Latest

ಕೆರೆ ಹೊರಾಂಗಣ ಸಿಂಗಾರ; ಒಳಾಂಗಣದಲ್ಲಿ ಹೀಗೆ ಮಾಡಿದ್ದು ಸರೀನಾ?

ಕುಂದಗೋಳ; ಕೆರೆಗಳು ಮನುಷ್ಯರ ಜೀವನಾಡಿ ದಿನಬಳಕೆ ಬೇಕಾದ ಸಂಪನ್ಮೂಲ, ಹಾಗೇ ಇಲ್ಲೊಂದು ಕೆರೆ ಹಸಿ ಕಸ ಬೆಳೆದು ದುರ್ವಾಸನೆ ಎಡೆ ಮಾಡಿಕೊಟ್ಟಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಹಾಯದಿಂದ ನೀರು ಶೇಖರಣೆ ಮಾಡಿಕೊಂಡು ವರ್ಷಪೂರ್ತಿ ನೀರು ಕುಡಿಯಲು ಕೆರೆಗಳು ಸಹಕಾರಿಯಾಗಿದೆ. ವಿಜ್ಞಾನದ ಪ್ರಕಾರ ಉತ್ತಮ ಮಳೆಯಾಗಲು, ಅಂತರ್ಜಾಲ ಮಟ್ಟ ಸುಧಾರಿಸಲು ಕೆರೆ ಕಟ್ಟೆಗಳು ಬಹಳಷ್ಟು ಉಪಯೋಗಕಾರಿ ಅಂತ ನಾವು ನಿಜಜೀವನದಲ್ಲಿ ಕಂಡು ಕೊಂಡಿದ್ದವೆ.

ಕೆರೆಗಳ ಅಭಿವೃದ್ಧಿಗೆ ಸರಕಾರದಿಂದ ಹಣ ಹಂತ ಹಂತವಾಗಿ ಬಿಡುಗಡೆಗೊಳಸುತ್ತೆ. ಹಾಗಾಗಿ ಕೆರೆಗಳ ಅಂತರ್ಜಾಲ ಮಟ್ಟ ಸುಧಾರಿಸಲು, ಕೆರೆಗಳ ಹೂಳು ತೆಗೆಯುವುದು, ಕೆರೆಗಳ ಸ್ವಚ್ಚತೆ ಕಾಪಾಡುವುದು, ಕೆರೆಗಳ ಸಂರಕ್ಷಣೆ ಮಾಡುವುದು, ಇಷ್ಟೇಲ್ಲಾ ಕೆರೆಗಳ ಅಭಿವೃದ್ಧಿಗೆ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಹಕಾರಿಯಾಗಿದೆ.

ಆದರೆ ಇಲ್ಲೊಂದು ಗ್ರಾಮ ಮೆಲ್ಲೆಲ್ಲ ತುಳುಕು ಒಳಗೆಲ್ಲಾ ಹುಳುಕು ಅಂತ ಸ್ಪಷ್ಟವಾಗಿ ಕಾಣುತ್ತದೆ ಅಂದರೆ ತಪ್ಪಾಗಿಕ್ಕಿಲ್ಲ. ಹಾಗಾದರೆ ಯಾವು ಗ್ರಾಮ ಅಂತ ಕೇಳ್ತೀರಾ? ಇಲ್ಲಿದೆ ಕಂಪ್ಲೀಟ್ ಕಹಾನಿ.

ಧಾರವಾಡ ಜಿಲ್ಲಾ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರೋಬ್ಬರಿ ಅಂದಾಜು ಮೊತ್ತ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಈಗಾಗಲೇ ಖರ್ಚು ಮಾಡಲಾಗಿದೆ.

ಕೆರೆಗಳು ಅಭಿವೃದ್ಧಿಗೊಂಡರೆ ನೀರಿನ ಅಂತರ್ಜಾಲ ಮಟ್ಟ ಸುಧಾರಿಸಲು ಸಹಾಯಕವಾಗುತ್ತದೆ ಅಂದರೆ ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಕಾಣುವುದಿಲ್ಲ. ಹಾಗೆ ಆಗಿರುವ ವಿಚಾರ ಇದು, ಕೆರೆಯ ಸುತ್ತಲೂ ಪೀರ್ವಸ್ ಅಳವಡಿಕೆ ಮಾಡಿದ್ದಾರೆ, ಇದರ ಜೊತೆಗೆ ಸುತ್ತಲೂ ತಂತಿ ಬೇಲಿ, ಸೋಲಾರ್ ಲೈಟ್ ಗಳು ಅಳವಡಿಸಿ ದ್ದಾರೆ. ಆದರೆ ಇವೆಲ್ಲವೂ ಕಾಮಗಾರಿ ಅವೈಜ್ಞಾನಿಕ ದಿಂದ ಕೊಡಿದೆ.

ಕೆರೆ ಸುತ್ತಲೂ ಹಾಕಲಾಗಿದ ಪೀವರ್ಸ್ ಗಳು ಕಿತ್ತು ನೆಲ್ಲಕ್ಕಿ ಧಾವಿಸಿವೆ. ಇನ್ನೂ ತಂತಿ ಬೇಲಿ ಕಿತ್ತು ನಿಂತಿದೆ೦. ಕೆರೆ ಒಳಾಂಗಣದಲ್ಲಿ ಹಸಿ ಕಸ ಎದ್ದು ಕಲುಷಿತ ವಾತಾವರಣ ಸೃಷ್ಟಿಸಿದೆ.

ಇನ್ನೂ ಕೆರೆ ಹೊರ ಭಾಗದಲ್ಲಿ ನೋಡಿದರೆ ಸಾಕು ಬಣ್ಣದ ಲೇಪನದಿಂದ ಕಂಗೊಳಿಸುತ್ತೆ. ಜೊತೆಗೆ ಕರೆ ಭಾಗದಲ್ಲಿ ಕಲ್ಲು ಪಿಚ್ಚಿಂಗ್ ಮಾಡಲಾಗಿದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವು ಹಾಗೆ ಈ ಕೆರೆ ಆವೃತ್ತಿಗೊಂಡಿದೆ, ಇಷ್ಟೆಲ್ಲಾ ಸಮಸ್ಯೆಗಳು ಕಾಣ ತೊಡಗಿದರು ಈ ಅಧಿಕಾರಿಗಳು ನಿರ್ವಹಣೆ ಮಾಡದೇ ಕಚೇರಿಗೆ ಸೀಮತವಾದರ? ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ತೊಡಗಿದೆ. ಒಟ್ಟಿನಲ್ಲಿ ಗ್ರಾಪಂ ನಿರ್ವಹಣೆಯಲ್ಲಿ ಎಡವಿದೆ ಅಂತ ಗೋಚರವಾಗುತ್ತದೆ.

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

10 hours ago

ಒನ್‌ವೇ ಉಲ್ಲಂಘನೆ ಪ್ರಶ್ನಿಸಿದ ಡಿಸಿಗೆ, ಬೈಕ್ ಸವಾರನ ಅವಾಜ್: ದಾವಣಗೆರೆಯಲ್ಲಿ ಆತಂಕಕಾರಿ ಘಟನೆ

ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್‌ವೇ ರಸ್ತೆ ಉಲ್ಲಂಘಿಸಿ ಬಂದ…

12 hours ago

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

2 days ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

2 days ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

2 days ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

3 days ago