ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆಯಿದ್ದು, ಸಾಲದ ಹಣ ವಾಪಸ್ ನೀಡದ ಕಾರಣ ವ್ಯಕ್ತಿಯೊಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಚಾಂದ್ ಸಾಬ್ ಎಂಬವರು 20,000 ರೂಪಾಯಿ ಸಾಲ ಪಡೆದಿದ್ದರಿದ್ದು, ಸಾಲದ ಹಣ ವಾಪಸ್ ಕೊಡದ ಕಾರಣದಿಂದಾಗಿ ಕುಮಾರ್ ಬಿರಾದರ್ ಎಂಬವರು ಆಕ್ರೋಶಕ್ಕೆ ಮಿದ್ದು, ಅವರ ಕಾಲಿಗೆ ಲೋಹದ ಸರಪಳಿ ಕಟ್ಟಿದರೆಂಬ ಆರೋಪ ಇದೆ. ಈ ಘಟನೆ ಗ್ರಾಮಸ್ಥರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಮಾನವ ಹಕ್ಕುಗಳನ್ನು ಹಾಸ್ಯಾಸ್ಪದಗೊಳಿಸುವ ಕೃತ್ಯವೆಂದು ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಚಾಂದ್ ಸಾಬ್ ವಿರುದ್ಧ ಹಣ ವಾಪಸ್ ನೀಡದ ಆರೋಪವಿದ್ದರೂ, ಯಾರನ್ನಾದರೂ ಸರಪಳಿಯಿಂದ ಕಟ್ಟುವುದು ಕಾನೂನಿಗೆ ವಿರುದ್ಧವಾಗಿರುವುದರಿಂದ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ತನಿಖೆ ಸಾಗುತ್ತಿದೆ.
