ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ ತಾವರಗೇರಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತನು 47 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ 260 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನ ಪ್ರಕರಣವನ್ನು ಭೇದಿಸಿ,ಕಳ್ಳನನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಆರೋಪಿತನ ಪತ್ತೆಗಾಗಿ ಶ್ರೀ ಡಾ.ರಾಮ್ ಎಲ್ ಅರಸಿದ್ಧಿ,ಐಪಿಎಸ್ ಪೊಲೀಸ್ ಅಧೀಕ್ಷಕರು ಕೊಪ್ಪಳ,ಶ್ರೀ ಆರ್.ಹೇಮಂತಕುಮಾರ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ,ಶ್ರೀ ಸಿದ್ಧಲಿಂಗಪ್ಪಗೌಡ ಪಾಟೀಲ್ ಪೊಲೀಸ್ ಉಪಾಧಿಕ್ಷಕರು ಗಂಗಾವತಿ ಉಪ ವಿಭಾಗ ಹಾಗೂ ಶ್ರೀ ಯಶವಂತ ಬಿಸನಳ್ಳಿ ಸಿಪಿಐ ಕುಷ್ಟಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಶ್ರೀ ನಾಗರಾಜ ಕೊಟಗಿ ಪಿಎಸ್ಐ ತಾವರಗೇರಾ ಪೊಲೀಸ್ ಠಾಣೆ,ಶ್ರೀ ಈರಪ್ಪ ಎಎಸ್ಐ,ಶ್ರೀ ಬಸವರಾಜ್ ಹೆಚ್. ಸಿ,ಶ್ರೀ ಮಹಮ್ಮದ್ ರಫಿ ಹೆಚ್. ಸಿ,ಶ್ರೀ ಶರಣಪ್ಪ ಸಿಪಿಸಿ,ಶ್ರೀ ಯಮನಪ್ಪ ಸಿಪಿಸಿ,ಶ್ರೀ ಹನುಮಂತ ಸಿಪಿಸಿ,ಶ್ರೀ ಹನಮಗೌಡ ಸಿಪಿಸಿ,ವಾಹನ ಚಾಲಕರಾದ ಶ್ರೀ ತಿಪ್ಪಣ್ಣ ಎಪಿಸಿ,ತಾಂತ್ರಿಕ ವಿಭಾಗದ ಶ್ರೀ ಪ್ರಸಾದ್ ಎಪಿಸಿ ಹಾಗೂ ಶ್ರೀ ಮಂಜುನಾಥ್ ಎಪಿಸಿ ಇವರನ್ನೊಳಗೊಂಡು ತಂಡವನ್ನು ರಚಿಸಿ ಕಳ್ಳತನ ಮಾಡಿದ ಕಳ್ಳನ ಪತ್ತೆಗೆ ಬಲೆ ಬೀಸಿದ್ದರು.

ಪ್ರಕರಣ ಪತ್ತೆ ಕಾರ್ಯಕ್ಕೆ ನೇಮಕ ಮಾಡಿದ ತನಿಖಾ ತಂಡವು ಆರೋಪಿತನ ಸುಳಿವು ಕುರಿತು ಮಾಹಿತಿ ಸಂಗ್ರಹಿಸಿ ದಿನಾಂಕ 22-03-2025 ರಂದು ಆರೋಪಿ ತಾಹೀರ್ ಅಲಿ ಇರಾನಿ ತಂದೆ ಅಸದ ಅಲಿ ಎಸ್.ಎಂ.ವಯಸ್ಸು 52 ವರ್ಷ,ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು,ಗದಗ ನಗರದ ವಾರ್ಡ್ ನಂ -1 ಎಸ್.ಎಂ.ಕೃಷ್ಣ ನಗರದಲ್ಲಿ ವಾಸವಾಗಿದ್ದು,ಈತನನ್ನು ಪತ್ತೆ ಮಾಡಿ ಸದರಿಯವನಿಗೆ ವಿಚಾರಣೆಗೆ ಒಳಪಡಿಸಿ ಆರೋಪಿತನು ಕಳ್ಳತನ ಮಾಡಿರುವ ತಾವರಗೇರಾ ಪೊಲೀಸ್ ಠಾಣೆಯ ಎರಡು ಹಗಲು ಮನೆಗಳ್ಳತನ ಪತ್ತೆ ಮಾಡಿ ಆರೋಪಿತನ ತಾಬಾದಿಂದ ಒಟ್ಟು 47 ಗ್ರಾಂ ತೂಕದ ಬಂಗಾರದ ಒಡವೆಗಳು ಒಟ್ಟು ಅಂದಾಜು 3,80,000/- ಹಾಗೂ 260 ಗ್ರಾಂ ತೂಕದ ಬೆಳ್ಳಿ ಒಡವೆಗಳು ಅಂದಾಜು 23,400/- ಹೀಗೆ ಒಟ್ಟು 4,03,400/- ರೂಪಾಯಿ ಬೆಲೆ ಬಾಳುವ ಬಂಗಾರ ಹಾಗೂ ಬೆಳ್ಳಿ ಒಡವೆಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿರುತ್ತಾರೆ.

ತನಿಖಾ ತಂಡದ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆ ರವರು ಪ್ರಶಂಶಿಸಿ ಬಹುಮಾನ ಘೋಷಿಸಿರುತ್ತಾರೆ.

ವರದಿ:- ಮಣಿಕಂಠ. ಬಿ.

Related News

error: Content is protected !!