Latest

100 ದಿನ ಪೂರೈಸಿದ ಬೆನ್ನಲ್ಲೇ ಮುಂಬರುವ ಕೆಜಿಎಫ್ ಪಾರ್ಟ್ ಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಹೊರಹಾಕಿದ ಹೊಂಬಾಳೆ ಫಿಲಂಸ್.

ಕೆಜಿಎಫ್ ಚಿತ್ರ ಬಿಡುಗಡೆಯಾಗಿ ನೂರು ದಿನ ಪೂರೈಸಿದ್ದು, ಸಾಕಷ್ಟು ದಾಖಲೆಗಳನ್ನು ಬರೆದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರ ಮೂಲಕ ಭಾರತದ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್ ನೋಡಿದ ಸಾಕಷ್ಟು ಜನ ಕೆಜಿಎಫ್ ಚಾಪ್ಟರ್ 3 ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದರು. ಅಂತಹ ನಿರೀಕ್ಷೆಯಲ್ಲಿದ್ದವರಿಗೆ ಹಾಗೂ ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಹೊಂಬಾಳೆ ಫಿಲಮ್ಸ್ ದೊಡ್ಡ ಮಾಹಿತಿಯೊಂದನ್ನು ನೀಡಿದೆ. ಅದೇನೆಂದರೆ ನೂರು ದಿನ ಪೂರೈಸಿದ ಬೆನ್ನಲ್ಲೇ ಹೊಂಬಾಳೆ ಫಿಲಮ್ಸ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೆಜಿಎಫ್ ಚಾಪ್ಟರ್ 2 ನೂರು ದಿನ ಪೂರೈಸಿರುವ ಭಾಗ್ಯ 1 ವಿಡಿಯೋವನ್ನು ಹಾಕಿದ್ದು ಅದರಲ್ಲಿ ಕೆಜಿಎಫ್ ಚಿತ್ರ ನೂರು ದಿನ ಪೂರೈಸಿರುವ ಬಗ್ಗೆ ಹಾಗೂ ಕೆಜಿಎಫ್ ಚಾಪ್ಟರ್ ೨ ನಲ್ಲಿರುವ ಕೆಲವು ತುಣುಕುಗಳನ್ನು ಹಾಕಿದೆ. ಇದೆ ವೀಡಿಯೊದಲ್ಲಿ ಕೊನೆಯಲ್ಲಿ ಇದು ಇನ್ನೂ ಆರಂಭವೆಂದು ಬರೆದಿದೆ. ಅಂದರೆ ಇದರ ಅರ್ಥ ಕೆಜಿಎಫ್ ಚಾಪ್ಟರ್ ಗಳು ಇಲ್ಲಿಗೆ ಮುಗಿದಿಲ್ಲ ಇನ್ನೂ ಮುಂದೆ ಸಾಕಷ್ಟಿವೆ ಎಂದು ಊಹಿಸಬಹುದು. ಕೆಜಿಎಫ್ ಚಿತ್ರದ 2 ಭಾಗಗಳು ಈಗಾಗಲೇ ಬಿಡುಗಡೆ ಆಗಿ ಒಳ್ಳೆ ಕಲೆಕ್ಷನ್ ಗಳನ್ನು ಸಹ ಮಾಡಿದೆ. ಬಿಡುಗಡೆಯಾಗಿರುವ 2 ಭಾಗಗಳು ಇನ್ನೂ ಆರಂಭ ಮಾತ್ರ ಇನ್ನು ಮುಂದೆ ನೋಡುವುದು ಸಾಕಷ್ಟು ಬಾಕಿ ಇದೆ ಎಂಬ ಅರ್ಥದಲ್ಲಿ ಕೆಜಿಎಫ್ ಚಿತ್ರ ಚಿತ್ರದ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಹೊಂಬಾಳೆ ಫಿಲಮ್ಸ್ ಈ ರೀತಿಯ ದೊಡ್ಡ ಸಂದೇಶವನ್ನು ಕೊಡುವ ಮೂಲಕ ಎಲ್ಲರಲ್ಲಿ ಸಂತಸವನ್ನು ತಂದಿದೆ. ಕೆಜಿಎಫ್ ಚಿತ್ರದ ಇನ್ನೂ ಎಷ್ಟು ಭಾಗಗಳಿವೆ ಹಾಗೂ ಯಾವಾಗ ಬಿಡುಗಡೆಯಾಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಹೊರಹಾಕುವ ಸಾಧ್ಯತೆಯಿದೆ. ಸದ್ಯದ ಮಟ್ಟಿಗೆ ಅಭಿಮಾನಿಗಳು ಕೆಜಿಎಫ್ ನ ಇನ್ನೂ ಸಾಕಷ್ಟು ಪಾರ್ಟ್ ಗಳು ಬರುತ್ತವೆ ಎಂದು ಮಾತ್ರ ನಿರೀಕ್ಷಿಸಬಹುದು.

ಭ್ರಷ್ಟರ ಬೇಟೆ

Recent Posts

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

18 hours ago

ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಮೇಲೆ ಆರ್‌ಟಿಒ ದಾಳಿ: ₹3 ಕೋಟಿ ದಂಡ, ₹15 ಕೋಟಿ ಮೌಲ್ಯದ ವಾಹನ ವಶ

ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…

18 hours ago

ಕೆ.ಆರ್.ಪೇಟೆ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ ವ್ಯಕ್ತಿ ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…

19 hours ago

ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಮಹಿಳೆಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಪ್ರಕರಣ ದಾಖಲು

ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…

20 hours ago

ಪುತ್ತೂರಿನಲ್ಲಿ ಆತ್ಮಹತ್ಯೆ ಆಘಾತ: ಏಳು ತಿಂಗಳ ಗರ್ಭಿಣಿ ನೇಣುಬಿಗಿದುಕೊಂಡು ಜೀವವಿಡುವ ದುರ್ಘಟನೆ

ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…

21 hours ago

ಕೋಲಾರ್ ಎಸ್‌ಬಿಐ ಎಟಿಎಂ ದರೋಡೆ: ಕಳ್ಳರು ₹27 ಲಕ್ಷ ನಗದು ದೋಚಿ ಪರಾರಿ.!

ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…

1 day ago