ಕುಂದಗೋಳ: ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೆ ಬದುಕುಬಹುದು ಆದರೆ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ನೀರಿಲ್ಲದೆ ಮನುಷ್ಯ ಒಂದು ದಿನ ಸಹ ಇರಲಾರ. ಹೀಗಾಗಿ ನೀರು ಅತಿಅವಶ್ಯಕ.
ಅದರಂತೆ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜಾರಿಗೆ ತಂದ ಯೋಜನೆ ಮಳೆ ನೀರು ಕೊಯ್ಲು ಒಂದು. ಎಲ್ಲೆಡೆ ನೀರಿನ ಕೊರತೆ ಕಾಣಿಸಿಕೊಳ್ಳಬಾರದು ಅಂತ ಸರಕಾರಗಳು ಸಹ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ.
ಏನು ಇದು ಮಳೆ ನೀರು ಕೊಯ್ಲು? ಮಳೆಗಾಲದಲ್ಲಿ ಮನೆಯ ಮೇಲ್ಚಾವಣಿ ಮೇಲೆ ಬಿಳ್ಳುವ ನೀರನ್ನು ಪೈಪ್ ಲೈನ್ ಮುಖಾಂತರ ಹಿಡಿದಿಟ್ಟುಕೊಳ್ಳುವುದು. ಜೊತೆಗೆ ಆ ನೀರನ್ನು ನೀರಿನ ಸಂಪಿನ ಒಳಗೆ ಹೋಗಲು ಪೈಪ್ ಲೈನ್ ಅಳವಡಿಸಿ ಸಂಗ್ರಹ ಮಾಡಿ ಬಳಿಕೆಗೆ ಉಪಯೋಗಿಸಿಲು ಇದು ಸಹಕಾರಿಯಾಗಿದೆ. ಹೀಗೆ ಮಾಡುವುದರಿಂದ ದಿನ ಬಳಿಕೆಗೆ ನೀರು ಉಪಯೋಗಿಕಾರಿಯಾಗುತ್ತದೆ
ಹಾಗಾಗಿ ಸರಕಾರದ ಯೋಜನೆಗಳು ಪಾರದರ್ಶಕತೆ ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯೋಜನೆ ಸದ್ಬಳಕೆ ಆಗಲಿ ಅಂತ ಈ ಮಹಾತ್ಮ ಗಾಂಧಿ ಉದ್ಯೋಗ ಖಾತ್ರೆಯಲ್ಲಿ ಯೋಜನೆಯಡಿ ರೂಪಿಸಲಾಗಿದೆ.
ಕುಂದಗೋಳ ತಾಲೂಕಿನ ಕಳಸ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರದ ಹಿಂಬಾಗದಲ್ಲಿ ನಿರ್ಮಿಸಿಲಾಗಿದ ಮಳೆ ನೀರು ಕೊಯ್ಲು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡದೆ ಕೈ ತೊಳೆದುಕೊಂಡಿದ್ದಾರಾ ಅಧಿಕಾರಿಗಳು? ಚಿಕ್ಕ ಸಂಪು ನಿರ್ಮಾಣ ಮಾಡಿ ಪೈಪ್ ಲೈನ್ ಸಹ ಕನೆಕ್ಷನ್ ಮಾಡದೇ, ಸರಕಾರಿ ಜಾಹೀರಾತು ಹಾಕಿ ನಿರ್ಮಾಣ ಮಾಡಿದವೆ ಅಂತ ಹಣೆಪಟ್ಟಿ ಹಾಕುವುದು ಅಲ್ಲ. ಇದನ್ನು ಅನುಷ್ಠಾನಕ್ಕೆ ತರಬೇಕು.
ಒಂದು ಚಿಕ್ಕ ಕಟ್ಟಿ ತರಹ ನಿರ್ಮಿಸಿ ಸರಿಯಾಗಿ ಪೈಪ್ ಲೈನ್ ಅಳವಡಿಸದೆ, ಅಂದಾಜು ಮೊತ್ತ 1,50,000 ರೂಪಾಯಿ ಖರ್ಚು ಭರಸಲಾಗಿದೆ. ಹಾಗಾದರೆ ಹಣ ಕೂಳ್ಳೆ ಹೊಡಿದಾರ ಅನ್ನುವುದು ಮೇಲ್ನೋಟಕ್ಕೆ ಕಂಡು ಬರ್ತಾ ಇದೆ.
ಒಟ್ಟಾರೆ ಕಾಮಗಾರಿಗಳು ಸಾರ್ವಜನಿಕ ಉಪಯೋಗಿಕಾರಿಯಾಗಿಲಿ ಅನ್ನುವುದು ನಮ್ಮ ಪತ್ರಿಕೆ ಕಳಕಳಿ
ವರದಿ: ಶಾನು ಯಲಿಗಾರ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…