“ಪ್ರೀತಿ ಕುರುಡು” ಎನ್ನುವ ಮಾತು ಮತ್ತೆ ಸಾಬೀತಾಗುವಂತ ಘಟನೆ ಒಂದರಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮ ಕಥೆ ದುರ್ಘಟನೆಗೆ ತಲುಪಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಮತ್ತು ತುಳು ರಂಗಭೂಮಿ ನಟಿ ಸೌಮ್ಯಾ ಶೆಟ್ಟಿ ಅವರ ಸಂಬಂಧ ಈಗ ದುರಂತ ಅಂತ್ಯ ಕಂಡಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಸುದೀಪ್ ಮೃತಪಟ್ಟಿದ್ದು, ಈ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.
ಇವರಿಬ್ಬರ ಪರಿಚಯ Instagram ಮೂಲಕ ಆರಂಭವಾಗಿ, ನಂತರ ಅದು ಪ್ರೀತಿಯಾಗಿ ಬೆಳೆದಿತ್ತು. ಮದುವೆಗೆ ನಿರ್ಧರಿಸಿದ ಅವರು ಮನೆವರಿಗೂ ವಿಷಯ ತಿಳಿಸಿದ್ದರು. ಆದರೆ ಸುದೀಪ್ ಕುಟುಂಬದಿಂದ ಈ ಸಂಬಂಧಕ್ಕೆ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ಕುಟುಂಬದ ವಿರೋಧದಿಂದ ಮನನೊಂದು ಸುದೀಪ್ ಜೂನ್ 16ರಂದು ವಿಷ ಸೇವಿಸಿದ್ದಾನೆ ಎಂಬ ಅಚ್ಚರಿಯ ಮಾಹಿತಿ ಹೊರಬಂದಿದೆ. ಆದರೆ ಈ ವಿಷಯವನ್ನು ಯಾರಿಗೂ ತಿಳಿಸದೆ, ಅದೇ ಪರಿಸ್ಥಿತಿಯಲ್ಲಿ ಸೌಮ್ಯರನ್ನು ಭೇಟಿ ಮಾಡಿ ಮದುವೆಗೆ ಒಪ್ಪಿಸಿ, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾನೆ. ಮದುವೆಯ ನಂತರ ಕೆಲವು ದಿನಗಳು ಸಹಜವಾಗಿದ್ದರೂ, ನಂತರ ಆತನ ಆರೋಗ್ಯ ಏಕಾಏಕಿ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ಕೊನೆಯ ಕ್ಷಣದಲ್ಲಿ ತಾನು ವಿಷ ಸೇವಿಸಿದ್ದಾಗಿ ಆತ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ನಡುವೆ, ಸುದೀಪ್ ಪೋಷಕರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆ ಈಗಾಗಲೇ ಹಲವು ಮದುವೆಗಳಾಗಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, “ಅವಳೇ ನಮ್ಮ ಮಗನ ಸಾವಿಗೆ ಕಾರಣ” ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದೆಡೆ, ಪತ್ನಿ ಈ ಆರೋಪಗಳನ್ನು ತಳ್ಳಿ ಹಾಕಿದ್ದು, “ಕುಟುಂಬದ ವಿರೋಧದಿಂದ ಆತ ಮನನೊಂದು ವಿಷ ಸೇವಿಸಿದ್ದಾನೆ, ಇದರಲ್ಲಿ ನನ್ನ ಪಾತ್ರವಿಲ್ಲ” ಎಂದು ಹೇಳಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉತ್ತರಿಸಬೇಕಿವೆ. ವಿಷ ಸೇವಿಸಿದ 13 ದಿನಗಳ ಬಳಿಕ ಸಾವು ಸಂಭವಿಸಿದ್ದು ಹೇಗೆ? ಆತ ಸೇವಿಸಿದ ವಿಷ ಯಾವುದು? ಅದು ನಿಧಾನವಾಗಿ ದೇಹದ ಮೇಲೆ ಪರಿಣಾಮ ಬೀರಿದಿತೇ ಅಥವಾ ಮದುವೆಯ ನಂತರ ಬೇರೆ ಏನಾದರೂ ನಡೆದಿದೆಯೇ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಈ ಸಂಬಂಧ ಈಗ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಯುವ ಉದ್ಯಮಿಯ ಈ ದುರಂತ ಸಾವು ಆತ್ಮಹತ್ಯೆಯೇ ಅಥವಾ ಇದಕ್ಕಿಂತ ದೊಡ್ಡ ಸಂಚಿಯ ಭಾಗವೇ ಎಂಬುದು ತನಿಖೆಯಿಂದಲೇ ಹೊರಬರಬೇಕಿದೆ.
“ರಕ್ಷಕನೇ ಭಕ್ಷಕ” ಎನ್ನುವ ಮಾತಿಗೆ ಸಾಕ್ಷಿಯಂತ ಘಟನೆಯೊಂದು Akolaದಲ್ಲಿ ಬೆಳಕಿಗೆ ಬಂದಿದೆ. ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಒಬ್ಬರು ವಶದಲ್ಲಿದ್ದ…
ಮನೆಯ ವಿಶ್ವಾಸಕ್ಕೆ ಬಂದ ಸೊಸೆಯೇ ಅತ್ತೆಗೆ ವಿಷ ನೀಡಿ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾದ ಬೆಚ್ಚಿಬೀಳಿಸುವ ಘಟನೆ…
ಪರಿಸರ ಸ್ನೇಹಿ ಬಟ್ಟೆಯ ಕೈಚೀಲಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ, ಅಂದಿನ ಮೈಸೂರು ಜಿಲ್ಲಾಧಿಕಾರಿ…
ಕೌಟುಂಬಿಕ ಅಥವಾ ವೈವಾಹಿಕ ಅತ್ಯಾಚಾರದ ವಿಚಾರ ಮತ್ತೆ ಚರ್ಚೆಗೆ ಬಂದಿರುವ ಈ ಸಂದರ್ಭದಲ್ಲಿ ಜನಪ್ರಿಯ ಗಾಯಕಿ Chinmayi Sripaada ತೀವ್ರವಾಗಿ…
ಭಾರತೀಯ ಟೆರಿಟೋರಿಯಲ್ ಆರ್ಮಿ (ಪ್ರಾದೇಶಿಕ ಸೇನೆ) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಅಭಿಯಾನದಡಿ ದೇಶಾದ್ಯಂತ…
ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ದಿನಗೂಲಿ ನೌಕರರಿಗೆ ಕರ್ನಾಟಕ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇದುವರೆಗೆ ಗುತ್ತಿಗೆ, ಹೊರಗುತ್ತಿಗೆ…