ಕಾರವಾರ, ಜುಲೈ 10: ಹೆಸರುತೊಂದಿದ ವೈದ್ಯಕೀಯ ಸೇವೆ, ಜನರ ಮನದಲ್ಲಿ ‘ಆಪತ್ಪಾಂಡವ’ ಎಂಬ ಪದದ ವ್ಯಾಖ್ಯಾನವೆನಿಸಿದ್ದವರು—ಅವರೇ ಈಗ ಭ್ರಷ್ಟಾಚಾರದ ಕಳ್ಳಬೇಟೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಾರವಾರದ ಜಿಲ್ಲಾ ಸರ್ಜನ್ ಹಾಗೂ ಪ್ರಸಿದ್ಧ ಸ್ತ್ರೀರೋಗ ತಜ್ಞ ಡಾ. ಶಿವಾನಂದ ಕುಡ್ತಳಕರ್ ಅವರನ್ನು ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿಸಿದೆ.
ವರ್ಷಗಳ ಕಾಲ ಸರ್ಕಾರಿ ವೈದ್ಯರ ಹುದ್ದೆಯಲ್ಲಿದ್ದ ಡಾ. ಕುಡ್ತಳಕರ್ ಅವರ ಖಾಸಗಿ ಕ್ಲಿನಿಕ್ ಕೂಡ ಜನಪ್ರಿಯವಾಗಿತ್ತು. ಆದರೆ ಈ ಮಧ್ಯೆ, ಬಹುತೇಕ ಬಡರೋಗಿಗಳಿಗೂ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಆರೋಪಗಳು ಇತ್ತಿಚೆಗೆ ಬಿಗಿಯಾಗುತ್ತ ಬಂದಿದ್ದವು.
2020ರಲ್ಲೇ ಗರ್ಭಿಣಿ ಗೀತಾ ಭಾನಾವಳಿ ಅವರ ಸಾವಿಗೆ ಸಂಬಂಧಿಸಿದಂತೆ ಕಾರವಾರದಲ್ಲಿ ಡಾ. ಕುಡ್ತಳಕರ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಸ್ಥಳೀಯರು ಅವರ ವರ್ಗಾವಣೆಗೂ ಒತ್ತಾಯಿಸಿ ಹೋರಾಟ ನಡೆಸಿದ್ದರು. ಅವರು ಕಾರವಾರದಿಂದ ಬೇರೊಂದು ಕಡೆಗೆ ವರ್ಗಾಯಿಸಲ್ಪಟ್ಟರೂ ಮತ್ತೆ ಇದೇ ಸ್ಥಳಕ್ಕೆ ಹಿಂತಿರುಗಿ, ಜಿಲ್ಲಾ ಸರ್ಜನ್ ಆಗಿ ಅಧಿಕಾರ ಮುಂದುವರಿಸಿದ್ದರು.
ಇತ್ತೀಚೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ ಹಾಗೂ ಇತರ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಮೌಸೀನ್ ಶೇಖ್ ಎಂಬವರಿಂದ ಡಾ. ಕುಡ್ತಳಕರ್ 75 ಸಾವಿರ ರೂಪಾಯಿ ಲಂಚಕ್ಕೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಮೊದಲ ಹಂತವಾಗಿ ಅವರು ಜುಲೈ 9ರ ರಾತ್ರಿ ₹20,000 ತೆಗೆದುಕೊಂಡಿದ್ದರೆ, ಜುಲೈ 10ರಂದು ಮತ್ತಷ್ಟು ಹಣಕ್ಕಾಗಿ ಒತ್ತಾಯಿಸುತ್ತಿದ್ದರು.
ಪದೇಪದೆ ಆಗುತ್ತಿರುವ ಲಂಚದ ಬೇಡಿಕೆಯಿಂದ ತೀಕ್ಷ್ಣಗೊಂಡ ಮೌಸೀನ್ ಶೇಖ್, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ಅದಕ್ಕೆ ತಕ್ಷಣ ಸ್ಪಂದನೆ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಣ ಪಡೆಯುತ್ತಿದ್ದ ಕ್ಷಣದಲ್ಲಿ ಡಾ. ಕುಡ್ತಳಕರ್ ಅವರನ್ನು ಲೋಕುಾಯುಕ್ತ ಪೊಲೀಸರು ಬಲೆಗೆ ತೆಗೆದುಕೊಂಡರು.
ಪ್ರಭಾವಿ ವೈದ್ಯರಾದ ಡಾ. ಕುಡ್ತಳಕರ್ ಮೇಲೆ ನಡೆದ ಈ ದಾಳಿ ಭ್ರಷ್ಟ ವೈದ್ಯಕೀಯ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಲ್ಲಿ ಹೊಸ ಭರವಸೆಯ ಕಿರಣ ಹರಡಿದ್ದು, ಅಧಿಕಾರ ದುರುಪಯೋಗಿಸುವವರಿಗೆ ಇದು ಸ್ಪಷ್ಟ ಎಚ್ಚರಿಕೆ ಸಂಚಿಕೆಯಾಗಿದೆ.
ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ…
ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…