ಗುಜರಾತ್ನ ವಡೋದರಾದ ಸುರ್ಸಾಗರ್ ಸರೋವರದಲ್ಲಿ 111 ಅಡಿ ಎತ್ತರದ ಶಿವನ ಪ್ರತಿಮೆಯನ್ನು 12 ಕೋಟಿ ರೂಪಾಯಿ ಮೌಲ್ಯದ ಚಿನ್ನದಿಂದ ಮಾಡಲಾಗಿದೆ. ಈ ಮೂರ್ತಿ ನಿರ್ಮಾಣಕ್ಕಾಗಿ 17.5 ಕೆಜಿ ಚಿನ್ನ ಬಳಸಲಾಗಿದೆ.
ಮಂಜಲ್ಪುರ ಶಾಸಕ ಯೋಗೀಶ್ ಪಟೇಲ್ ನೇತೃತ್ವದಲ್ಲಿ ಸತ್ಯಂ, ಶಿವಂ, ಸುಂದರಂ ಸಮಿತಿ ಎಂಬ ಟ್ರಸ್ಟ್ ಈ ಬೃಹತ್ ಶಿವನ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಪ್ರತಿಮೆಯ ನಿರ್ಮಾಣ ಕಾರ್ಯ 1996 ರಲ್ಲಿ ಪ್ರಾರಂಭವಾಗಿ 2002 ರಲ್ಲಿ ಪೂರ್ಣಗೊಂಡಿತು. ಈ ವಿಗ್ರಹ ಆಗ ತಾಮ್ರದಿಂದ ಮಾಡಲ್ಪಟ್ಟಿತ್ತು. ನಂತರ, ಸ್ವರ್ಣ ಸಂಕಲ್ಪ ಪ್ರತಿಷ್ಠಾನವು ಪ್ರತಿಮೆಗೆ ಚಿನ್ನದ ಲೇಪನ ಮಾಡಲು ನಿರ್ಧರಿಸಿತು. ಅಂತಿಮವಾಗಿ ದೇವಾದಿದೇವನ ವಿಗ್ರಹ ಇದೀಗ ಸ್ವರ್ಣಲೇಪನದಲ್ಲಿದೆ. ಸ್ವರ್ಣ ಲೇಪನಕ್ಕೆ ಅಗತ್ಯ ಹಣ ನೀಡಲು ಜನರು ಮುಂದೆ ಬಂದು ಸತ್ಯಂ, ಶಿವಂ, ಸುಂದರಂ ಸಮಿತಿ ಟ್ರಸ್ಟ್ ಗೆ ದೇಣಿಗೆ ರೂಪದಲ್ಲಿ ನೆರವು ನೀಡಿದರು. ಹೀಗಾಗಿ 17.5 ಕೆಜಿ ಚಿನ್ನವನ್ನು ಚಿನ್ನದ ಲೇಪನಕ್ಕೆ ಬಳಸಲಾಗಿದ್ದು, 12 ಕೋಟಿ ರೂಪಾಯಿ ವೆಚ್ಚವಾಗಿದೆ.
ವಡೋದರದಲ್ಲಿ ಶಿವನ ವಾರ್ಷಿಕ ಮೆರವಣಿಗೆಯು ಸುರ್ಸಾಗರ್ ಬಳಿ ಕೊನೆಗೊಳ್ಳುತ್ತದೆ. ನಂತರ ವಿಗ್ರಹದ ಬಳಿ ಆರತಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರವರು 111 ಅಡಿ ಚಿನ್ನದ ಲೇಪಿತ ಶಿವನ ಪ್ರತಿಮೆಯನ್ನು ವಡೋದರಾಕ್ಕೆ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅಧಿಕೃತವಾಗಿ ಸಮರ್ಪಿಸಲಿದ್ದಾರೆ. ವಡೋದರಾ ನಗರದ ಜನರು ಈ ಹಬ್ಬಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಶಿವನ ಮೂರ್ತಿ ಅನಾವರಣಕ್ಕೆ ಜನಸಾಗರವೇ ಹರಿದು ಬರಲಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…