಕೇಪ್ ಆಗಿದ್ದಾಳೆ. ಅಲ್ಲದೆ ಈಕೆಯ ಜೊತೆ ಬಂದಿದ್ದ ವೃದ್ಧೆಯು ಸಹ ಪಲಾಯನ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಈ ಘಟನೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆಯೂ ಪ್ರಶ್ನೆ ಎಬ್ಬಿಸುತ್ತಿದ್ದು, ಅದೆಷ್ಟೆ ತೊಂದರೆಗಳು ಇದ್ದರೂ ಹೆಣ್ಣು ಮಗುವನ್ನು ತಿರಸ್ಕರಿಸುವ ಪಂಥವೋ ಎನ್ನುವ ಆಕ್ರೋಶ ಕೂಡ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.

ತಾಯಿಯ ಆಶ್ರಯವಿಲ್ಲದೇ ಉಳಿದ ನವಜಾತ ಶಿಶುವಿಗೆ ಈಗ ಆಸ್ಪತ್ರೆಯ ಸಿಬ್ಬಂದಿಯೇ ಆಶ್ರಯವಾಗಿದ್ದಾರೆ. ಕೇವಲ 1.5 ಕೆ.ಜಿ. ತೂಕವಿರುವ ಮಗು ಇದೀಗ ಬೇರೆಯವರ ಎದೆ ಹಾಲಿನಿಂದ ಪೋಷಣೆಯಾಗುತ್ತಿದ್ದು, ವೈದ್ಯರು ಹಾಗೂ ನರ್ಸ್‌ಗಳು ವಿಶೇಷ ಕಾಳಜಿಯಲ್ಲಿ ಶಿಶುವಿನ ಆರೈಕೆಯಲ್ಲಿ ತೊಡಗಿದ್ದಾರೆ.

nazeer ahamad

Recent Posts

ಬೆಳ್ತಂಗಡಿಯಲ್ಲಿ ಭಾರೀ ಮಳೆಗೆ ಮರ ಕುಸಿತ – ಸ್ಕೂಟರ್ ಓಡಿಸುತ್ತಿದ್ದ ದಂಪತಿಗೆ ಗಾಯ

ಬೆಳ್ತಂಗಡಿ ತಾಲೂಕಿನ ಕುಕ್ಕಾವು ಕೊಪ್ಪದ ಗಂಡಿ ಸಮೀಪ ಭಾರೀ ಮಳೆಯ ನಡುವೆಯೇ ಸ್ಕೂಟರ್ ಮೇಲೆ ಮರ ಕುಸಿದು ಬಿದ್ದ ಪರಿಣಾಮ…

3 hours ago

ಆಟವಾಡುತ್ತಿದ್ದ 2 ವರ್ಷದ ಮಗು ಕಾಲುವೆಗೆ ಬಿದ್ದು ದುರ್ಘಟನಾತ್ಮಕ ಸಾವು

ಭಟ್ಕಳ: ತಾಯಿ-ತಂದೆಯ ಕಣ್ಣಿಗೆ ನಂಬಲಾಗದ ದುಃಖ ತರಿದ ಘಟನೆ ಭಟ್ಕಳದ ಆಝಾದ ನಗರದಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಎರಡು…

4 hours ago

ಗೌರಿಬಿದನೂರು ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಇಬ್ಬರು ಸಾವು

ಗೌರಿಬಿದನೂರು : ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ…

5 hours ago

ಪ್ರೀತಿ ಮದುವೆಯ ಬೆನ್ನಲ್ಲೇ ದೌರ್ಜನ್ಯ: ಹುಬ್ಬಳ್ಳಿಯಲ್ಲಿ ಯುವತಿಯನ್ನು ಗೋಣಿ ಚೀಲದಲ್ಲಿ ಎಳೆದೊಯ್ಯಲಾದ ಪೋಷಕರು

ಹುಬ್ಬಳ್ಳಿ: ಪ್ರೇಮಿಸಿ ವಿವಾಹವಾದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ವರದಿಯಾಗಿದೆ.…

7 hours ago

ಚಾರ್‌ಧಾಮ್ ಯಾತ್ರೆ ವೇಳೆ ಹೆಲಿಕಾಪ್ಟರ್ ಅಪಘಾತ: ಐದು ಯಾತ್ರಿಕರು ಸಾವು.

ಉತ್ತರಾಖಂಡದ ಕೆದಾರನಾಥ ಮಾರ್ಗದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಐವರು ಯಾತ್ರಿಕರು ಮೃತಪಟ್ಟಿದ್ದಾರೆ. ಈ ದುರಂತವು…

9 hours ago

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಯುವ ಮುಖಂಡ ವಿರುದ್ಧ ದೂರು.

ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ವಿರುದ್ಧ ಗಂಭೀರ ಆರೋಪಗಳು ಹೊರ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದ ಆಧಾರದ…

10 hours ago