Latest

ಸಿಸಿಬಿ ಪೋಲೀಸರಿಂದ ಜೂಜಾಡುತ್ತಿದ್ದವರ ಮೇಲೆ ದಾಳಿ; ೩೨ ಜನರ ಬಂಧನ, ರೂ 17,24,000 ಹಣ ವಶ.

ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೯/೧೦/೨೦೨೨ ರಂದು ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹುಣಸೂರು ಮುಖ್ಯರಸ್ತೆ, ಆದಿತ್ಯಾ ಬಡಾವಣೆಯಲ್ಲಿರುವ ಯಶಸ್ವಿನಿ ಚೌಲ್ಟಿç ಬಳಿ ಇರುವ ಆಟೋಗ್ಯಾರೇಜ್ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವನ್ನಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ವೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ, ಇಸ್ವೀಟ್ ಜೂಜಾಟದಲ್ಲಿ ತೊಡಗಿದ್ದ ೩೨ ಜನರನ್ನು ವಶಕ್ಕೆ ಪಡೆದು, ಪಣವಾಗಿದ್ದ ಇಟ್ಟಿದ್ದ ರೂ ೧೭, ೨೪,೦೦೦/- ನಗದು ಹಣ, ಹಣ ಎಣಿಕೆ ಮಾಡಲು ಉಪಯೋಗಿಸಿದ್ದ ಯಂತ್ರ ಹಾಗೂ ಜೂಜಾಟಕ್ಕೆ ಬಳಸಿದ್ದ ೫೨ ಇಸ್ವೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಈ ಸಂಬAಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ ಸಿ.ಕೆ. ಅಶ್ವಥನಾರಾಯಣ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಶೇಖರ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಸಲೀಂಖಾನ್, ರಾಮಸ್ವಾಮಿ, ಲಕ್ಷಿö್ಮÃಕಾಂತ.ಪಿ.ಎನ್, ಆನಂದ, ಯಾಕೂಬ್ ಷರೀಫ್, ಪವನ್, ನಬೀಪಟೇಲ್, ಮಹೇಶ್, ಚಂದ್ರಶೇಖರ್, ಗೌತಮ್ ರವರುಗಳು ಮಾಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಕೋಲಾರ್ ಹೃದಯವಿದ್ರಾವಕ ಘಟನೆ: ವೃದ್ಧೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪಿ ಬಂಧನ

ಕೋಲಾರ್: ರಾಜ್ಯದಾದ್ಯಂತ ಹತಾಶೆ ಮೂಡಿಸಿದ್ದ ಶ್ರೀನಿವಾಸಪುರ ವೃದ್ಧೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿದ್ದ ಪೊಲೀಸರು ಇದೀಗ…

5 minutes ago

ಚಿಕ್ಕಬಳ್ಳಾಪುರದಲ್ಲಿ ಭೀಕರ ಹತ್ಯೆ: ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ದುಷ್ಕರ್ಮಿಗಳು

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿಯಲ್ಲಿಂದು ಮುಂಜಾನೆ ಹೃದಯವಿದ್ರಾವಕ ಘಟನೆ ನಡೆಯಿದ್ದು, ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಯುವಕನನ್ನು ಹತ್ಯೆಗೈದಿದ್ದಾರೆ.…

48 minutes ago

ಹೋಂ ಗಾರ್ಡ್ ನೇಮಕಾತಿಗೆ ಲಂಚ: ರಾಯಚೂರಲ್ಲಿ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ”

ರಾಯಚೂರು: ಹೋಂ ಗಾರ್ಡ್ ನೇಮಕಾತಿಗೆ ಲಂಚ ಪಡೆಯುತ್ತಿದ್ದ ರಾಯಚೂರಿನ ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಅವರು ಲೋಕಾಯುಕ್ತದ ಜಾಲಕ್ಕೆ…

3 hours ago

ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬ್ದುಲ್ ರಜಾಕ್ ಬಂಧನ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಜ್ಪೆ…

16 hours ago

ಮಧುಗಿರಿಯಲ್ಲಿ ಬಾಲಕನ ಆತ್ಮಹತ್ಯೆ: ಅನಾರೋಗ್ಯ, ಪರೀಕ್ಷಾ ಫಲಿತಾಂಶದಿಂದ ಖಿನ್ನತೆ ಹಿನ್ನೆಲೆಯಲ್ಲಿ ದಾರುಣ ಘಟನೆ

ತುಮಕೂರು: ಅನಾರೋಗ್ಯ ಹಾಗೂ ಪರೀಕ್ಷಾ ಫಲಿತಾಂಶದಿಂದ ಖಿನ್ನತೆಗೆ ಒಳಗಾಗಿದ್ದ 19 ವರ್ಷದ ಬಾಲಕನು ಆತ್ಮಹತ್ಯೆಗೆ ಶರಣಾದ ಮರುಮನಸ್ಸು ಮಾಡಬಲ್ಲ ದುರ್ಘಟನೆ…

18 hours ago

ಲಂಚ ಪಡೆಯುವಾಗ ಜೆಸ್ಕಾಂ ಎಂಜಿನಿಯರ್ ಶೇಖರ್ ಅರೆಸ್ಟ್ : ಲೋಕಾಯುಕ್ತ ಪೊಲೀಸರ ದಾಳಿ

ಕಲಬುರಗಿಯಲ್ಲಿ ಮಂಗಳವಾರ ದಿನದ ಬೆಳಗ್ಗೆ ಮಹತ್ವದ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ಗ್ರಾಮೀಣ…

19 hours ago