Latest

ಮರವೂರು ರೈಲ್ವೇ ಸೇತುವೆ ಪಕ್ಕ ಅಕ್ರಮ ಮರಳುಗಾರಿಕೆ ದಾಳಿ: 150 ಮೆ.ಟನ್ ಮರಳು ವಶ

ಮಂಗಳೂರು: ಮರವೂರು ಪ್ರದೇಶದ ರೈಲ್ವೇ ಸೇತುವೆ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 150 ಮೆಟ್ರಿಕ್ ಟನ್ ಮರಳು ಹಾಗೂ ಟಿಪ್ಪರ್ ಸೇರಿ ಒಟ್ಟು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನಡೆದ ಈ ತಪಾಸಣೆಯ ವೇಳೆ ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದವರು ಅಧಿಕಾರಿಗಳನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ರೈಲ್ವೇ ಸೇತುವೆಯ ಕೆಳಭಾಗದಲ್ಲೇ ನಿಯಮ ಉಲ್ಲಂಘಿಸಿ ಮರಳು ಹೊರತೆಗೆಯಲಾಗುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳ ಪ್ರಕಾರ, ಸೇತುವೆಯ ಎರಡೂ ಭಾಗಗಳಿಂದ ತಲಾ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮರಳುಗಾರಿಕೆಗೆ ಅವಕಾಶವಿಲ್ಲ. ಆದರೂ ಈ ಮಿತಿ ಮೀರಿ ಮರಳು ಉಗ್ರಹಿಸಲಾಗುತ್ತಿತ್ತು.

ದಾಳಿ ಕಾರ್ಯಾಚರಣೆಯನ್ನು ಉಪನಿರ್ದೇಶಕಿ ಎಂ.ಸಿ. ಕೃಷ್ಣವೇಣಿ ಅವರ ಮಾರ್ಗದರ್ಶನದಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ್ದರು. ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

nazeer ahamad

Recent Posts

ವಿಲ್ಸನ್ ಗಾರ್ಡನ್‌ನಲ್ಲಿ ಆಯಂಬುಲೆನ್ಸ್ ದುರಂತ: ಬ್ರೇಕ್ ಫೇಲ್ ಪರಿಣಾಮ ತರಕಾರಿ ಅಂಗಡಿ ವ್ಯಾಪಾರಿ ಸಾವು

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ 9ನೇ ಮುಖ್ಯ ರಸ್ತೆಯಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆದ ಆಯಂಬುಲೆನ್ಸ್‍‌ವೊಂದು ತರಕಾರಿ…

7 hours ago

ತಲವಾರು ತೋರಿಸಿ ಬೆದರಿಕೆ: ಸುಹಾಸ್ ಶೆಟ್ಟಿ ಹತ್ಯೆಯ ನಂತರ ಮತ್ತೊಂದು ಆತಂಕಕಾರಿ ಘಟನೆ

ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ತಲವಾರು ತೋರಿಸಿ ಇಬ್ಬರು ನಾಗರಿಕರನ್ನು ಬೆದರಿಸಿರುವ ಘಟನೆ ವರದಿಯಾಗಿದೆ. ಸಂಘಪರಿವಾರದ ಕಾರ್ಯಕರ್ತ…

8 hours ago

ಇನ್‌ಸ್ಟಾಗ್ರಾಂ ಐಡಿ ಕೇಳಿ ಯುವತಿಗೆ ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳ: ಕಾಮುಕ ವಶಕ್ಕೆ”

ಬೆಂಗಳೂರು: ನಗರದ ಟಿ. ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ನಡು ರಸ್ತೆಯಲ್ಲೇ ಯುವತಿಯೊಬ್ಬರ ಕೈ ಹಿಡಿದು ಕಿರುಕುಳ ನೀಡಿದ ಯುವಕನ ವಿರುದ್ದ…

9 hours ago

ರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಬಾಂಬ್ ಬೆದರಿಕೆ: ಭದ್ರತಾ ಸನ್ನಾಹದಿಂದ ಆತಂಕ

ರಾಯಚೂರು: ಇತ್ತೀಚೆಗೆ ಉದ್ಘಾಟನೆಯಾದ ನೂತನ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದಿದೆ ಎಂಬ ಇಮೇಲ್ ಸಂದೇಶ one ಆತಂಕದ ವಾತಾವರಣ…

10 hours ago

ಅಕ್ರಮ ಮರಳು ಸಾಗಣೆ ವಿರೋಧಿಸಿ ಪ್ರಶ್ನೆಿಸಿದ ಯುವಕನಿಗೆ ಹಲ್ಲೆ: ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ದೂರು

ಉಡುಪಿ: ಅಕ್ರಮ ಮರಳು ಸಾಗಣೆಯನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್…

12 hours ago

ಪತ್ನಿಯ ಅನೈತಿಕ ಸಂಬಂಧ ಶಂಕೆ – ಆಕ್ರೋಶಿತ ಪತಿ ಇಬ್ಬರ ಹತ್ಯೆ ಮಾಡಿ ಪೊಲೀಸರಿಗೆ ಶರಣು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಮೇಲೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ವ್ಯಕ್ತಿಯೋರ್ವ ಆಕೆಯನ್ನೂ…

13 hours ago