ಗದಗ: ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಶೃಂಗೇರಿ ಮಠಕ್ಕೆ ಸೇರಿದ್ದ ಮೌಲ್ಯಮತ್ತಾದ ಜಮೀನನ್ನು ಕಾನೂನು ಬಾಹಿರವಾಗಿ ತನ್ನ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಮಹಿಳಾ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ಮತ್ತು ಅವರ ಪತಿ ನಿಂಗಪ್ಪ ದೊಡ್ಡಮನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ತೆಗ್ಗಿನಭಾನೂರ ಗ್ರಾಮದಲ್ಲಿ ಸರ್ವೇ ನಂ. 63 ಮತ್ತು 54ರಲ್ಲಿ ಮಠದ ಒಟ್ಟು 21 ಎಕರೆ ಜಮೀನಿದೆ. ಈ ಜಮೀನನ್ನು ಕೇವಲ ಕಾಗದದ ಲೆಕ್ಕದಲ್ಲಿ ಕಬಳಿಸಿ ಸುಜಾತಾ ದೊಡ್ಡಮನಿ ಅವರ ಹೆಸರಿಗೆ ಬದಲಾಯಿಸಲು ಪತಿ-ಪತ್ನಿ ಸಂಚು ರೂಪಿಸಿದ್ದಾರೆಯೆಂದು ಸ್ಥಳೀಯ ಪೋಕಳಾ ವಾರಸುದಾರರು ಆರೋಪಿಸಿದ್ದಾರೆ.
ನಿಂಗಪ್ಪ ದೊಡ್ಡಮನಿ ಶಿರಹಟ್ಟಿ ಉಪ ತಹಶೀಲ್ದಾರ್ ಆಗಿ ಸೇವೆ ನಿರ್ವಹಿಸುತ್ತಿದ್ದ ವೇಳೆ ಈ ಜಮೀನಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರೆಂದು ತಿಳಿದು ಬಂದಿದೆ. ನಂತರ ರಾಜಕೀಯ ಪ್ರಭಾವ ಮತ್ತು ಆಡಳಿತಾತ್ಮಕ ಸಂಪರ್ಕಗಳನ್ನು ಬಳಸಿಕೊಂಡು ಜಮೀನನ್ನು ಕಾನೂನು ವಿರುದ್ಧವಾಗಿ ತಮ್ಮ ಹೆಸರಿಗೆ ಬದಲಾಯಿಸಲು ಹೆಣಗೊಂಡಿದ್ದಾರೆ ಎಂಬುದು ದೂರುದಾರರ ವಾದ.
ಈ ಜಮೀನಿಗೆ ಪೋಕಳಾ ಹಕ್ಕುದಾರರು ಇರುವುದರಿಂದ, ಅವರ ಅನುಮತಿಯಿಲ್ಲದೇ ಜಮೀನು ಮಾರಾಟ ಅಥವಾ ಹಕ್ಕು ಬದಲಾವಣೆ ಸಾಧ್ಯವಿಲ್ಲ. ಆದರೆ ಶಿರಹಟ್ಟಿ ತಹಶೀಲ್ದಾರ ಶರಣಪ್ಪ ಪವಾರ್ ಮತ್ತು ಸಬ್ರಿಜಿಸ್ಟ್ರಾರ್ ಅಧಿಕಾರಿಗಳು ಲಂಚದ ಆಸೆಗೆ ಮಣಿದು, ಸೂಕ್ತ ದಾಖಲೆಗಳಿಲ್ಲದೇ ಹಕ್ಕು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವೂ ಹೊರಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೋಕಳಾ ಕುಟುಂಬಗಳು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದು, ಭೂಹಗರಣದ ತನಿಖೆ ನಡೆಸಿ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಮಠದ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲು ನಡೆಯುವ ಇಂತಹ ಸಂಚುಗಳು ಧಾರ್ಮಿಕ ಸಂಸ್ಥೆಗಳ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಘಟನೆ ಸಂಬಂಧ ಮುಂದಿನ ದಿನಗಳಲ್ಲಿ ತನಿಖಾ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದರತ್ತ ಸಾರ್ವಜನಿಕರು ಹಾಗೂ ಮಠದ ನಂಬಿಕಸ್ಥರು ಕಣ್ಣಿಟ್ಟಿದ್ದಾರೆ.
ಬೆಂಗಳೂರು (ಜೂನ್ 29): ನಗರದಲ್ಲಿ ಮತ್ತೊಂದು ಅಮಾನುಷ ಕೊಲೆ ಪ್ರಕರಣವು ಬೆಳಕಿಗೆ ಬಂದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿಯ ಕಸದ…
ಭುವನೇಶ್ವರ, ಜೂನ್ 29: ಪವಿತ್ರ ರಥಯಾತ್ರೆಯೊಂದರ ವೇಳೆ ಜಗನ್ನಾಥ ದೇಗುಲದ ಬಳಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೂವರು…
ಚಿಕ್ಕಮಗಳೂರು, ಜೂನ್ 29: ಕೊಪ್ಪ ಪಟ್ಟಣದ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗಿಸುತ್ತಿದ್ದ 13 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ…
ಬೆಂಗಳೂರು: ಕರ್ತವ್ಯ ನಿರ್ವಹಣೆಯ ನಡುವೆ ಗಂಭೀರ ಅಪಘಾತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಪಿಎಸ್ಐ ಒಬ್ಬರು ಮೃತಪಟ್ಟ ದುಃಖಾಂತ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.…
ಬೆಳಗಾವಿ: ಗ್ರಾಮ ಪಂಚಾಯತಿ ಸದಸ್ಯನೊಬ್ಬ ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ಗೂಂಡಾ ಶೈಲಿಯಲ್ಲಿ ವರ್ತಿಸಿ, ಬಂದೂಕಿನಿಂದ ಗಾಳಿಗೆ ಗುಂಡು ಹಾರಿಸಿದ್ದಾನೆ. ಈ ಅಸಾಧಾರಣ…
ಮಂಗಳೂರು, ಜೂನ್ 29: ಉಳ್ಳಾಲದ ಸೋಮೇಶ್ವರ ಬೀಚ್ ಪ್ರದೇಶದಲ್ಲಿ ನರ್ಸಿಂಗ್ ಶಿಕ್ಷಣಕ್ಕೆ ತಯಾರಿ ನಡೆಸುತ್ತಿದ್ದ ಬಾಲಕಿ ಅತ್ಯಾಚಾರ ದೌರ್ಜನ್ಯ ಎಸಗಿರುವ…