Latest

ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಈಗ ಕಾಮಸಮುದ್ರಂ ಪೊಲೀಸರ ಅತಿಥಿ.

ಕೋಲಾರ ಮತ್ತು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಸಮಯ ಮಂಕಿ ಕ್ಯಾಪ್‌ ಧರಿಸಿ ಮನೆ ಕಳ್ಳತನದ ಹಲವು ಪ್ರಕರಣಗಳಲ್ಲಿ ಅಂತರ್ ರಾಜ್ಯ ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಭಾಗಿಯಾಗಿದ್ದು ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲಿಸ್ ಹಲವು ಠಾಣೆಗಳಲ್ಲಿ ಬಿ.ಎನ್.ಎಸ್ (ಭಾರತೀಯ ನ್ಯಾಯ ಸಂಹಿತಾ,2023) ರೀತ್ಯಾ ಪ್ರಕರಣ ದಾಖಲಾಗಿದ್ದು, ನಂತರ ಕೆ.ಜಿ.ಎಪ್ ಪೊಲೀಸ್ ಅಧೀಕ್ಷಕರಾದ ಕೆ.ಎಂ. ಶಾಂತರಾಜು ಐ.ಪಿ.ಎಸ್, ರವರು ಸದರಿ ಮಂಕಿ ಕ್ಯಾಪ್ ಗ್ಯಾಂಗ್ ಪತ್ತೆಗೆ ವಿಶೇಷ ಅಫರಾದ ಪತ್ತೆ ದಳ ರಚನೆ ರಚಿಸಿ ಆ ತಂಡದಲ್ಲಿ ಕಿರಣ್ ಕುಮಾರ್ ಬಿ.ವಿ. ಪಿ.ಎಸ್.ಐ ಕಾಮಸಮುದ್ರಂ ಪೊಲೀಸ್ ಠಾಣೆ ಹಾಗೂ ಹೆಡ್ ಕಾನ್ಸ್‌ಟೇಬಲ್‌ ಮಂಜುನಾಥ್ ರೆಡ್ಡಿ, ಅನಿಲ್ ಕುಮಾರ್, ಮಿನವ್ವರ್ ಪಾಷ, ರಾಮಕೃಷ್ಣಾರೆಡ್ಡಿ, ರಾಮರಾವ್, ಮತ್ತು ಕಾನ್ಸ್‌ಟೇಬಲ್ ಮಂಜುನಾಥ್, ಲಕ್ಷ್ಮಣ್ ತೇಲಿ, ಮುನೇಂದ್ರ, ಚಾಲಕ ಗುರುಮೂರ್ತಿ, ತಾಂತ್ರಿಕ ಸಹಾಯಕ ಚಂದ್ರಶೇಖರ್ ಒಳಗೊಂಡ ತಂಡ, ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ. ಊರಿಗಾಂ ವೃತ್ತ ನೀರಿಕ್ಷಕ ಮಾರ್ಕೊಂಡಯ್ಯ ನೇತೃತ್ವದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್ ಆರೋಪಿಗಳಾದ ಖಾದರ್ ಬಾಷ ಅಲಿಯಾಸ್ ತೋಟ ಕನಮ ಬಾಬು ಅಲಿಯಾಸ್ ಬಾಬು ಕರ್ನಾಟಕ ರಾಜ್ಯ, ಆರೀಫ್ ಹರಿಯಾಣ ರಾಜ್ಯ, ಮುಷ್ಠಾಖ್ ಖಾನ್ ಹರಿಯಾಣ ರಾಜ್ಯ, ರವರನ್ನು ವಿಶೇಷ ಅಫರಾದ ಪತ್ತೆ ದಳ ಪತ್ತೆ ಮಾಡಿ ವಿಚಾರಣೆ ಮಾಡಿದಾಗ ಹರಿಯಾಣ ಮೂಲದ ಮೇವತ್ ಜಿಲ್ಲೆ (ನುಹ್ ಜಿಲ್ಲೆ) ಯವರಾಗಿದ್ದಾರೆ.

ಈ ಮಂಕಿ ಕ್ಯಾಪ್ ಗ್ಯಾಂಗ್ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ, ಕೆಜಿಎಫ್, ರಾಬರ್ಟಸನ್ ಪೇಟೆ, ಬಂಗಾರಪೇಟೆ , ಕಾಮಸಮುದ್ರಂ, ಬೇತಮಂಗಲ ಠಾಣೆಗಳಲ್ಲಿ ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 10 ಪ್ರಕರಣಗಳು ಹಾಗು ಆಂದ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ 02 ಪ್ರಕರಣ ಅತ್ತೆಯಾಗಿದೆ. ಆರೋಪಿಗಳ ಕಡೆಯಿಂದ 67 ಗ್ರಾಂ ಚಿನ್ನಾಭರಣಗಳು, 03 ಜೊತೆ ಬೆಳ್ಳಿ ಕಾಲು ಚೈನುಗಳು, 01 ಪಲ್ಸರ್ ಬೈಕ್ ಮತ್ತು 01 ಹೀರೋ ಪ್ಯಾಷನ್ ಪ್ಲಸ್ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 7,60,000/- ರೂಗಳು, ಮತ್ತು ಆರೋಪಿಗಳಾದ 03 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ವರದಿ: ರೋಶನ್ ಜಮೀರ್

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago