ಕುಂದಗೋಳ: ಕುಂದಗೋಳ ತಾಲೂಕಿನ ವಿವಿಧೆಡೆ ಕಳ್ಳತನ ಮಾಡಿದ್ದ ಟ್ರಾಕ್ಟರ್ ಟ್ರೇಲರ್ ಕಳ್ಳರನ್ನು ಬಂದಿಸಿ 13.46 ಲಕ್ಷರೂ ಬೆಲೆ ಬಾಳುವ 6 ಟ್ರೇಲರ್ ವಶಪಡಿಸಿಕೊಳ್ಳವಲ್ಲಿ ಕುಂದಗೋಳ ಪೋಲಿಸರು ಯಶಸ್ವಿಯಾಗಿದ್ದಾರೆ.
ರೈತಾಪಿ ವರ್ಗದವರೂ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲ್ಪಡುವ ಟ್ರಾಕ್ಟರ್ ಟ್ರೇಲರ್ ಗಳನ್ನು ಕದೀಮರು ಕಳ್ಳತನಕ್ಕೆ ಮುಂದಾಗಿದ ಆರೋಪಿಗಳನ್ನು ಹೆಡೆಮುರಿ ಕಟ್ಟವುಲ್ಲಿ ಪೋಲೀಸರು ಸಕ್ಸಸ್. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಧಾರವಾಡ ಎಸ್ ಪಿ ಡಾ ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎನ್. ಬಿ. ಭರಮನಿ ಪೋಲಿಸ್ ಉಪಾಧೀಕ್ಷಕ ಶಿವಾನಂದ ಕಟಗಿ, ಅವರ ಮಾರ್ಗದರ್ಶನದಲ್ಲಿ ಕುಂದಗೋಳ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಾನಂದ ಅಂಬಿಗೇರ ನೇತ್ರತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಇಂದು ಏ 12 ರಂದು ಬೆಳಿಗ್ಗೆ 2:30 ರ ಸುಮಾರಿಗೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಆರೋಪಿಗಳು ಟ್ರಾಕ್ಟರ್ ಟ್ರೇಲರ್ ಕಳ್ಳತನ ಮಾಡಿರುವುದು ತಪ್ಪೂಪಿಕೊಂಡಿದ್ದಾರೆ
ಕುಂದಗೋಳ ಪಟ್ಟಣ, ಬೆನಕನಹಳ್ಳಿ, ಶಿರೂರ, ಇನಾಮಕೊಪ್ಪ ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹಾಗೂ ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ, ಮಲ್ಲಾಪುರ ಟ್ರೇಲರ್ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಸದರಿ ಆರೋಪಿಗಳಿಂದ ಒಟ್ಟು 13.40 ಲಕ್ಷ ರೂ ಮೌಲ್ಯದ 6 ಟ್ರೇಲರ್ ಹಾಗೂ 1 ನೀರಿನ ಟ್ಯಾಂಕರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 2 ಟ್ರಾಕ್ಟರ್ ಇಂಜಿನ್ ಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನಿಖಾ ತಂಡದಲ್ಲಿ ಪಿಎಸ್ಐ ಆರ್.ಸಿ.ದೊಡ್ಡಮನಿ, ಮಂಜುಳಾ ಸದಾರಿಯವರ, ಇಮ್ರಾನ್ ಪಠಾಣ ಹಾಗೂ ಸಿಬ್ಬಂದಿಗಳಾದ ಚಂದ್ರು ಬಡಿಗೇರ, ಬಸವರಾಜ ಶಿರಕೋಳ, ಮಡಿವಾಳ ಜೋಡಗೇರಿ, ಪರಮೇಶಿ ಗೊಂದಿ, ಶಂಕರ ಮುತ್ತಲಗೇರಿ, ಮಲಗೌಡ ಪಾಟೀಲ್, ಮೌನೇಶ ಗಲಗ, ಮಣಿಚಂದ್ರ ಗೋಣಿನವರ, ಅರುಣ ಹಾವಾಡಿ, ಉದಯ ಕಮ್ಮಾರ, ತಾಂತ್ರಿಕ ಸಿಬ್ಬಂದಿ ಆರೀಫ್ ಗೋಲಂದಾಜ, ವಿಠ್ಠಲ ಡಂಗನವರ ಇದ್ದಾರೆ. ಇವರ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿದ್ದಾರೆ.
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…