ಕುಂದಗೋಳ; ತಾಲೂಕಿನ ಮುಳ್ಳೋಳಿ ಗ್ರಾಮದ ರಸ್ತೆ ಪಾಡು ಹೇಳ ತೀರದೂ ಅತಿವೃಷ್ಟಿಗೆ ಸಿಲುಕಿ ತೆಗ್ಗು ದಿನ್ನಿಯಿಂದ ಕಂಗೊಳಿಸುತ್ತಿರುವ ರಸ್ತೆ ನೋಡಿದರೆ ಇದೇನಾ ರಸ್ತೆ ದುರಸ್ತಿ? ಅಂತ ಪ್ರೆಶ್ನೆ ಉದ್ಭವವಾಗಿದೆ.
ಹೌದು ಈ ಹಿಂದೆ ಅತಿವೃಷ್ಟಿಗೆ ಹಾನಿಗೊಂಡ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಿತ್ತು. ಈ ರಸ್ತೆ ಸುಧಾರಣೆ ಪ್ರಯಾಣಿಕರಿಗೆ ನಿರಾಸೆ ಉಂಟುಮಾಡಿದೆ. ಎಲ್ಲಿ ನೋಡಿದರು ತೆಗ್ಗು-ಗುಂಡಿಗಳು, ರಸ್ತೆ ಏರಿಳಿತದಿಂದ ಕೊಡಿದ ರಸ್ತೆಗೆ ಗುಂಡಿ ಮುಚ್ಚುವುದರಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತದೆ. ಇನ್ನೂ ರಸ್ತೆ ನೋಡಿದರೆ ಗೊತ್ತಾಗುತ್ತೆ. ಎಷ್ಟರ ಮಟ್ಟಿಗೆ ದುರಸ್ತಿಗೊಂಡಿದೆ ಅಂತ
ಕಳೆದ ಬಾರಿ ಅತಿವೃಷ್ಟಿಗೆ ಹೀಡಾಗಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಬಳಿಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಧಿಕಾರಿಗಳು ಎಚ್ಚೆತ್ತು 1 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ದುರಸ್ತಿ ಎಂಬ ಕಾಮಗಾರಿ ಕೈಗೊಂಡು ಅರ್ಧಂಬರ್ಧ ದುರಸ್ತಿ ಗೊಳಿಸಿದ್ದಾರೆ. ಆದರೆ ಹಣ ಮಾತ್ರ ಸಂಪೂರ್ಣ ಸಂದಾಯವಾಗಿದೆ. ಜೊತೆಗೆ ಮುಕ್ತಾಯ ಪ್ರಮಾಣ ಪತ್ರ ಕೊಡ ಸರಕಾರಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹಾಗಾದರೆ ಅಧಿಕಾರಿಗಳು ಪರಿಶೀಲಸದೆ ಹೇಗೆ ? ಗುತ್ತಿಗೆದಾರನಗೆ ಹಣ ಸಂದಾಯ ಮಾಡಿದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.
ಹಾಗಾದರೆ ಸಾರ್ವಜನಿಕರಿಗೆ ಮಾಹಿತಿ ಕೊರತೆನಾ? ಅಥವಾ ಅಧಿಕಾರಿಗಳ ಜಾನತನವೋ ಒಂದು ಗೊತ್ತಿಲ್ಲ.
ಒಟ್ಟಿನಲ್ಲಿ ರಸ್ತೆ ದುರಸ್ತಿ ಮಾಡಿದ್ದೇವೆ ಎಂದು ಕೈ ತೊಳೆದುಕೊಂಡ ಬಿಟ್ಟಾರಾ. ಅನ್ನುವುದೇ ಅನುಮಾನ ಸಾರ್ವಜನಿಕ ರಲ್ಲಿ ಗೊಂದಲ ಉಂಟಾಗಿದೆ.
ವರದಿ; ಶಾನು ಯಲಿಗಾರ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…