Latest

ಗಾಢ ನಿದ್ರೆಯಲ್ಲಿದ್ದ ರೈಲ್ವೆ ಇಲಾಖೆಗೆ ರೈಲು ತಡೆ ಪ್ರತಿಭಟನೆಯ ಚುಚ್ಚುಮದ್ದು; ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಬೆಂಗಳೂರು ಡಿ.ಆರ್.ಎಂ.

ಕೋಲಾರ: ವಿಶೇಷ ಸವಲತ್ತಿನ ಎ.ಸಿ ಕೋಚ್ ಹತ್ತಿ ಪ್ರತಿಭಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಡಿ.ಆರ್.ಎಂ ನೆನ್ನೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ನಡೆಸಿದ ರೈಲು ತಡೆದು ಪ್ರತಿಭಟನೆಯ ವಿವರ ಪಡೆಯಲು ಮತ್ತು ಮಾಧ್ಯಮಗಳಿಗೆ ಪತ್ರಿಕಾ ಗೋಷ್ಠಿ ನೀಡಲು ಆಗಮಿಸಿದ ಬೆಂಗಳೂರು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ.

ಗಾಢ ನಿದ್ರೆಯಲ್ಲಿ ಮಲಗಿದ್ದ ಬೆಂಗಳೂರು ರೈಲ್ವೆ ಅಧಿಕರಿಗಳು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ನೆನ್ನೆ ಜ. 29 ರಂದು ಮಾರಿಕುಪ್ಪಂ – ಕೆ.ಎಸ್.ಆರ್ ಮೆಮೊ ರೈಲು ಸಂಖ್ಯೆ 66512 ದೈನಂದಿನ ಪ್ರಯಾಣಿಕರು ರೈಲು ತಡೆಯುವ ಮೂಲಕ ನಡೆಸಿದ ಪ್ರತಿಭಟನೆಯಿಂದ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ ತಮ್ಮ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಕೂಡಲೇ ಮಾಧ್ಯಮ ಸುದ್ದಿಗೋಷ್ಠಿ ನಡೆಸಲು ದೌಡಾಯಿಸಿದ ಡಿ ಆರ್ ಎಂ ಮತ್ತು ರೈಲ್ವೆ ಅಧಿಕಾರಿಗಳು.

ಪ್ರತಿಭಟನೆಗೆ ಸ್ಪಂದಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತದಿಂದ ಪಾರಾಗುವ ಭರವಸೆ ನೀಡಿ ಕೂಡಲೇ ಜನರ ಹಿತ ದೃಷ್ಟಿಯಿಂದ ಹೆಚ್ಚುವರಿ ಕೋಚ್ ಗಳನ್ನು ಅಂತವಾಗಿ ಅಳವಡಿಸಲಾಗುವುದು ಎಂದು ಡಿ.ಆರ್.ಎಂ. ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದರು.

ಈ ವೇಳೆ ಮಧ್ಯಮ ಸುದ್ದಿಗೋಷ್ಠಿ ನಡೆಸಿದ ಕೋಲಾರ ಸಂಸಾರದ ಎಂ. ಮಲ್ಲೇಶ್ ಬಾಬು ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ ರವರು ಜ. 30 ರಿಂದ ಹೆಚ್ಚುವರಿ ಬೋಗಿ ಅಳವಡಿಸ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಹಲವು ರೈಲ್ವೆ ಭೋಗಿಗಳು ದುರಸ್ತಿ ಕಾರ್ಯದಲ್ಲಿರುವ ಕಾರಣ 12 ರಿಂದ 8 ಭೋಗಿಗಳಿಗೆ ಇಳಿಸಬೇಕಾದ ಪರಿಸ್ಥಿ ಉಂಟಾಯಿತು, ಇದರ ಪರಿಣಾಮ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದ್ದು ಕಂಡುಬಂದಿದೆ, ತಕ್ಷಣ 8 ಭೋಗಿಗಳಿಗೆ 4 ಭೋಗಿಗಳು ಜೋಡಿಸಿ ರೈಲನ್ನು 12 ಬುಗಿಗಳಾಗಿ ಜ. 30 ರಿಂದಲೆ ಜಾರಿಗೆ ತರುತ್ತೇವೆ ಮತ್ತು ಒಂದು ತಿಂಗಳ ಒಳಗಾಗಿ ಇದನ್ನು ಮತ್ತೊಮ್ಮೆ ನಾಲ್ಕು ಹೆಚ್ಚುವರಿ ಭುಗಿಗಳನ್ನು ಜೋಡಿಸಿ ಒಟ್ಟು 16 ಭೋಗಿಗಳಾಗಿ ಎಂದಿನಂತೆ ಮಾಡಲಾಗುವುದು ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವುದು ಎಂದು ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಸಂಸದರು ಮತ್ತು ಡಿ.ಆರ್.ಎಂ ಭರವಸೆ ನೀಡಿದ್ದಾರೆ.

ಇದೇ ವೇಳೆ ಮರಿಕುಪ್ಪಂ (ಕೆಜಿಎಫ್) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಆಂಧ್ರಪ್ರದೇಶದ ಕುಪ್ಪಂ ಮಾರ್ಗಕ್ಕೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಹಳಿ ಪರಿಶೀಲನೆ ನಡೆಸಿ ಬಂಗಾರಪೇಟೆ ಸುತ್ತಲಿನ ಬೂದಿಕೋಟೆ ಮುಖ್ಯರಸ್ತೆ, ಬಂಗಾರಪೇಟೆ – ಕೋಲಾರ ಮುಖ್ಯರಸ್ತೆಯಲ್ಲಿ ಎಸ್ ಎನ್ ರೆಸಾರ್ಟ್ ಹತ್ತಿರ ಮತ್ತು ಸ್ಯಾನಿಟೋರಿಯಂ ಹತ್ತಿರ ಮತ್ತು ಕಾಮಸಮುದ್ರ ರಸ್ತೆಯಲ್ಲಿ ನಡೆಯುವ ರೈಲ್ವೆ ಓವರ್ ಬ್ರಿಜ್ (ಆರ್.ಒ.ಬಿ) ಮತ್ತು ರೈಲ್ವೆ ಅಂಡರ್ ಬ್ರಿಡ್ಜ್ (ಆರ್. ಯು. ಬಿ) ಕಾಮಗಾರಿಗಳ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ವರದಿ: ರೋಷನ್ ಜಮೀರ್.

nazeer ahamad

Recent Posts

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

2 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

2 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

2 hours ago

“ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ OYOಗೆ!” — ಮಗಳ ಮೇಲೆ ತಾಯಿ ದಾಳಿ ವಿಡಿಯೋ ವೈರಲ್.

ಇಂಟರ್‌ನೆಟ್ ಕ್ರಾಂತಿಯ ನಂತರ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಕೈಗೆ ತಲುಪಿದ ಪರಿಣಾಮ, ಸಾಮಾನ್ಯ ಜನರೂ ಈಗ ಕಂಟೆಂಟ್ ಕ್ರಿಯೇಟರ್‌ಗಳಾಗಿ ಪರಿಣಮಿಸಿದ್ದಾರೆ. ಈ…

6 hours ago

ಯಾದಗಿರಿಯಲ್ಲಿ ಭೀಕರ ರಸ್ತೆ ದುರಂತ: ಕಾರು–ಬಸ್ ಡಿಕ್ಕಿ, 6 ಮಂದಿ ಸಜೀವ ದಹನ—ಹೃದಯ ಕಲುಕುವ ದೃಶ್ಯ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಜೀವ…

6 hours ago

ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ— ಲೋಕಸಭೆಯಲ್ಲಿ ಅಮಿತ್ ಶಾ ಕಠಿಣ ನಿಲುವು

ನವದೆಹಲಿ: ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದು ಎಂದರೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಅರ್ಥೈಸಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಗೃಹ…

8 hours ago