Latest

ಗಾಢ ನಿದ್ರೆಯಲ್ಲಿದ್ದ ರೈಲ್ವೆ ಇಲಾಖೆಗೆ ರೈಲು ತಡೆ ಪ್ರತಿಭಟನೆಯ ಚುಚ್ಚುಮದ್ದು; ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಬೆಂಗಳೂರು ಡಿ.ಆರ್.ಎಂ.

ಕೋಲಾರ: ವಿಶೇಷ ಸವಲತ್ತಿನ ಎ.ಸಿ ಕೋಚ್ ಹತ್ತಿ ಪ್ರತಿಭಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಡಿ.ಆರ್.ಎಂ ನೆನ್ನೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ನಡೆಸಿದ ರೈಲು ತಡೆದು ಪ್ರತಿಭಟನೆಯ ವಿವರ ಪಡೆಯಲು ಮತ್ತು ಮಾಧ್ಯಮಗಳಿಗೆ ಪತ್ರಿಕಾ ಗೋಷ್ಠಿ ನೀಡಲು ಆಗಮಿಸಿದ ಬೆಂಗಳೂರು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ.

ಗಾಢ ನಿದ್ರೆಯಲ್ಲಿ ಮಲಗಿದ್ದ ಬೆಂಗಳೂರು ರೈಲ್ವೆ ಅಧಿಕರಿಗಳು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ನೆನ್ನೆ ಜ. 29 ರಂದು ಮಾರಿಕುಪ್ಪಂ – ಕೆ.ಎಸ್.ಆರ್ ಮೆಮೊ ರೈಲು ಸಂಖ್ಯೆ 66512 ದೈನಂದಿನ ಪ್ರಯಾಣಿಕರು ರೈಲು ತಡೆಯುವ ಮೂಲಕ ನಡೆಸಿದ ಪ್ರತಿಭಟನೆಯಿಂದ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ ತಮ್ಮ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಕೂಡಲೇ ಮಾಧ್ಯಮ ಸುದ್ದಿಗೋಷ್ಠಿ ನಡೆಸಲು ದೌಡಾಯಿಸಿದ ಡಿ ಆರ್ ಎಂ ಮತ್ತು ರೈಲ್ವೆ ಅಧಿಕಾರಿಗಳು.

ಪ್ರತಿಭಟನೆಗೆ ಸ್ಪಂದಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತದಿಂದ ಪಾರಾಗುವ ಭರವಸೆ ನೀಡಿ ಕೂಡಲೇ ಜನರ ಹಿತ ದೃಷ್ಟಿಯಿಂದ ಹೆಚ್ಚುವರಿ ಕೋಚ್ ಗಳನ್ನು ಅಂತವಾಗಿ ಅಳವಡಿಸಲಾಗುವುದು ಎಂದು ಡಿ.ಆರ್.ಎಂ. ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದರು.

ಈ ವೇಳೆ ಮಧ್ಯಮ ಸುದ್ದಿಗೋಷ್ಠಿ ನಡೆಸಿದ ಕೋಲಾರ ಸಂಸಾರದ ಎಂ. ಮಲ್ಲೇಶ್ ಬಾಬು ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ ರವರು ಜ. 30 ರಿಂದ ಹೆಚ್ಚುವರಿ ಬೋಗಿ ಅಳವಡಿಸ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಹಲವು ರೈಲ್ವೆ ಭೋಗಿಗಳು ದುರಸ್ತಿ ಕಾರ್ಯದಲ್ಲಿರುವ ಕಾರಣ 12 ರಿಂದ 8 ಭೋಗಿಗಳಿಗೆ ಇಳಿಸಬೇಕಾದ ಪರಿಸ್ಥಿ ಉಂಟಾಯಿತು, ಇದರ ಪರಿಣಾಮ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದ್ದು ಕಂಡುಬಂದಿದೆ, ತಕ್ಷಣ 8 ಭೋಗಿಗಳಿಗೆ 4 ಭೋಗಿಗಳು ಜೋಡಿಸಿ ರೈಲನ್ನು 12 ಬುಗಿಗಳಾಗಿ ಜ. 30 ರಿಂದಲೆ ಜಾರಿಗೆ ತರುತ್ತೇವೆ ಮತ್ತು ಒಂದು ತಿಂಗಳ ಒಳಗಾಗಿ ಇದನ್ನು ಮತ್ತೊಮ್ಮೆ ನಾಲ್ಕು ಹೆಚ್ಚುವರಿ ಭುಗಿಗಳನ್ನು ಜೋಡಿಸಿ ಒಟ್ಟು 16 ಭೋಗಿಗಳಾಗಿ ಎಂದಿನಂತೆ ಮಾಡಲಾಗುವುದು ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವುದು ಎಂದು ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಸಂಸದರು ಮತ್ತು ಡಿ.ಆರ್.ಎಂ ಭರವಸೆ ನೀಡಿದ್ದಾರೆ.

ಇದೇ ವೇಳೆ ಮರಿಕುಪ್ಪಂ (ಕೆಜಿಎಫ್) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಆಂಧ್ರಪ್ರದೇಶದ ಕುಪ್ಪಂ ಮಾರ್ಗಕ್ಕೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಹಳಿ ಪರಿಶೀಲನೆ ನಡೆಸಿ ಬಂಗಾರಪೇಟೆ ಸುತ್ತಲಿನ ಬೂದಿಕೋಟೆ ಮುಖ್ಯರಸ್ತೆ, ಬಂಗಾರಪೇಟೆ – ಕೋಲಾರ ಮುಖ್ಯರಸ್ತೆಯಲ್ಲಿ ಎಸ್ ಎನ್ ರೆಸಾರ್ಟ್ ಹತ್ತಿರ ಮತ್ತು ಸ್ಯಾನಿಟೋರಿಯಂ ಹತ್ತಿರ ಮತ್ತು ಕಾಮಸಮುದ್ರ ರಸ್ತೆಯಲ್ಲಿ ನಡೆಯುವ ರೈಲ್ವೆ ಓವರ್ ಬ್ರಿಜ್ (ಆರ್.ಒ.ಬಿ) ಮತ್ತು ರೈಲ್ವೆ ಅಂಡರ್ ಬ್ರಿಡ್ಜ್ (ಆರ್. ಯು. ಬಿ) ಕಾಮಗಾರಿಗಳ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ವರದಿ: ರೋಷನ್ ಜಮೀರ್.

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago