ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳು ದಂಡ ವಿಧಿಸುತ್ತಿದ್ದ ಸಂದರ್ಭ, ಬೈಕ್ ಸವಾರನೊಬ್ಬ ಪೊಲೀಸರೊಂದಿಗೆ ಗದ್ದಲಗಟ್ಟಿದ ಘಟನೆ ನಡೆದಿದೆ. ಹೆಲ್ಮೆಟ್ ಧರಿಸದೇ ವಾಹನ ಓಡಿಸಿದ್ದ ಈ ವ್ಯಕ್ತಿ, ತನಗೆ ದಂಡ ವಿಧಿಸಲು ಅಧಿಕಾರವಿಲ್ಲ ಎಂದು ಧಿಕ್ಕರಿಸಿ ವಾದ ನಡೆಸಿದ್ದಾನೆ.

ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ. ಕೃಷ್ಣ ಅರಮನೆ ಹೋಟೆಲ್ ಸಮೀಪದ ಎಸ್.ಬಿ.ಐ ಬ್ಯಾಂಕ್ ಎದುರು ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ನವೀನ್ ಗೌಡ ಎಂಬ ವ್ಯಕ್ತಿ ಹೆಲ್ಮೆಟ್ ಇಲ್ಲದ ಸ್ಥಿತಿಯಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದನ್ನು ನೋಡಿ, ಪೊಲೀಸರೊಬ್ಬರು ವಾಹನವನ್ನು ನಿಲ್ಲಿಸಲು ಸೂಚಿಸಿದರು.

ಅದಕ್ಕೆ ನವೀನ್ ಗೌಡ ಪ್ರತಿಕ್ರಿಯಿಸುತ್ತಾ, “ಹೆಲ್ಮೆಟ್ ಹಾಕಲ್ಲ, ಫೈನ್ ಕೂಡಾ ಕಟ್ಟಲ್ಲ. ನಾನು ಇಚ್ಛೆಯಿಂದಲೇ ಹೆಲ್ಮೆಟ್ ಹಾಕದೆ ಬಂದಿದ್ದೀನಿ. ಯಾರನ್ನೂ ಬೇಕಾದ್ರೂ ಕರೆಸಿಕೊಳ್ಳಿ,” ಎಂದು ಉಗ್ರವಾಗಿ ಹೇಳಿದ್ದಾನೆ. ಅಲ್ಲದೆ, “ನಾನು ಈ ಏರಿಯಾದ ಜೆಡಿಎಸ್ ಅಧ್ಯಕ್ಷ, ನೀವು ಏನು ದೌರ್ಜನ್ಯ ಮಾಡ್ತಾ ಇರಾ?” ಎಂದು ಪ್ರಶ್ನೆ ಮಾಡಿದಂತೂ ಪೊಲೀಸರ ಅಘಾತಕ್ಕೆ ಕಾರಣವಾಗಿದೆ.

ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ ನೀಡಿದ ಆರೋಪದ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ನವೀನ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಚಾರಿ ನಿಯಮ ಪಾಲನೆಗೆ ಪ್ರತಿರೋಧ ನೀಡಿದ ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರಿಗೆ ಶಿಸ್ತು ಪಾಲನೆ ಬಗ್ಗೆ ಸಕಾರಾತ್ಮಕ ಸಂದೇಶ ನೀಡುವ ಅಗತ್ಯವನ್ನು ಮತ್ತೊಮ್ಮೆ ಬೆಳಕಿಗೆ ತರುತ್ತಿದೆ.

Leave a Reply

Your email address will not be published. Required fields are marked *

error: Content is protected !!