Latest

ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆ; ಕಣ್ಮುಚ್ಚಿ ಕುಳಿತಿರುವ ನಾಲಾಯಕ್ ಅಧಿಕಾರಿಗಳು!

ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಿರಾಣಿ ಅಂಗಡಿಗಳು ಹಾಗೂ ಪಾನ್ ಶಾಪ್ ಗಳಲ್ಲಿ ಸಹ ಮದ್ಯ ದೊರೆಯುತ್ತಿದೆ. ಬೇನಾಳ ಆರ್ ಸಿ ಗ್ರಾಮದ ಅಂಗಡಿಗಳಿಗೆ ಒಟಿ, ಬಿಪಿ, ವಿಸ್ಕಿ ಮುಂತಾದ ಬ್ರ್ಯಾಂಡ್ ಗಳನ್ನು ಆಲಮಟ್ಟಿ ಮಾರ್ಗದಿಂದ ಬಂದು ಬೇನಾಳ ಗ್ರಾಮ ಹಾಗೂ ಚಿಮ್ಮಲಗಿ ಗಣಿ ಮುಂತಾದ ಗ್ರಾಮಗಳಿಗೆ KA 29 A 7515 ನಂಬರ್ ನ ಆಟೋದಲ್ಲಿ ದಿನಾಲೂ ಗ್ರಾಮದ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪುರೈಕೆ ಮಾಡುತ್ತಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಭ್ರಷ್ಟರ ಬೇಟೆ ಪತ್ರಿಕೆಯ ವರದಿಗಾರರು ಇಂದು ಮುಂಜಾನೆ ಅಕ್ರಮವಾಗಿ ಮದ್ಯಪೂರಕ್ಕೆ ಮಾಡುತ್ತಿರುವ ಆಟೋವನ್ನು ಹಿಡಿದು ಪ್ರಶ್ನಿಸಿರುತ್ತಾರೆ. ಆತ ನನಗೆ ಲೈಸೆನ್ಸ್ ಕೊಟ್ಟಿದ್ದಾರೆ ನಾನು ಎಲ್ಲಾ ಕಡೆ ಪೂರೈಕೆ ಮಾಡಬಹುದು ಎಂದು ಹೇಳಿಕೊಂಡಿರುತ್ತಾನೆ. ಈ ರೀತಿ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪೂರೈಕೆ ಮಾಡಲು ಅನುಮತಿ ಕೊಟ್ಟವರು ಯಾರು?

ರಾಜಾರೋಷವಾಗಿ ನನಗೆ ಅನುಮತಿ ಕೊಟ್ಟಿದ್ದಾರೆ ನಾನು ಪೂರೈಕೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದರೆ ಇವನಿಗೆ ಇಷ್ಟು ಧೈರ್ಯ ಬರಲು ಅಧಿಕಾರಿಗಳೇ ಕಾರಣಾನಾ? ರಾಜ ರೋಷವಾಗಿ ಈ ರೀತಿ ಬೆಳಗಿನ ಹೊತ್ತೆ ಅಕ್ರಮ ಮದ್ಯವನ್ನು ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದರು ಸಹ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಏನೆನ್ನಬೇಕು? ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಿಟ್ಟು ಅಧಿಕಾರಿಗಳೇನು ಕಮಿಷನ್ ಲೆಕ್ಕ ಹಾಕುತ್ತಿದ್ದಾರಾ? ಅಥವಾ ನಮಗೇಕೆ ಎಂದು ನಿದ್ದೆ ಮಾಡುತ್ತಿದ್ದಾರಾ?

ಪ್ರತಿಯೊಂದು ಹಳ್ಳಿಗಳಿಗೆ ಈ ರೀತಿ ಮದ್ಯವನ್ನು ಪೂರೈಕೆ ಮಾಡಿದರೆ ಅಲ್ಲಿನ ಜನರು ಕುಡಿದು ಹಾಳಾಗಿ ಅವರ ಕುಟುಂಬ ಬೀದಿಗೆ ಬಂದರೆ ನೋಡುವವರು ಯಾರು?  ಬಾಗೇವಾಡಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ?

ವರದಿ: ಸಂಗಪ್ಪ ಚಲವಾದಿ

 

ಭ್ರಷ್ಟರ ಬೇಟೆ

Recent Posts

ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಕಳ್ಳತನ

ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ…

2 days ago

ಬಾಗಲಕೋಟೆ ನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬಾಗಲಕೋಟೆ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಸೇರಿದಂತೆ ಬಾಗಲಕೋಟೆಯಲ್ಲಿರುವ ಮನೆಯ…

1 week ago

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

3 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

3 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

4 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

1 month ago