Latest

ಹೆಸರಿಗೆ ಮಾತ್ರ ಗ್ರೇಡ್-1 ಗ್ರಾಮ ಪಂಚಾಯಿತಿ; ಗ್ರಾಮಸ್ಥರ ಗೋಳಾಟ ಕೇಳುವವರಾರು?

ಬಾಗಲಕೋಟೆ: ಜಿಲ್ಲೆಯ ಗುಡೂರು ಗ್ರೇಡ್-1 ಗ್ರಾಮ ಪಂಚಾಯಿತಿಯಲ್ಲಿ ಸಮಯಕ್ಕೆ ಸರಿಯಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಯಾವ ಅಧಿಕಾರಿಗಳು ಬರುತ್ತಿಲ್ಲವೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
ಒಂದು ಗ್ರಾಮ ಪಂಚಾಯಿತಿ ಎಂದರೆ ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಸಲುವಾಗಿ ಗ್ರಾಮಸ್ಥರು ಬರುವುದು ಸಹಜ. ಆದರೆ ಈ ಕೆಲಸಗಳನ್ನು ಮಾಡಿಕೊಡಬೇಕಾದ ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಹಾಗೂ ಇನ್ನುಳಿದ ಕೆಲವು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಯಾರ ಹತ್ತಿರ ಹೋಗಿ ಗ್ರಾಮಸ್ಥರು ತಮ್ಮ ಕೆಲಸ, ಕಾರ್ಯಗಳನ್ನು ಮಾಡಿಸಬೇಕು ಎಂಬುದು ಇಲ್ಲಿ ಗ್ರಾಮಸ್ಥರಿಗೆ ಪ್ರಶ್ನೆಯಾಗಿದೆ?
ಅಷ್ಟೇ ಅಲ್ಲದೆ ಇಲ್ಲಿನ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಿ ಎಂದು ಕೇಳಿದರೆ ಎಲ್ಲಾ ಗ್ರಾಮಸ್ಥರಿಗೂ ಕೆಲಸ ಕೊಡಲು ಆಗುವುದಿಲ್ಲ ಎಂದು ಇಲ್ಲಿನ ಪಿಡಿಒ ಬಸವರಾಜ ರೇವಡಿ ದುರಹಂಕಾರದಿಂದ ಹೇಳುತ್ತಾನಂತೆ. ಆದರೆ ತಮಗೆ ಬೇಕಾದ ಕೆಲವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಾರೆಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಪಿಡಿಒ ಗೆ ಮನವಿ ಸಲ್ಲಿಸಿದ್ದಾರೆ.
ನಾವು ನಾನ್ ಗ್ರಾಕ್ಸೋ ಸಂಘಟನೆಯವರಾಗಿದ್ದು ನಮಗೆ ಐದು ತಿಂಗಳುಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಟ್ಟಿಲ್ಲ ಆದರೆ ಗ್ರಾಕ್ಸೋ ಸಂಘಟನೆಯವರಿಗೆ ಮಾತ್ರ ನಮ್ಮ ಮುಂದೆಯೇ ಕೆಲಸ ಕೊಟ್ಟಿದ್ದಾರೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ನಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಗ್ರಾಮಸ್ಥರ ಅಳಲನ್ನು ಕೇಳಬೇಕು ಎಂದು ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.

ವರದಿ: ವಿಶ್ವನಾಥ ಭಜಂತ್ರಿ

ಭ್ರಷ್ಟರ ಬೇಟೆ

Recent Posts

ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಗಲಾಟೆ – ಕಾಂಗ್ರೆಸ್ ಮುಖಂಡ ಧನಂಜಯ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ನಗರದ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಧನಂಜಯ್ ಸೇರಿದಂತೆ ಕೆಲವರ ವಿರುದ್ಧ…

4 hours ago

ಮಡಿಕೇರಿ ನಗರದಲ್ಲಿ ಆರ್ಥಿಕ ಸಂಕಷ್ಟದಿಂದ ವ್ಯಕ್ತಿಯೊಬ್ಬರ ಆತ್ಮಹತ್ಯೆ

ಮಡಿಕೇರಿ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದ ವ್ಯಕ್ತಿಯೊಬ್ಬರು ಗುಂಡು ಹೊಡೆದು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಘಟನೆ ಮಡಿಕೇರಿ ಕೋಟೆ…

5 hours ago

“ಪತ್ನಿಯ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸತ್ಯ ಬಹಿರಂಗ

ಬೆಳಗಾವಿ: ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ 33 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಅನಗೋಳದ ದುರ್ಗಾ…

5 hours ago

ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಪತ್ತೆ: ವಾರ್ಡನ್ ಕಿರುಕುಳಕ್ಕೆ ತೀವ್ರ ಆರೋಪ”

ಚಿಕ್ಕಬಳ್ಳಾಪುರ, ಮೇ 30: ತಿಪ್ಪೇನಹಳ್ಳಿಯ ಸಮೀಪದಲ್ಲಿರುವ ಮಕ್ಕಳ ಆಸರೆ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಇದೀಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ವಾರ್ಡನ್…

6 hours ago

ಐಪಿಎಲ್ ಟಿಕೆಟ್ ಕಳ್ಳ ವಹಿವಾಟು – ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳು ಅಮಾನತು

ಬೆಂಗಳೂರು ನಗರದಲ್ಲಿ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್‌ಗಳ ಅಕ್ರಮ ಮಾರಾಟ ಪ್ರಕರಣಕ್ಕೆ ತೊಡಗಿರುವ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳನ್ನು…

7 hours ago

ವಿಜಿಲೆನ್ಸ್ ದಾಳಿಯಿಂದ ಗಾಬರಿಗೊಂಡ ಎಂಜಿನಿಯರ್: 500 ರೂ. ಬಂಡಲ್​ಗಳನ್ನು ಕಿಟಕಿಯಿಂದ ಹೊರ ಎಸೆದ ಘಟನೆ

ಭುವನೇಶ್ವರ: ಒಡಿಶಾದಲ್ಲಿ ವಿಜಿಲೆನ್ಸ್ (ವಿಚಕ್ಷಣ) ಅಧಿಕಾರಿಗಳ ದಾಳಿಯಿಂದ ಭಯಭೀತರಾದ ಸರ್ಕಾರಿ ಎಂಜಿನಿಯರ್ ಒಬ್ಬರು ತಮ್ಮ ಮನೆಯಿಂದ ನಗದು ಬಂಡಲ್‌ಗಳನ್ನು ಕಿಟಕಿ…

9 hours ago