ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಒಂದಿಷ್ಟು ಆಶ್ಚರ್ಯ ಮತ್ತು ಒಂದಿಷ್ಟು ಗೊಂದಲ ಮೂಡಿಸಿರುವ ವಿಚಿತ್ರ ಘಟನೆ ಒಂದು ಇದೀಗ ವೈರಲ್ ಆಗಿದೆ. ದೇವಾಲಯವೊಂದರಲ್ಲಿ ಶ್ರೀಕೃಷ್ಣನ ವಿಗ್ರಹದಿಂದ ಹೃದಯ ಬಡಿತದ ಶಬ್ದ ಕೇಳಿಸುತ್ತಿದೆ ಎಂಬ ಭಕ್ತನ ಅಚ್ಚರಿಯ ಹೇಳಿಕೆಯಿಂದ ಆರಂಭವಾದ ಘಟನೆ, ವೈದ್ಯರ ನಿರೀಕ್ಷಿತ ಆಗಮನದವರೆಗೆ ತಲುಪಿದೆ.
ವಿಡಿಯೊದಲ್ಲಿನ ದೃಶ್ಯಗಳನ್ನು ಗಮನಿಸಿದರೆ, ಶ್ರದ್ಧಾಭಕ್ತನೊಬ್ಬ ದೇವಾಲಯದ ಪೂಜಾ ಸಂದರ್ಭದಲ್ಲಿ ವಿಗ್ರಹದ ಹತ್ತಿರ ಹೋಗಿ “ಹೃದಯ ಬಡಿತದಂತದ್ದೊಂದು ಶಬ್ದ ಕೇಳಿಸುತ್ತಿದೆ” ಎಂದು ಹೇಳುತ್ತಾನೆ. ತಕ್ಷಣವೇ ಈ ವಿಷಯವು ಅಲ್ಲಿರುವ ಭಕ್ತರ ನಡುವೆ ಕುತೂಹಲ ಜಗಮೆತ್ತಿತು. ಇನ್ನು ವಿಷಯದ ಸತ್ಯಾಸತ್ಯತೆ ತಿಳಿಯಲು ವೈದ್ಯರೊಬ್ಬರನ್ನು ಸ್ಥಳಕ್ಕೆ ಆಹ್ವಾನಿಸಲಾಯಿತು.
ಡಾಕ್ಟರ್ ವಿಗ್ರಹದ ಹತ್ತಿರ ಹೋಗಿ ಸ್ಟೆತಸ್ಕೋಪ್ನ ಸಹಾಯದಿಂದ ವಿಗ್ರಹದ ಎದೆ ಭಾಗವನ್ನು ಪರೀಕ್ಷಿಸುತ್ತಿರುವ ದೃಶ್ಯ ವೀಡಿಯೊದಲ್ಲಿ ಕಂಡು ಬರುತ್ತದೆ. ಇನ್ನೊಬ್ಬ ವ್ಯಕ್ತಿಯು ಕೂಡ ಇದೇ ಕ್ರಮವನ್ನು ಅನುಸರಿಸುತ್ತಿರುವ ದೃಶ್ಯ ಪಕ್ಕದಲ್ಲಿಯೇ ಸೆರೆಹಿಡಿದಿದೆ.
ಈ ವಿಡಿಯೋ ಯಾವ ದೇವಾಲಯದದು, ಯಾವ ರಾಜ್ಯದಲ್ಲಿ ಸಂಭವಿಸಿದೆ, ಅಥವಾ ಯಾವ ದಿನಾಂಕದಲ್ಲಿ ಚಿತ್ರೀಕರಣವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಭಕ್ತರಿಗೆ ನಂಬಿಕೆಯ ಸಂಗತಿಯಾಗಿ ಕಂಡುಬರುತ್ತಿದ್ದರೆ, ಇನ್ನೊಂದೆಡೆ ಕೆಲವರು ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕಾದ ಸಂಗತಿಯೆಂದು ಗುರುತಿಸುತ್ತಿದ್ದಾರೆ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…