Latest

ಅನಧಿಕೃತ ಚೈನ್ ಲಿಂಕ್ ಕಂಪನಿಗಳ ಜಾಲ ಭೇದಿಸಿದ ಕೋಲಾರ ಜಿಲ್ಲಾ ಪೊಲೀಸ್.

ಕೋಲಾರ ಜಿಲ್ಲೆಯ ಸಾರ್ವಜನಿಕರ ದಿಕ್ಕುತಪ್ಪಿಸಿ ಕೋಟ್ಯಾಂತರ ರೂ. ವಂಚನೆ ಮಾಡುತ್ತಿದ್ದ ಅನಧಿಕೃತ ಚೈನ್‌ಲಿಂಕ್ ಕಂಪನಿಗಳ ಜಾಲವನ್ನು ಬೇಧಿಸಿ ವಂಚನೆಯಲ್ಲಿ‌ ತೊಡಗಿದ್ದ ಆರೋಪಿಗಳನ್ನು ಬಂಧಿಸಿ ಪ್ರಕರಣ‌ ದಾಖಲು ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಐ.ಪಿ.ಎಸ್ ರವರ ನೇತೃತ್ವದಲ್ಲಿ ನಗರದ ಇ.ಟಿ.ಸಿ.ಎಂ ವೃತ್ತ ಹಾಗೂ ಎಂಬಿ ರಸ್ತೆ ವಿಶಾಲ್‌ ಮಾರ್ಟ್ ಬಳಿ ತಲೆಎತ್ತಿದ್ದ ವಂಚಕ‌ ಕಂಪನಿಗಳ ಮೇಲೆ‌ ಏಕಕಾಲದಲ್ಲಿ ದಾಳಿ‌ ನಡೆಸಿ ವಿವಿಧ ರೀತಿಯ ಆಮಿಷ ತೋರಿಸಿ ಯುವಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ ಆರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಚಿನ್ ಘೋರ್ಪಡೆ, ಡಿ.ವೈ.ಎಸ್.ಪಿ ಮುರಳೀಧರ್, ನಗರ ಠಾಣೆ ಇನ್ಸ್ ಪೆಕ್ಟರ್ ಶ್ರೀ ಹರೀಶ್, ಸಿ.ಇ.ಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶ್ರೀ ವೀರೇಶ್ ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಎರಡೂ ನಕಲಿ ವಂಚಕ‌ ಕಂಪನಿಗಳ ವಿರುದ್ದ ಬಡ್ಸ್ ಕಾಯ್ದೆ 2019 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ಅತಿಯಾಸೆಗೆ ಒಳಗಾಗದೇ ಇಂತಹ ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಬಾರದು ಹಾಗೂ ಇಂತಹ ಜಾಲಗಳ‌ ಬಗ್ಗೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಸಂದೇಶ‌ ನೀಡಿರುತ್ತಾರೆ.

ದಿನಾಂಕ 12/09/2022 ರಂದು ಕೋಲಾರ ನಗರ ಪೊಲೀಸ್ ಠಾಣೆಗೆ ವರದಿಯಾದ ಲಿಖಿತ ದೂರಿನಂತೆ ಕೋಲಾರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚೌಡೇಶ್ವರಿ ನಗರದಲ್ಲಿ “ಖುಷಿ ಸಂಪದ” ಎಂಬ ಹೆಸರಿನ ಸಂಸ್ಥೆಯೊಂದು ಸಾರ್ವಜನಿಕರಿಂದ ಅನಧಿಕೃತವಾಗಿ ಠೇವಣಿಗಳನ್ನು ಸ್ವೀಕರಿಸಿ ಅತಿಯಾದ ಹಾಗೂ ಆಕರ್ಷಕ ಕಮಿಷನ್ ಉಡುಗೊರೆ ಇತ್ಯಾದಿಗಳನ್ನು ಕೊಡುವುದಾಗಿ ನಂಬಿಸಿ ಯಾವುದೇ ನಿಯಂತ್ರಿತ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೋಟ್ಯಾಂತರ ರೂಪಾಯಿಗಳನ್ನು ಸಾರ್ವಜನಿಕ ಹಣ ಠೇವಣಿಯನ್ನಾಗಿ ಪಡೆದುಕೊಳ್ಳುತ್ತಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಗೆ ವರದಿಯಾದ ದೂರಿನ ಮೇರೆಗೆ ಬಡ್ಸ್ ಕಾಯ್ದೆ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಾಗೆಯೇ ಇದೇ ದಿನ ಕೋಲಾರ ಸಿ.ಇ.ಎನ್ ಸೈಬರ್ ಪೊಲೀಸ್ ಠಾಣೆಗೆ ವರದಿಯಾದ ಲಿಖಿತ ದೂರಿನಂತೆ ನಗರದ ಮಹಾಲಕ್ಷ್ಮಿ ಲೇಔಟ್ ಹಾಗೂ ಇ ಟಿ ಸಿ ಎಂ ಆಸ್ಪತ್ರೆ ಸರ್ಕಲ್ ನಲ್ಲಿ ಮಾಡ್ರನ್ ಸ್ಕೂಲ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಸಂಸ್ಥೆ ಎಂಬ ಬಿಸಿನೆಸ್ ಟ್ರೈನಿಂಗ್ ಸೆಂಟರ್ ಗಳನ್ನು ತೆರೆದು ಸಾರ್ವಜನಿಕರಿಂದ ಅನಧಿಕೃತವಾಗಿ ಠೇವಣಿಗಳನ್ನು ಸ್ವೀಕರಿಸಿ ಅತಿಯಾದ ಹಾಗೂ ಆಕರ್ಷಕ ಕಮಿಷನ್ ಉಡುಗೊರೆ ಇತ್ಯಾದಿಗಳನ್ನು ಕೊಡುವುದಾಗಿ ನಂಬಿಸಿ ಯಾವುದೇ ನಿಯಂತ್ರಿಕ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣವನ್ನು ಠೇವಣಿಯನ್ನಾಗಿ ಪಡೆದುಕೊಳ್ಳುತ್ತಿರುವ ಬಗ್ಗೆ ಕೋಲಾರದ ಸೈಬರ್ ಪೊಲೀಸ್ ಠಾಣೆಗೆ ವರದಿಯಾದ ದೂರಿನ ಮೇರೆಗೆ ಬಡ್ಸ್ ಕಾಯ್ದೆ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಎರಡು ಪ್ರಕರಣಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಐಪಿಎಸ್ ಹಾಗೂ ಅಪಾರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಚಿನ್ ಪಿ. ಘೋರ್ಪಡೆ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರಳಿದರ ಕೋಲಾರ ನಗರ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಯ ತಂಡವು “ಖುಷಿ ಸಂಪದ” ಸಂಸ್ಥೆಯ ಮೇಲೆ ದಾಳಿ ನಡೆಸಿ ಕಚೇರಿಯಲ್ಲಿನ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿಕೊಂಡಿರುತ್ತಾರೆ. ಹಾಗೂ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಬಿ. ಒಡೆಯರ್, ಮಧು ಕಿರಣ್, ಶ್ರೀಮತಿ ವರಲಕ್ಷ್ಮಿ ರವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಹಾಗೆಯೇ ಈ ಸಂಸ್ಥೆಯ ಕಚೇರಿ ಮತ್ತು ಪ್ರಮುಖ ದಾಖಲಾತಿಗಳನ್ನು ಹಾಗೂ ಠೇವಣಿ ದಾರರಿಗೆ ಅಕ್ರಮವಾಗಿ ಹಂಚಲು ಶೇಖರಿಸಿಟ್ಟಿದ್ದ ಸುಮಾರು 500 ಆಹಾರ ಕಿಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಸೈಬರ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವೀರೇಶ್ ಕೋಲಾರ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಗಲ್ಪೇಟ್ ವೃತ್ತ ನಿರೀಕ್ಷಕರಾದ ವೆಂಕಟರಾಮಪ್ಪ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬೈರ ಹಾಗೂ ಪಿ.ಎಸ್.ಐ ಗಳಾದ ಅಣ್ಣಯ್ಯ ಮತ್ತು ಅರುಣ್ ಪಾಟೀಲ್ ಹಾಗೂ ಸಿಬ್ಬಂದಿಯ ತಂಡವು ಮಾಡ್ರನ್ ಸ್ಕೂಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ ಎರಡು ಬಿಸಿನೆಸ್ ಟ್ರೈನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡು ಮತ್ತು ಆರೋಪಿತರಾದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಠಾಕೂರ್, ಗಂಗರಾಜು, ಕೃಷ್ಣ, ಮಾರುತಿ ಮತ್ತು ಶ್ರೀಮತಿ ಜ್ಯೋತಿ ನರವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದಾಳಿಯ ವೇಳೆ ಗ್ರಾಹಕರಿಗೆ ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ಉಡುಪುಗಳನ್ನು, ತರಬೇತಿಗೆ ಬಳಸಿದ ಪೀಠೋಪಕರಣಗಳನ್ನು, ಕಂಪ್ಯೂಟರ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವರದಿ – ರೋಶನ್

ಭ್ರಷ್ಟರ ಬೇಟೆ

Recent Posts

ಶಿಕ್ಷಕಿಯ ಪ್ರೀತಿ ನಿರಾಕರಣೆ: ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ

ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…

6 days ago

ರೈಲಿನ ಶೌಚಾಲಯದಲ್ಲಿ ರೋಮ್ಯಾನ್ಸ್! ಯುವಕ ಯುವತಿಯ ವಿಡಿಯೋ ವೈರಲ್

ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…

6 days ago

ಚಿತ್ರದಲ್ಲಿ ಡ್ರಗ್ ಪೆಡ್ಲರ್ ಪಾತ್ರ, ವಾಸ್ತವದಲ್ಲೂ ಮಾದಕ ದಂಧೆ – ವಿದೇಶಿ ನಟನ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…

6 days ago

ಅಫ್ಘಾನಿಸ್ತಾನದಲ್ಲಿ ಬಸ್ ಅಪಘಾತ: 71 ಸಾವು, 17 ಮಕ್ಕಳು ಬಲಿಯಾದ ದುರಂತ

ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

6 days ago

ಇನ್‌ಸ್ಟಾಗ್ರಾಂ ಪರಿಚಯ ದುರಂತ: ಬಿಜ್ನೋರ್‌ನಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…

7 days ago

“ಸುಪ್ರೀಂ ತೀರ್ಪಿಗೆ ಬೇಸರಗೊಂಡ ಪ್ರಾಣಿ ಪ್ರೇಮಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ದಾಳಿ”

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ…

7 days ago