Latest

ಇಬ್ಬರನ್ನು ಪ್ರೀತಿಸಿ ಒಬ್ಬನಿಗೆ ಚಟ ಕಟ್ಟಿ; ಮತ್ತೊಬ್ಬನೊಂದಿಗೆ ಜೈಲು ಪಾಲಾದಳು.

ಬೆಂಗಳೂರಿನ ವಿಕಾಸ್ ಹಾಗು ಪ್ರತಿಭಾ ಇಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಪ್ರೀತಿ ಅತಿಯಾದಾಗ ಸಹಜವಾಗಿ ತನ್ನ ವ್ಯಾಪ್ತಿ ಮೀರಿ ಇಬ್ಬರ ಮದ್ಯೆ ಏನು ನಡೆಯಬೇಕು ಎಲ್ಲವು ನಡೆದಿದೆ.
ಎಲ್ಲಾ ಪ್ರೇಮಿಗಳಂತೆ ನಮ್ಮ ಪ್ರೀತಿಯ ಪಯಣ ಚೆನ್ನಾಗಿ ಸಾಗುತ್ತಿದೆ ಅಂದುಕೊಂಡ ವಿಕಾಸನಿಗೆ ಮುಂದೆ ತಾನು ಪ್ರೀತಿಸಿದ ತನ್ನ ಪ್ರೇಯಸಿಯೇ ನನಗೆ ಮರಣ ಶಾಸನ ಬರೆಯುತ್ತಾಳೆ ಎಂಬುದರ ಬಗ್ಗೆ ಎಳ್ಳಷ್ಟೂ ಸುಳಿವಿರಲಿಲ್ಲ.

ಮುಂದೆ ನಡೆದಿದ್ದೇಲ್ಲವೂ ದುರಂತ ಕತೆ.

ದಿನ ಕಳೆದಂತೆ ವಿಕಾಸ್ ಮತ್ತು ಪ್ರತಿಭಾ ಪ್ರೀತಿ ಮಧ್ಯೆ ಬಿರುಕು ಮೂಡಲು ಆರಂಭವಾಯಿತು.

ಅಷ್ಟಕ್ಕೂ ಇವರಿಬ್ಬರ ಪ್ರೀತಿಗೆ ವಿಲನ್ ನಂತೆ ಬಂದಿದ್ದು ಸುಶೀಲ್ ಎಂಬ ವ್ಯಕ್ತಿ.

ಹೆಣ್ಣುಮಾಯೇ ಹೊನ್ನು ಮಾಯೆ ಎಂಬಂತೆ
ಪ್ರತಿಭಾ ವಿಕಾಸನಿಗೆ ಯಾಮಾರಿಸಿ ಸುಶೀಲ ಎಂಬಾತನ ಜೊತೆ ಸದ್ದಿಲ್ಲದೇ ಸಂಘ ಬೆಳಸಿದ್ದಳು.
ಪ್ರೀತಿ ಹೆಸರಲ್ಲಿ ಇಬ್ಬರನ್ನು ಬುಟ್ಟಿಗೆ ಬೀಳಿಸಿಕೊಂಡು ಒಬ್ಬನಿಗೆ ಮಂಚದ ಸುಖ ನೀಡುತ್ತಾ ಮತ್ತೊಮ್ಮೆನಿಗೆ ಮಸಣದ ಹಾದಿ ತೋರಿಸುವ ಹಾದರಗಿತ್ತಿ ಪ್ರತಿಭಾಳ ನೌಟಂಕಿ ಆಟ ವಿಕಾಸ ನಿಗೂ ತಿಳಿಯಿತು.
ಪಾಪ ಪ್ರೀತಿ ಆಚೇಗಿನ ಆಟದಲ್ಲಿ ಇನ್ನು ಪಕ್ವತೆ ಹೊಂದಿರದ ಈ ವಿಕಾಸ್ ಮಾತ್ರ ಇವಳ ಕಳ್ಳಾಟಕ್ಕೆ ಬುದ್ದಿವಾದ ಹೇಳುವ ಮೂಲಕ ಬ್ರೇಕ್ ಹಾಕಲು ಮುಂದಾಗಿದ್ದಾನೆ.
ಅದರಂತೆ ಪ್ರತಿಭಾ ಳಿಗೆ ಸುಶೀಲನ ಸ್ನೇಹ ತೋರಿಯುವಂತೆ ನೀತಿ ಪಾಠ ಹೇಳಿದ್ದಾನೆ ಇಷ್ಟಕ್ಕೂ ನನ್ನ ಮಾತುಕೇಳದೆ ಹೋದರೆ ನಾನು ನಿನ್ನ ಜೊತೆ ನಡೆಸಿದ ಏಕಾಂತ ಸೇವೆಯ
ವಿಡಿಯೋ ವನ್ನು ಹೊರ ಜಗತ್ತಿಗೆ ಹರಿಬಿಡುವ ಎಚ್ಚರಿಕೆ ಕೂಡ ನೀಡಿದ್ದನು.

ಆದರೆ ವಿಕಾಸನ ಬುದ್ದಿವಾದದ ಬೆದರಿಕೆ ಬಗ್ಗದ ಪ್ರತಿಭಾ ಸುಶೀಲನ ಜೊತೆ ಲವ್ವಿ ಡವ್ವಿ ಮುಂದುವರೆಸಿದ್ದಾಳೆ.
ಇದರಿಂದ ಕೋಪಗೊಂಡ ವೈದ್ಯ ವಿಕಾಸ್ ಪ್ರತಿಭಾಳ ಜೊತೆ ಆಟವಾಡಿದ್ದ ರತಿಕ್ರೀಡೆಯ ಟ್ರೈಲರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಇದರಿಂದ ಕೆರಳಿದ ಪಡ್ಡೆ ಹುಡುಗಿ ಪ್ರತಿಭಾ ತನ್ನ ಎರಡನೇ ಪ್ರಿಯಕರ ಸುಶೀಲ ಜೊತೆ ಸೇರಿ ಮೊದಲ ಪ್ರಿಯತಮ ವಿಕಾಸ್ ನಿಗೆ ಯಮಲೋಕಕ್ಕೆ ಕಳುಹಿಸಲು ಸ್ಕೆಚ್ ಹಾಕಿ ಮುಹೂರ್ತ ಫಿಕ್ಸ್ ಮಾಡಿದಳು.

ಎಲ್ಲವೂ ಮೊದಲೇ ಅಂದುಕೊಂಡ ಪ್ಲಾನಿಂಗ್ ನಂತೆ ಕಿಲಾಡಿ ಹೆಂಗಸು ಪ್ರತಿಭಾ ಮಾತನಾಡಬೇಕು ಎಂದು ಹೇಳಿ ವಿಕಾಸ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಮನೆಯಲ್ಲಿ ವಿಕಾಸ್ ನನ್ನು ಕೂಡಿಹಾಕಿ ಪ್ರತಿಭಾ ಇವಳ ಪ್ರಿಯಕರ ಸುಶೀಲ್ ಸಹಚರರು ಸೇರಿಕೊಂಡು ಮನೋಸೋ ಇಚ್ಛೆ ತಳಿಸಿ ಚನ್ನಾಗಿ ಡ್ರಿಲಿಂಗ್ ಮಾಡಿದ್ದಾರೆ.
ನಾಲ್ವರು ನೀಡಿದ ಗುದ್ದಿಗೆ ಪ್ರತಿಭಾ ಳ ಮನೆಯಲ್ಲೆ ವೈದ್ಯ ವಿಕಾಸನ ಪ್ರಾಣಪಕ್ಷಿ ಹಾರಿಹೋಗಿ ಪರಮಾತ್ಮ ಪಾದ ಸೇರಿಕೊಂಡಿದೆ.

ಇನ್ನು ಡಬಲ್ ಡ್ರೈವರ್ ಗಳ ಲೈಫ್ ಜೊತೆ ಆಟವಾಡಿ ಓರ್ವ ನ ಪ್ರಾಣ ತೆಗೆದ 420 ಪ್ರತಿಭಾ ಹಾಗು ಪ್ರಿಯಕರ ಸುಶೀಲ್ ಮತ್ತು ಆತನ ಸಹಚರರಾದ ಗೌತಮ್, ಸೂರ್ಯ ಎಂಬ ಆರೋಪಿಗಳನ್ನ ಬಂಧಿಸಿರುವ ಬೇಗೂರು ಠಾಣೆ ಪೊಲೀಸ ರು ಕೊಲೆಗಾರ ಕಿರಾತಕರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡು ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago