ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದಲ್ಲಿ ಅಕ್ರಮ ಮರಳು ತೆಗೆಯುವ ಕಾರ್ಯ ಬೆಳಕಿಗೆ ಬಂದಿದ್ದು, ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪಂಚಗಂಗಾವಳಿ ನದಿಯಲ್ಲಿ ಪರವಾನಿಗೆ ಇಲ್ಲದೆ ಮರಳು ತೆಗೆಯಲಾಗುತ್ತಿತ್ತು ಎಂಬ ಮಾಹಿತಿ ಮೇರೆಗೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ್ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿತು. ನಾನಾ ಸಾಹೇಬ್ ರಸ್ತೆ ಕೊನೆ ಮತ್ತು ರಿಂಗ್ ರೋಡ್ ಸಮೀಪದ ನದಿತಟದಲ್ಲಿ ಈ ದಂಧೆ ನಡೆಯುತ್ತಿತ್ತು.
ದಾಳಿಯಲ್ಲಿ ಆರೋಪಿತ ಉದಯ ಮೆಂಡನ್ ಎಂಬಾತನು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನುಳಿದ ಮತ್ತೊಬ್ಬ ಆರೋಪಿ ಸುನಿಲ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಮರಳನ್ನು ದೋಣಿಯಲ್ಲಿ ತುಂಬಿ ಟಿಪ್ಪರ್ ವಾಹನದ ಮೂಲಕ ಸಾಗಾಟ ಮಾಡಲು ಯೋಜಿಸುತ್ತಿದ್ದರು.
ಪೊಲೀಸರು ಘಟನೆಯ ಸ್ಥಳದಿಂದ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ₹15,000 ಮೌಲ್ಯದ ಫೈಬರ್ ದೋಣಿ, ₹5,000 ಮೌಲ್ಯದ 1½ ಯುನಿಟ್ ಮರಳು, ಹಾಗೂ ₹5 ಲಕ್ಷ ಮೌಲ್ಯದ KA20 C6070 ಸಂಖ್ಯೆಯ ಟಿಪ್ಪರ್ ವಾಹನ ಸೇರಿವೆ. ಜೊತೆಗೆ ಕಬ್ಬಿಣದ ಹಾರೆ ಮತ್ತು ಫೈಬರ್ ಬುಟ್ಟಿಗಳು ಎರಡು ಸಹ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಸಿಕ್ಕಿಲ್ಲದ ಆರೋಪಿ ಸುನಿಲ್ ಬಗ್ಗೆ ಹುಡುಕಾಟ ಮುಂದುವರೆದಿದೆ.
ಬೆಂಗಳೂರು ನಗರದಲ್ಲಿ ನಕಲಿ ಸಿಗರೇಟು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ದುಬೈನಿಂದ ಅಕ್ರಮವಾಗಿ ಸಿಗರೇಟು ತರಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ…
ಕೋಲಾರ ಜಿಲ್ಲೆಯಲ್ಲಿ ಒಂಟಿ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿ, ಸುಮಾರು 9 ಲಕ್ಷ ರೂ. ಮೌಲ್ಯದ…
ಕಡಬ ತಾಲೂಕಿನ ಕೋಡಿಂಬಾಳದ ಕೋರಿಯಾರ್ ಸಮೀಪದ ರೈಲ್ವೇ ಟ್ರ್ಯಾಕ್ ಬಳಿ ಜೂನ್ 8ರಂದು ಮನಭಾರ ಹಾಕುವಂತಹ ದಾರుణ ಘಟನೆಯೊಂದು ನಡೆದಿದ್ದು,…
ರಾಜಸ್ಥಾನದ ರಾಮ್ಗಢ ಪ್ರದೇಶದಲ್ಲಿರುವ ಇಎಸ್ಐಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ 32 ವರ್ಷದ ಮಹಿಳೆಯೊಬ್ಬರು, ಚಿಕಿತ್ಸೆಗಾಗಿ ಐಸಿಯುವಿನಲ್ಲಿ ಇದ್ದ ವೇಳೆ,…
ಬೆಂಗಳೂರು ಮತ್ತು ಅದರ ಸುತ್ತಮುತ್ತ ನೈತಿಕ ಪೊಲೀಸ್ ಗಿರಿಯ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ರಾಮನಗರದಲ್ಲಿ ಮತ್ತೊಂದು ಇಂತಹ ಘಟನೆ ನಡೆದಿದೆ.…
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ…