Latest

ಶ್ರೀಗಂಧ ಮಾರಾಟ ಮಾಡುತ್ತಿದ್ದ ಮರಗಳ್ಳನನ್ನು ಹೆಡೆಮುರಿಕಟ್ಟಿದ ಖಾಕಿಪಡೆ.

ಖಾನಾಪೂರ : ತಾಲೂಕಿನ ನಂದಗಡ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ವಾಗಿ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಖಾನಾಪೂರ ತಾಲೂಕಿನ ನಂದಗಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಸಂಗೋಳ್ಳಿ ರಾಯಣ್ಣನನ್ನು ಗಲ್ಲಿಗೆ ಏರಿಸಿದ ಸ್ಥಳದ ಪಕ್ಕದಲ್ಲಿಯೆ ಆತ ಶ್ರೀಗಂಧದ ಗಿಡವನ್ನು ಕಳ್ಳತನದಿಂದ ಕಡಿದು ಅದರ ತುಂಡುಗಳನ್ನು ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ, ನಿರ್ಬಯವಾಗಿ ತನ್ನ ಕಬ್ಜಾದಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ತನ್ನ ಸ್ವಂತ ಪಾಯ್ದೆಗೊಸ್ಕರ ಅಕ್ರಮವಾಗಿ ಸಾಗಿಸುವ ಖಚಿತ ಮಾಹಿತಿ ಮೇರೆಗೆ ನಂದಗಡ ಪೋಲಿಸ್ ಠಾಣೆಯ ಎ.ಎಸ್‌.ಐ .ಎಚ್.ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಎಸ್.ಬಿ.ಬೇಳವಡಿ,ಎಮ್.ಎಮ್.ಮುಲ್ಲಾ ,ಯು.ಬಿ.ಶಿಂತ್ರಿ , ಬಸವರಾಜ ಲಮಾಣಿ ಅವರು ದಾಳಿ ನಡೆಸಿ ಆರೋಪಿಯಾದ ಬಿದರಬಾವಿ ಗ್ರಾಮದ ಆನಂದ ಮಾರುತಿ ರಾಮಣ್ಣನವರ ಈತನನ್ನು ಬಂಧಿಸಿ ಇತನಿಂದ ಶ್ರೀಗಂಧದ ಕಟ್ಟಿಗೆಯ ತುಂಡುಗಳನ್ನು ಜಪ್ತಿ ಮಾಡಿಕೊಂಡು ಅಪರಾಧ ಸಂಖ್ಯೆ 35/2023 ಕಲಂ 379 ಐಪಿಸಿ ಮತ್ತು ಕಲಂ 86,87 ಕರ್ನಾಟಕ ಅರಣ್ಯ ಅಧಿನಿಯಮ 1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ : ಚರಂತಯ್ಯ ಹಿರೇಮಠ.

ಭ್ರಷ್ಟರ ಬೇಟೆ

Recent Posts

ಕೆರೆಗೆ ಬಿದ್ದು ಜೀವ ಕಳೆದುಕೊಂಡ ಮೂರು ವರ್ಷದ ಅವಳಿ ಮಕ್ಕಳು: ಯರಿ ನಾರಾಯಣಪುರದಲ್ಲಿ ದುರ್ಘಟನೆ, ಗ್ರಾಮದಲ್ಲಿ ಆಕ್ರಂದನ

ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ಮಗುಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಮನೆಯ…

2 hours ago

ಪ್ರಚಾರ ವಿವಾದಕ್ಕೆ ರಚಿತಾ ರಾಮ್ ಗಟ್ಟಿ ಪ್ರತಿಕ್ರಿಯೆ: ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ!

ಬೆಂಗಳೂರು: 'ಸಂಜು ವೆಡ್ಸ್ ಗೀತಾ-2' ಸಿನಿಮಾ ತಂಡ ಮತ್ತು ನಟಿ ರಚಿತಾ ರಾಮ್ ನಡುವಿನ ವೈಮನಸ್ಸು ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಿಂದ…

2 hours ago

ಭಟ್ಕಳದಲ್ಲಿ ಜೂಜಾಟದ ಕ್ಲಬ್ ಮೇಲೆ ದಾಳಿ : 25 ಮಂದಿ ವಿರುದ್ಧ ಪೊಲೀಸ್ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಕಲ್ಬಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಖಾಸಗಿ ಕ್ಲಬ್‌ನಲ್ಲಿ ಜೂಜಾಟ ನಡೆಯುತ್ತಿತ್ತು ಎಂಬ…

2 hours ago

30 ವರ್ಷದ ಹಿಂದಿನ ಲಂಚ ಪ್ರಕರಣ: ನಿವೃತ್ತಿಗೆ 10 ವರ್ಷವಾದ ಮೇಲೆ ಗ್ರಾಮ ಲೆಕ್ಕಾಧಿಕಾರಿಗೆ ಜೈಲುದಂಡ

ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ…

6 hours ago

“ಶೇ.100ಫಲಿತಾಂಶದ ನಾಟಕದ ಹಿಂದೆ ಸುಳ್ಳು ಆಟ: ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳ ದುರ್ಬಳಕೆ”

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…

13 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

1 day ago